ಯುವಕ ನಾಪತ್ತೆ: ಬೈಕ್ ಹೊಳೆ ಬಳಿ ಪತ್ತೆ, ವ್ಯಾಪಕ ಶೋಧ

ಕಾಸರಗೋಡು: ಯುವಕನೋರ್ವ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದ್ದು, ಇದೇ ಸಂದರ್ಭದಲ್ಲಿ ಆತನ ಬೈಕ್ ಹೊಳೆ ಬಳಿ ಪತ್ತೆಯಾಗಿದೆ. ಕೋಡೋಂ ಗ್ರಾಮ ಕರಿಯಂವಳಪ್ಪಿನ ಬಾಲಕೃಷ್ಣನ್ ಎಂಬವರ ಪುತ್ರ, ಪೊಯಿನಾಚಿಯ ವಾಹನ ಶೋರೂಂ ಸಿಬ್ಬಂದಿ ಸಜಿತ್‌ಲಾಲ್ (26) ನಾಪತ್ತೆಯಾದ ಯುವಕ. ಇವರು ಮೊನ್ನೆ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಕೆಲಸ ಮಾಡುವ ಕಚೇರಿಗೆ ಹೋಗಿದ್ದು ನಂತರ ಅವರು ಮನೆಗೆ ಹಿಂತಿರುಗಿಲ್ಲ ವೆಂದು  ರಾಜಪುರಂ ಪೊಲೀಸ್ ಠಾಣೆಗೆ ಮನೆಯವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಗೊಳ ಪಟ್ಟ …

ಸಾಮಾಜಿಕ ಕಾರ್ಯಕರ್ತ ಉಬೈದುಲ್ಲಾ ಕಡವತ್ ನಿಧನ

ಕಾಸರಗೋಡು: ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕಾರ್ಯಕರ್ತ ಮೇಲ್ಪರಂಬ ಕಡವತ್ ನಿವಾಸಿ ಹಾಗೂ ನೆಲ್ಲಿಕುಂಜೆ ಬಂಗರಗುಡ್ಡೆ ಕುದೂರಿನಲ್ಲಿ ವಾಸಿಸುತ್ತಿದ್ದ ಉಬೈದುಲ್ಲಾ ಕಡವತ್ (63) ನಿಧನಹೊಂದಿದರು. ನೆಬಿ ದಿನ ಕಾರ್ಯಕ್ರಮದಲ್ಲಿ  ಭಾಗವಹಿಸಲು ನೆಲ್ಲಿಕುಂಜೆ ಮುಹಿಯುದ್ದೀನ್ ಮಸೀದಿಗೆ ಹೋಗಿದ್ದ ಇವರಿಗೆ ದೈಹಿಕ ಅಸ್ವಸ್ಥತೆ  ಕಂಡುಬಂದಿದ್ದು, ಇದರಿಂದ ಇವರನ್ನು  ಮನೆಗೆ ತಲುಪಿಸಲಾಯಿತು. ಚೆಂಬರಿಕ ಖಾಸಿಯಾಗಿದ್ದ ಸಿ.ಎಂ. ಅಬ್ದುಲ್ಲ ಮೌಲವಿಯವರ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಹೋರಾಟ ನಡೆಸುವ ಸಮಿತಿಯ ಮುಂಚೂಣಿ ಕಾರ್ಯಕರ್ತನಾಗಿ ದ್ದರು. ಎನ್‌ಸಿಪಿ ಶರತ್ ಪವಾರ್ ವಿಭಾಗ ಕಾಸರಗೋಡು ಬ್ಲೋಕ್ ಮಾಜಿ …

ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ವ್ಯಕ್ತಿಗೆ ನೆರವಾಗಿ ಮಾನವೀಯತೆ ಮೆರೆದ ಕುಂಬಳೆ ಪೊಲೀಸರು

ಕುಂಬಳೆ: ಬಸ್ ನಿಲ್ದಾಣ ದಲ್ಲಿ ಬಿದ್ದು ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀ ಸರು ತಕ್ಷಣ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದರು. ನಿನ್ನೆ ಮಧ್ಯಾಹ್ನ ವೇಳೆ ಕುಂಬಳೆ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಬಿದ್ದಿರುವ ಬಗ್ಗೆ ಕುಂಬಳೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಇನ್‌ಸ್ಪೆಕ್ಟರ್  ಕೆ.ಪಿ. ಜಿಜೀಶ್‌ರ ನಿರ್ದೇಶದ ಮೇರೆಗೆ ಜನಮೈತ್ರಿ ಬೀಟ್ ಆಫೀಸರ್ ವಸಂತನ್, ಪೊಲೀಸರಾದ ಮಹೇಶ್, ಕಿಶೋರ್, ಚಾಲಕ ಜಾಬಿರ್ ಎಂಬಿವರು ತಕ್ಷಣ ಬಸ್ ನಿಲ್ದಾಣಕ್ಕೆ ತಲುಪಿದಾಗ ವ್ಯಕ್ತಿ ಬಿದ್ದಿರುವುದು ಕಂಡುಬಂದಿದೆ. …

ದೈಹಿಕ ಸಾಮರ್ಥ್ಯ ಪರೀಕ್ಷೆ ವೇಳೆ ಜವಾನ ಕುಸಿದುಬಿದ್ದು ಸಾವು

ಕಾಸರಗೋಡು: ದೈಹಿಕ ಸಾಮರ್ಥ್ಯ ಪರೀಕ್ಷೆಯ ವೇಳೆ ಕಾಸರಗೋಡು ನಿವಾಸಿಯಾದ ಭಾರತೀಯ ಸೇನಾ ಜವಾನ ದಿಢೀರ್ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ವೆಳ್ಳರಿಕುಂಡ್ ಪನ್ನಿತ್ತಡ ನಿವಾಸಿ ಅರುಣ್‌ರಾಮಕೃಷ್ಣನ್ (38) ಸಾವನ್ನಪ್ಪಿದ ಯುವಕ. ದೆಹಲಿಯಲ್ಲ್ಲಿರುವ ಭಾರತೀಯ ಸೇನೆಯ  ಪ್ರಧಾನ ಕಚೇರಿಯಲ್ಲಿ ಸಿಗ್ನಲ್ ರೆಜಿಮೆಂಟ್  ಹವಲ್ದಾರ್ ಆಗಿ ಸೇವೆ ಸಲ್ಲಸುತ್ತಿದ್ದ ಅರುಣ್ ರಾಮಕೃಷ್ಣನ್  ಅಲ್ಲಿ ಬೆಳಿಗ್ಗೆ ಬೆಟಾಲಿಯನ್ ಫಿಸಿಕಲ್ ಎಲಿಜಿಬಿಲಿಟಿ ಟೆಸ್ಟ್ ಬಿಪಿಇಟಿ (ದೈಹಿಕ ಸಾಮರ್ಥ್ಯ ಪರೀಕ್ಷೆ) ಗೊಳಪಡುತ್ತಿದ್ದ ವೇಳೆ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ …

ಕಾಸರಗೋಡು ಶ್ರೀ ಗಣೇಶೋತ್ಸವ: ಹಿಂದೂ ಸಮಾಜ ಹರಿಯುವ ನೀರಾಗಬೇಕು- ತನ್ಮಯ್ ಪ್ರೇಮ್ ಕುಮಾರ್

ಕಾಸರಗೋಡು: ಹಿಂದೂ ಸಮಾಜವು ಎಂದೂ ನಿಂತ ನೀರಾಗಬಾರದು, ಬದಲಾಗಿ ಹರಿಯುವ ನೀರಾಗಬೇಕು ಎಂದು ಖ್ಯಾತವಾಗ್ಮಿ ತನ್ಮಯ್ ಪ್ರೇಮ್ ಕುಮಾರ್ ಚಿಕ್ಕಮಗಳೂರು  ಹೇಳಿದ್ದಾರೆ. ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಪ್ತತಿ ಮಹೋತ್ಸವದಂಗ ವಾಗಿ ನಿನ್ನೆ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಪ್ರಧಾನ ಭಾಷಣ ಮಾಡಿದರು. ನಮ್ಮ ಮನೆಗಳಲ್ಲಿ ಹಿಂದುತ್ವದ ಬಗ್ಗೆ ಶೃದ್ಧೆಯಿಂದ ಕಲಿಯುವುದನ್ನು ನಾವು ಮರೆಯುತ್ತಿದ್ದೇವೆ. ನಾವು ಇಂದು ನಮ್ಮ ಧರ್ಮದ ಬಗ್ಗೆ ಬೋಧನೆ ಮಾಡುತ್ತಿದ್ದೇವೆ, ಆದರೆ ಆಚರಣೆ ಕಡಿಮೆಯಾಗುತ್ತಿದೆ. ಮುಂದಿನ ತಲೆಮಾರಿಗೆ ಹಿಂದುತ್ವದ ಬಗ್ಗೆ …

ವಿವಿಧ ಕಡೆಗಳಲ್ಲಿ ಸೌಹಾರ್ದತೆಯ, ಸಂಭ್ರಮದ ನಬಿ ದಿನಾಚರಣೆ

ಮಂಜೇಶ್ವರ: ಪ್ರವಾದಿ ಹಜರತ್ ಮುಹಮ್ಮದ್ ನಬಿ ಅವರ  ಜನ್ಮ ದಿನಾಚರಣೆಯಾದ ಈದ್ ಮಿಲಾದ್ ಉಲ್‌ನಬಿ ಆಚರಣೆ ವಿವಿಧ ಕಡೆಗಳಲ್ಲಿ ಸಂಭ್ರಮದಿಂದ ನಡೆಯಿತು. ಮಂಜೇಶ್ವರದಾದ್ಯಂತ ಮಸೀದಿಗಳಲ್ಲಿ ಮೌಲೂದ್ ಪಠನ, ಧಾರ್ಮಿಕ ಉಪ ನ್ಯಾಸಗಳು, ಪ್ರಾರ್ಥನೆ ಜರಗಿತು. ಬೀದಿ ಗಳಲ್ಲಿ ಮಕ್ಕಳು ಸಹಿತ ಪಾಲ್ಗೊಂಡ ಶೋಭಾಯಾತ್ರೆಗಳು ಜರಗಿತು. ಉದ್ಯಾವರ ಸಾವಿರ ಜಮಾಯತ್ ಜುಮಾ ಮಸೀದಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಾಯತ್ ಮದರೀಸ್ ಬಿ.ಎಂ. ಅಬ್ದುಲ್ ಖಾದರ್ ಮದನಿ ಪ್ರಾರ್ಥನೆ ನೆರವೇರಿಸಿದರು. ಅಧ್ಯಕ್ಷ ಸೈಫುಲ್ಲ ತಂಙಳ್ ಧ್ವಜಾರೋ ಹಣಗೈದರು. ಹಲವು ಪದಾಧಿಕಾರಿಗಳು …

ನಿವೃತ್ತ ಅಧ್ಯಾಪಿಕೆ ನಿಧನ

ಕುಂಬಳೆ: ಮೂಲತಃ  ಕುಂಬಳೆ ನಿವಾಸಿಯೂ, ಪ್ರಸ್ತುತ ಮಧೂರಿನಲ್ಲಿ ವಾಸಿಸುತ್ತಿದ್ದ ದಿ| ನಾರಾ ಯಣ ಎಂಬವರ ಪತ್ನಿ  ನಿವೃತ್ತ ಅಧ್ಯಾಪಿಕೆ ಶ್ಯಾಮಲಾ ಟೀಚರ್ (74) ನಿನ್ನೆ ಮಧ್ಯಾಹ್ನ ನಿಧನಹೊಂದಿದರು. ಮೃತರು ಮಕ್ಕಳಾದ ಜ್ಯೋತಿ, ಪ್ರೀತಿ, ಪ್ರಿಜಿತ್, ಸಹೋದರ ಜಯಕುಮಾರ್ ಕೃಷ್ಣನಗರ (ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ), ಸೊಸೆ, ಅಳಿಯಂದಿರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಗ್ನಿ ಫ್ರೆಂಡ್ಸ್ ಬದಿಯಡ್ಕದ ಆಂಬುಲೆನ್ಸ್ ಲೋಕಾರ್ಪಣೆ

ಬದಿಯಡ್ಕ: ಅಗ್ನಿ ಫ್ರೆಂಡ್ಸ್ ಬದಿಯಡ್ಕ ಇದರ ಆಶ್ರಯದಲ್ಲಿ ನೂತನ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ತಿರುವೋಣಂ ದಿನವಾದ ನಿನ್ನೆ ಬದಿಯಡ್ಕದಲ್ಲಿ ಜರಗಿತು. ಆರ್‌ಎಸ್‌ಎಸ್ ಬದಿಯಡ್ಕ ಖಂಡ ಸಂಘಚಾಲಕ್ ರಮೇಶ್ ಕಳೇರಿ ಉದ್ಘಾಟಿಸಿದರು. ಅಗ್ನಿ ಫ್ರೆಂಡ್ಸ್ ಅಧ್ಯಕ್ಷ ಅನಿಲ್ ಕುಟ್ಟನ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ಜಿಲ್ಲಾ ಕಾರ್ಯದರ್ಶಿ ಸುನಿಲ್ ಪಿ.ಆರ್, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ವಾಂತಿಚ್ಚಾಲು, ಹರೀಶ್ ನಾರಂಪಾಡಿ, ಹರೀಶ್ ಗೋಸಾಡ, ಹರಿಪ್ರಸಾದ್ ಪುತ್ರಕಳ, ವಿ. ಬಾಲಕೃಷ್ಣ …

ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಓಣಂ ಆಚರಣೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ಓಣಂ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಯಿತು. ಶಾಸಕ ಎನ್.ಎ. ನೆಲ್ಲಿಕುನ್ನು ಕಾರ್ಯಕ್ರಮ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತಾದ ಶಿವಾನಂದ ಕೋಟಿಯಾನ್ ಕಟಪಾಡಿ ಬರೆದ ಗುರುದರ್ಶನ ಕೃತಿನ್ನು ಇದೇ ಸಂದರ್ಭದಲ್ಲಿ ಶಾಸಕರು ಪ್ರದರ್ಶನಗೈದರು. ಹಿರಿಯ ಪೊಲೀಸ್ ಅಧಿಕಾರಿ ಡಾ. ವಿ. ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕರ್ನಾಟಕ ಕಾರ್ಯನಿರತ …

ಮುಹಿಮ್ಮಾತ್‌ನಿಂದ ಜನರಲ್ ಆಸ್ಪತ್ರೆಯ ರೋಗಿಗಳಿಗೆ ಕಾರುಣ್ಯಸ್ಪರ್ಶ

ಪುತ್ತಿಗೆ: ಕಾಸರಗೋಡು ಜನರಲ್ ಆಸ್ಪತ್ರೆಯ 300ಕ್ಕೂ ಅಧಿಕ ರೋಗಿಗಳಿಗೆ ಹಾಗೂ ಅವರ ಪರಿಚಾರಕರಿಗೆ, ನೌಕರರಿಗೆ ಮುಹಿಮ್ಮಾತ್ ಮುಸ್ಲಿಮೀನ್ ಎಜ್ಯುಕೇಶನ್ ಸೆಂಟರ್‌ನಿಂದ ನಬಿದಿನದಂಗವಾಗಿ ಕಾರುಣ್ಯ ಸ್ಪರ್ಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಹಿಮ್ಮಾತ್ ಮದ್‌ಹುರಸೂಲ್ ಫೌಂಡೇಶನ್ ಅಧೀನದಲ್ಲಿ 10 ದಿನಗಳಿಂದ ನಡೆದು ಬರುತ್ತಿದ್ದ ಕಾರ್ಯಕ್ರಮದಂಗವಾಗಿ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ಗೆ ಅಗತ್ಯದ ಉಪಕರಣಗಳು, ರೋಗಿಗಳಿಗೆ ಹಣ್ಣು ಹಂಪಲು ಕಿಟ್‌ಗಳನ್ನು ನೀಡಲಾಯಿತು. ಕಳೆದ 10 ವರ್ಷಗಳಿಂದ ಮುಹಿಮ್ಮಾತ್ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಅಗತ್ಯದ ಸಾಮಗ್ರಿಗಳನ್ನು ನೀಡುತ್ತಿದೆ. ಕಾರ್ಯಕ್ರಮವನ್ನು ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ ಯವರ …