ಅರಣ್ಯ ವಲಯಗಳ ಪ್ರವಾಸಿ ಕೇಂದ್ರಗಳಿಗೆ ಇನ್ನು ಏಕ ಮಂಡಳಿ

ಕಾಸರಗೋಡು: ಅರಣ್ಯ ವಲಯಗಳ ಎಲ್ಲಾ ಪ್ರವಾಸಿ ಕೇಂದ್ರಗಳು ಇನ್ನು ಏಕಮಂಡಳಿ ಆಶ್ರಯದಲ್ಲಿ ಕಾರ್ಯವೆಸಗಲಿವೆ. ಇದಕ್ಕಾಗಿ ರಾಜ್ಯ ಅರಣ್ಯ ಇಲಾಖೆಯ ಆಶ್ರಯದಲ್ಲಿ ‘ಕೇರಳ ವನ- ಇಕೋ ಟೂರಿಸಂ ಅಭಿವೃದ್ಧಿ ಮಂಡಳಿ’ಗೆ ರೂಪು ನೀಡಲಾಗುವುದು. ಇದಕ್ಕಾಗಿ ಕರಡು ಮಸೂದೆಗೆ ರೂಪು ನೀಡಲಾಗಿದ್ದು, ಅದು ಈಗ ಸಚಿವಸಂಪುಟದ ಪರಿಶೀಲನೆಯಲ್ಲಿದೆ. ಅರಣ್ಯ ಇಲಾಖೆಯ ಇಕೋ ಟೂರಿಸಂಗೆ ಸಂಬಂಧಪಟ್ಟ ಸಂಘಗಳು, ಹುಲಿ ಸಂರಕ್ಷಣಾ ಫೌಂಡೇಶನ್‌ಗಳು, ಅರಣ್ಯ ಅಭಿವೃದ್ಧಿ ಸಂಸ್ಥೆಗಳು ಮತ್ತು ಇಕೋ ಡೆವಲಪ್‌ಮೆಂಟ್ ಸಮಿತಿಗಳು ಇನ್ನು ಹೊಸ ಮಂಡಳಿಯಡಿ ಕಾರ್ಯವೆಸಗಲಿದೆ. ಆದರೆ ಆರ್ಥಿಕ ನಿಯಂತ್ರಣವಿರುವ …

ಅಸೌಖ್ಯದಿಂದ ಮಹಿಳೆ ನಿಧನ

ಉಪ್ಪಳ: ಶಿರಿಯ ವಾನಂದೆ ನಿವಾಸಿ ದಿ| ಸದಾಶಿವ ಶೆಟ್ಟಿ ಯವರ ಪತ್ನಿ ಸೀತಾ ಶೆಟ್ಟಿ [78] ಶನಿವಾರ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ಶಶಿಧರ ಶೆಟ್ಟಿ, ಸತೀಶ್ಚಂದ್ರ ಶೆಟ್ಟಿ, ದಯಾನಂದ ಶೆಟ್ಟಿ, ಸುಜಾತ ಶೆಟ್ಟಿ, ಸೊಸೆಯಂದಿರಾದ ರೂಪಕಲಾ ಶೆಟ್ಟಿ,ಆಶಾಲತಾ ಶೆಟ್ಟಿ, ಶಿಲ್ಪ ಶೆಟ್ಟಿ, ಸಹೋದರಿಯರಾದ ಲಕ್ಷ್ಮೀ, ಕಮಲ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಹಿರಿಯ ಗುರುಸ್ವಾಮಿ ನಿಧನ

ವರ್ಕಾಡಿ: ಹಿರಿಯ ಗುರುಸ್ವಾಮಿ, ಕೆಳಗಿನ ತಾಡ ನಿವಾಸಿ ಕೆ.ಪಿ. ರಾಮಯ್ಯ ನಾಯ್ಕ್ (80) ನಿಧನ ಹೊಂದಿದರು. ವರ್ಕಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಸುಂರದಕಟ್ಟೆ ಇದರ ಸ್ಥಾಪಕ ಸದಸ್ಯ, ಅಧ್ಯಕ್ಷ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜನಸಂಘ ಕಾಲದಿಂದಲೇ ಸಂಘಪರಿವಾರ ಕಾರ್ಯಕರ್ತ ರಾಗಿದ್ದು, ಪ್ರಸ್ತುತ ಬಿಜೆಪಿ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಪದ್ಮಾವತಿ, ಪುತ್ರಿ ದಾಕ್ಷಾಯಿಣಿ, ಅಳಿಯ ಸಚ್ಚಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಗೋಪಿನಾಥ್ ಮೊರತ್ತಣೆ, ಪಂ. ಸದಸ್ಯ ರಾಜ್‌ಕುಮಾರ್ …

ಜೂಜಾಟ: ಐದು ಮಂದಿ ಸೆರೆ

ಕಾಸರಗೋಡು:  ಬಟ್ಟತ್ತೂರು ಕೋಟಪ್ಪಾರ ರಸ್ತೆ ಬಳಿ ಸಾರ್ವಜನಿಕ ಪ್ರದೇಶದಲ್ಲಿ ಹಣವಿರಿಸಿ ಜೂಜಾಟ ದಲ್ಲಿ ನಿರತರಾದ ಆರೋಪದಂತೆ ಐದು ಮಂದಿಯನ್ನು ಎಸ್‌ಐ ಎಂ. ಸವ್ಯಸಾಚಿಯವರ ನೇತೃತ್ವದ ಬೇಕಲ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ 2,510 ರೂ. ನಗದು ವಶಪಡಿಸಿಕೊಂ ಡಿದ್ದಾರೆ. ಪನೆಯಾಲ ನಿವಾಸಿಗಳಾದ ಗುರುವಯ್ಯ (52), ರಾಮಚಂದ್ರನ್ (65), ಸುಬ್ರಾಯ (65), ಪ್ರಭಾಕರನ್ (70) ಮತ್ತು ಪದ್ಮನಾಭನ್ (72) ಬಂಧಿತರಾದವರಾಗಿದ್ದಾರೆ.

ಗಡಿನಾಡ ಕಲಾವಿದರು ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ಗಡಿನಾಡ ಕಲಾವಿದರು ಕಾಸರಗೋಡು ಇದರ ವಾರ್ಷಿಕ ಮಹಾಸಭೆ ಜರಗಿತು. ವರಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸುಕುಮಾರ್ ಕೆ. ಕಣ್ಣನ್ ವರದಿ ಮಂಡಿಸಿದರು. ಕೋಶಾಧಿಕಾರಿ ಶ್ರೀಕಾಂತ ಲೆಕ್ಕಪತ್ರ ಮಂಡಿಸಿದರು. ಹಿರಿಯ ನಾಟಕ ಕಲಾವಿದ ಸುರಾಜ್ ಮಾವಿಲರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಸುಕುಮಾರ್ ಕೆ. ಕಣ್ಣನ್, ಅಧ್ಯಕ್ಷರಾಗಿ ವರಪ್ರಸಾದ್ ಕೋಟೆಕಣಿ, ಉಪಾಧ್ಯಕ್ಷರಾಗಿ ದಿವಾಕರ ಅಶೋಕನಗರ, ಪ್ರಧಾನ ಕಾರ್ಯದರ್ಶಿಯಾಗಿ ಉದಯ ಕುಮಾರದಾರ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಬೇಕಲ್, ಕೋಶಾಧಿಕಾರಿಯಾಗಿ ಜಯಶ್ರೀ ದಿವಾಕರ, ಸಂಚಾಲಕರಾಗಿ …

ಮನೆಯೊಡೆಯ ಸ್ವತಃ ಗುಂಡು ಹಾರಿಸಿಕೊಂಡು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಪಿಸ್ತೂಲು ಪೊಲೀಸ್ ವಶಕ್ಕೆ

ಮಂಜೇಶ್ವರ: ವ್ಯಕ್ತಿಯೊಬ್ಬರು ಸ್ವತಃ ಎದೆಗೆ ಗುಂಡಿಕ್ಕಿಕೊಂಡು ಸಾವಿಗೀಡಾದ ಘಟನೆ ನಡೆದಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯಪದವು ಮದಂಗಲ್ಲು ನಿವಾಸಿ ಸುಬ್ಬಣ್ಣ ಭಟ್ (86) ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ೨ ಗಂಟೆಗೆ ನಾಡನ್ನು ಬೆಚ್ಚಿ ಬೀಳಿಸಿದ ಈ ದಾರುಣ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ಊಟದ ಬಳಿಕ  ಮಾತ್ರೆ ಸೇವಿಸಲು ನೀರು ತರುವಂತೆ ಸುಬ್ಬಣ್ಣ ಭಟ್ ಪತ್ನಿ ರಾಜಮ್ಮಾಳ್‌ರಲ್ಲಿ ತಿಳಿಸಿದ್ದರೆನ್ನಲಾಗಿದೆ. ಇದರಂತೆ  ಪತ್ನಿ ನೀರು ತರಲು ಅಡುಗೆ ಕೋಣೆಗೆ ಹೋದ ಸಂದರ್ಭದಲ್ಲಿ ಸುಬ್ಬಣ್ಣ ಭಟ್ ಇದ್ದ …

ಮನೆ ಬಳಿಯ ಬಾವಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಮಂಜೇಶ್ವರ: ಮನೆಯಿಂದ ನಾಪತ್ತೆಯಾದ ಮಹಿಳೆಯ ಮೃತದೇಹ ಬಾವಿಯಲ್ಲಿಪತ್ತೆಯಾದ ಘಟನೆ ನಡೆದಿದೆ. ಮೀಂಜ ಪಂಚಾಯತ್ ವ್ಯಾಪ್ತಿಯ ಮೀಯಪದವು ಅಡ್ಕತ್ತಗುರಿ ನಿವಾಸಿ ರೋಕಿ ಡಿ ಸೋಜಾರ ಪತ್ನಿ ಐರಿನಾ ಡಿ ಸೋಜಾ [60] ಎಂಬವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಗುರುವಾರ ಬೆಳಿಗ್ಗೆ ತನಕ ಮನೆಯಲ್ಲಿದ್ದ ಇವರು ಬಳಿಕ ನಾಪತ್ತೆಯಾಗಿದ್ದರು. ಹುಡುಕಾಡಿದಾಗ 8.30ರ ವೇಳೆ ಮನೆ ಪರಿಸರದ ಬಾವಿಯಲ್ಲಿ ಮೃತದೇಹ ಕಂಡುಬAದಿದೆ. ಉಪ್ಪಳದಿಂದ ಅಗ್ನಿ ಶಾಮಕ ದಳ ತಲುಪಿ ಮೃತದೇಹವನ್ನು ಮೇಲೆತ್ತಲಾಗಿದೆ. ಮಂಜೇಶ್ವರ ಪೊಲೀಸರು ತಲುಪಿ ಪಂಚನಾಮೆ ನಡೆಸಿದ್ದಾರೆ. ಕಾಸರಗೋಡು ಜನರಲ್ …

ಉದ್ವಿಗ್ನತೆಯ ಮಂಜು ಕರಗತೊಡಗಿದೆಯೇ?: ಮೋದಿ ಅದ್ಭುತ, ಉತ್ತಮ ಪ್ರಧಾನಿ; ಅವರು ಎಂದೂ ನನ್ನ ಆಪ್ತ ಸ್ನೇಹಿತ-ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ  ಸುಂಕ ಸಮರದ ಹೆಸರಲ್ಲಿ ಉದ್ವಿಗ್ನತೆಯ ವಾತಾವರಣ ನೆಲೆಗೊಂಡಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮತ್ತು ಪ್ರಧಾನಿ ಮೋದಿಯ ವರ ಬಗ್ಗೆ ತಳೆದಿದ್ದ ನಿಲುವಿನಿಂದ ಉಲ್ಟಾ ಹೊಡೆಯತೊಡಗಿದ್ದಾರೆ. ಭಾರತದ ಪ್ರಧಾನಿ ನರೇಂದ್ರಮೋದಿ ಓರ್ವ ಅದ್ಭುತ ಹಾಗೂ ಉತ್ತಮ ಪ್ರಧಾನಿಯಾಗಿದ್ದಾರೆ. ಮಾತ್ರವಲ್ಲ ಅವರು ನನ್ನ ಉತ್ತಮ ಸ್ನೇಹಿತರೂ ಆಗಿದ್ದಾರೆ. ನಮ್ಮ ಈ ಸ್ನೇಹವು ಯಾವಾಗಲೂ ಶಾಶ್ವತವಾಗಿದೆ ಎಂದು ಟ್ರಂಪ್ ಹೇಳಿಕೆ ನೀಡಿದ್ದು ಇದು ಸುಂಕ ಸಮರದ ಹೆಸರಲ್ಲಿ ಭಾರತ ಮತ್ತು …

ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ವಿದ್ಯಾರ್ಥಿ ಮೃತಪಟ್ಟನು. ಸಹ ಸವಾರ ಗೆಳೆಯ ಗಾಯಗೊಂಡಿದ್ದಾನೆ. ಬೇಡಡ್ಕ ನಿವಾಸಿ ಸಿ. ಕೌಶಿಕ್‌ನಾಥ್ (19) ಮೃತಪಟ್ಟ ವಿದ್ಯಾರ್ಥಿ. ಗೆಳೆಯ ಕೈಲಾಸ್ ಗಾಯಗೊಂಡಿದ್ದಾನೆ. ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಪೊಯಿನಾಚಿ- ಕುಂಡಂಗುಳಿ ರಸ್ತೆಯ ಪರಂಬ್‌ನಲ್ಲಿ ಅಪಘಾತ ಸಂಭವಿಸಿದೆ. ಚೆರ್ಕಳ ದಲ್ಲಿರುವ ಗೆಳೆಯನ ಮನೆಗೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದರಾದರೂ ಕೌಶಿಕ್ ಮೃತಪಟ್ಟಿದ್ದಾನೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ಸ್ಕೂಟರ್ ಚಲಾಯಿಸುತ್ತಿದ್ದ ಮಧ್ಯೆ …

ಪುತ್ರಿ, ಸಂಬಂಧಿಕನ ಮಗಳ ಮೇಲೆ ಆಸಿಡ್ ದಾಳಿ: ತಲೆಮರೆಸಿಕೊಂಡ ವ್ಯಕ್ತಿಗಾಗಿ ಶೋಧ

ಕಾಸರಗೋಡು: 17ರ ಹರೆಯದ ಸ್ವಂತ ಪುತ್ರಿ ಹಾಗೂ ಸಹೋದರನ 10 ವರ್ಷದ ಪುತ್ರಿಯ ಮೇಲೆ ವ್ಯಕ್ತಿಯೋರ್ವ ಆಸಿಡ್ ದಾಳಿ ನಡೆಸಿದ ಘಟನೆ ನಡೆದಿದೆ. ಘಟನೆ ಬಳಿಕ ತಲೆಮರೆಸಿಕೊಂಡ ಕರ್ನಾಟಕದ ಕರಿಕೆ ನಿವಾಸಿಯಾದ ಮನೋಜ್ ಎಂಬಾತನ ಪತ್ತೆಗಾಗಿ ರಾಜಪುರಂ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪನತ್ತಡಿ ಪಾರ ಕ್ಕಡವ್ ಎಂಬಲ್ಲಿನ ಸಂಬಂಧಿಕರ ಮನೆಯಲ್ಲಿ ಮನೋಜ್‌ನ ಮಗಳು ವಾಸಿಸುತ್ತಿದ್ದಳು. ಮನೋಜ್ ಪತ್ನಿಯೊಂದಿಗೆ ಸಿಟ್ಟುಗೊಂಡು ಬೇರೆಯೇ ವಾಸಿಸುತ್ತಿದ್ದಾನೆನ್ನಲಾಗಿದೆ. ಪತ್ನಿ ಹಾಗೂ ಮಗಳು ಸಹೋದರನ ಮನೆಯಲ್ಲಿರುವುದನ್ನು ತಿಳಿದು ನಿನ್ನೆ ಅಲ್ಲಿಗೆ ತಲುಪಿದ ಮನೋಜ್ ಅವರ …