‘ಉಪಕುಲಪತಿಗಳ ನೇಮಕಾತಿ ಪ್ರಕ್ರಿಯೆಯಿಂದ ಮುಖ್ಯಮಂತ್ರಿಯನ್ನು ಹೊರತುಪಡಿಸಬೇಕು’- ಸುಪ್ರೀಂಕೋರ್ಟ್ ಸಮೀಪಿಸಿದ ರಾಜ್ಯಪಾಲ

ತಿರುವನಂತಪುರ: ಕೇರಳದ ಎರಡು ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿ ಪ್ರಕ್ರಿಯೆಯಿಂದ ಮುಖ್ಯಮಂತ್ರಿ ಯನ್ನು ಹೊರತುಪಡಿಸಬೇಕೆಂದು ಆಗ್ರಹಿಸಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಡಿಜಿಟಲ್ ವಿಶ್ವವಿದ್ಯಾಲಯಗಳ ಉಪಕುಲಪ ತಿಗಳ ನೇಮಕಾತಿಗಾಗಿರುವ ಸರ್ಜ್ ಸಮಿತಿ ಹಾಗೂ ನೇಮಕಾತಿ ಪ್ರಕ್ರಿಯೆಗಳಿಂದ ಮುಖ್ಯಮಂ ತ್ರಿಯನ್ನು ಹೊರತು ಪಡಿಸಬೇಕೆಂಬ ಪ್ರಧಾನ ಬೇಡಿಕೆಯನ್ನು  ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿ ಯಲ್ಲಿ ರಾಜ್ಯಪಾಲರು ಮುಂದಿರಿಸಿದ್ದಾರೆ. ಉಪಕುಲಪತಿಗಳ ನೇಮಕಾತಿಗಾಗಿ ಸರ್ಜ್ ಸಮಿತಿ ತಯಾರಿಸುವ ಪಟ್ಟಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಬೇಕೆಂಬ ನಿರ್ದೇಶವನ್ನು ಈ ಹಿಂದೆ …

ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣ ಬಳಿ ವ್ಯಕ್ತಿಯೊಬ್ಬರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಮಿಳುನಾಡಿನ ಶಿವಗಂಗಾ ಕರೈಕುಡಿ ಕಟ್ಟು ತಲೈವಾಸಲ್ ಬಚ್ಚ ಕೂಡಲ್ ಸ್ಟ್ರೀಟ್‌ನ ನಜ್ಮುದ್ದೀನ್ ಖಾದರ್ ಬಚ್ಚ (71) ಎಂಬವರು ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಸುಮಾರು 6.15ರ ವೇಳೆ ಘಟನೆ ನಡೆದಿದೆ. ಹಳಿ ದಾಟುತ್ತಿದ್ದಾಗ ಇವರಿಗೆ ರೈಲು ಢಿಕ್ಕಿ ಹೊಡೆದಿರಬಹು ದೆಂದು ಅಂದಾಜಿಸಲಾಗಿದೆ. ಮೃತದೇಹದ ಬಳಿ ಪತ್ತೆಯಾದ ಗುರುತುಚೀಟಿ ಮೂಲಕ ವ್ಯಕ್ತಿಯ ಗುರುತು ಹಚ್ಚಲಾಗಿದೆ. ಮೃತದೇಹ ವನ್ನು ಕಾಸರಗೋಡು ಜನರಲ್ …

ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ ನಡೆಸುವ ತಂಡದ ಇಬ್ಬರ ಸೆರೆ

ಮಂಜೇಶ್ವರ: ಶಾಲಾ ವಿದ್ಯಾರ್ಥಿ ಗಳನ್ನು ಮಾದಕವಸ್ತುಗಳತ್ತ ಆಕರ್ಷಿಸಲು ಗಾಂಜಾ ಮಿಠಾಯಿ ವಿತರಿಸುವ ತಂಡದ ಇಬ್ಬರನ್ನು ಅಬಕಾರಿ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಕುಂಜತ್ತೂರು ಕುಚ್ಚಿಕ್ಕಾಡ್ ನಿವಾಸಿ ಅಬ್ದುಲ್ ಮುನೀರ್ (48), ಉದ್ಯಾವರ ಬಲ್ಲಂಗೋಡು ನಿವಾಸಿ ಮುಹಮ್ಮದ್ ಹನೀಫ್ ಎಂಬಿವರನ್ನು ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್  ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ಸೆರೆಹಿಡಿದಿದೆ. ಅಬಕಾರಿ ಇನ್‌ಸ್ಪೆಕ್ಟರ್ ವಿಷ್ಣು ಪ್ರಕಾಶ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆ ವೇಳೆ 0.21  ಗ್ರಾಂ ಮೆಥಾಫಿಟಮಿನ್, 81 ಗ್ರಾಂ ಗಾಂಜಾ ಎಂಬಿವುಗಳನ್ನು ವಶಪಡಿಸಿ ಇಬ್ಬರನ್ನು ಸೆರೆಹಿಡಿಯಲಾಗಿದೆ. ಅಸಿಸ್ಟೆಂಟ್ …

ಮನೆ ಬಳಿ ಗಾಂಜಾ ಸಸಿ ನೆಟ್ಟು ಬೆಳೆಸಿದ ವ್ಯಕ್ತಿ ಸೆರೆ

ಕಾಸರಗೋಡು: ಮನೆ ಬಳಿ ಗಾಂಜಾ ಸಸಿ ನೆಟ್ಟು ಬೆಳೆ ಸಿದ ವ್ಯಕ್ತಿ ಯ ನ್ನು ಬಂದಡ್ಕ ಎಕ್ಸೈಸ್ ರೇಂಜ್ ಕಚೇರಿಯ ಇನ್‌ಸ್ಪೆಕ್ಟರ್ ಶಹಬಾಸ್ ಅಹಮ್ಮದ್ ಎ.ಪಿ ನೇತೃತ್ವದ ತಂಡ  ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ. ಕುತ್ತಿಕ್ಕೋಲು ಪೈರು ನಿವಾಸಿ ಜೋಬಿನ್ ಕುರ್ಯನ್ (35) ಬಂಧಿತ ಆರೋಪಿ. ಕುತ್ತಿಕೋಲ್‌ನ ಅಲ್ಫೋನ್ಸಾ ಎಂಬ ಮಹಿಳೆಯ ಮಾಲಕತ್ವದಲ್ಲಿರುವ ಹಿತ್ತಿಲ ಮುಂದಿನ ಬಾವಿ ಬಳಿ  ಗಾಂಜಾ ಸಸಿ ನೆಟ್ಟು ಬೆಳೆಸಿದ ಆರೋಪದಂತೆ ಈತನನ್ನು ಬಂಧಿಸಲಾಗಿದೆ. ಐಬಿ ಪ್ರಿವೆಂಟೀವ್ ಆಫೀಸರ್ ರವೀಂದ್ರನ್ ಎಂ.ಕೆ ನೀಡಿದ ಗುಪ್ತ …

ಕಾಲೇಜು ವಿದ್ಯಾರ್ಥಿ ನಾಪತ್ತೆ

ಕಾಸರಗೋಡು: ಕಾಲೇಜು ವಿದ್ಯಾರ್ಥಿ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ಮಧೂರಿಗೆ ಸಮೀಪದ ಪಟ್ಲ ಕುದ್ರೆಪ್ಪಾಡಿ ನಿವಾಸಿ ಹಾಗೂ ಮಂಗಳೂರಿನ ಖಾಸಗಿ ಕಾಲೇಜೊಂದರ ಬಿಸಿಐ ಮೂರನೇ ವರ್ಷದ ವಿದ್ಯಾರ್ಥಿ ಇಬ್ರಾಹಿಂ (20) ನಾಪತ್ತೆಯಾದ ಯುವಕ. ಈತ ನಿನ್ನೆ ಮಧ್ಯಾಹ್ನ ಮನೆಯಿಂದ ಹೊರಹೋದ ನಂತರ ಹಿಂತಿರುಗಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆತನ ತಂದೆ ಅಬ್ದುಲ್ ಖಾದರ್ ತಿಳಿಸಿದ್ದಾರೆ. ಇದರಂತೆ ಪೊಲೀಸರು ಮಿಸ್ಸಿಂಗ್ ಪ್ರಕ ರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮತ ಕಳ್ಳತನ ಆರೋಪಿಸಿ ರಾಹುಲ್ ಗಾಂಧಿ ಯಾತ್ರಾ: ಬಂದ್ಯೋಡ್‌ನಲ್ಲಿ ಬೆಂಬಲ ಮೆರವಣಿಗೆ

ಬಂದ್ಯೋಡು: ಮತ ಕಳ್ಳತನ ನಡೆಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ‘ವೋಟರ್ ಅಧಿಕಾರ್ ಯಾತ್ರಾ’ದ ಸಮಾರೋಪದಂಗವಾಗಿ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಬಂದ್ಯೋಡ್‌ನಲ್ಲಿ ಬೆಂಬಲ ಸೂಚಕ ಮೆರವಣಿಗೆ ನಡೆಯಿತು. ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಉದ್ಘಾಟಿಸಿ ಮಾತನಾಡಿ, ಅರ್ಹ ಮತದಾರರನ್ನು  ಅಂತಿಮ ಮತದಾರರ ಪಟ್ಟಿಯಿಂದ ಹೊರತುಪಡಿಸಿ ವಿಪಕ್ಷಗಳ ಬಲ ಕುಗ್ಗಿಸಿ ವಾಮ ಮಾರ್ಗಗಳ ಮೂಲಕ ಆಡಳಿತ ಬಿಜೆಪಿ ನಡೆಸುತ್ತಿದ್ದು, ಇದಕ್ಕೆ ಚುನಾವಣಾ ಆಯೋಗವು ಕೈಜೋಡಿಸಿರುವುದು ವಿಪರ್ಯಾಸ ಎಂದು ನುಡಿದರು. …

ಪಂಚಾಯತ್ ಡಿಡಿ ಕಚೇರಿ ನೌಕರ ನಿಧನ

ಕಾಸರಗೋಡು: ಪಂಚಾಯತ್ ಡೆಪ್ಯುಟಿ ಡೈರೆಕ್ಟರ್ ಕಚೇರಿಯ ನೌಕರ ಹೃದಯಾಘಾ ತದಿಂದ ನಿಧನ ಹೊಂದಿದರು. ತೆರುವತ್ ನಿವಾಸಿ ಸಜಿತ್ ಕುಮಾರ್ (44) ಮೃತಪಟ್ಟವರು. ನ್ಯುಮೋನಿಯಾ ತಗಲಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಅವಿವಾಹಿತನಾಗಿದ್ದಾರೆ. ಮೃತರು ತಂದೆ ಕೆ. ಪುರುಷೋತ್ತಮ, ತಾಯಿ ಬೇಬಿ, ಸಹೋದರರಾದ ವಿ.ವಿ. ಅಜಿತ್ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೈಕಂಬದಲ್ಲಿ ತ್ಯಾಜ್ಯ ವಿರುದ್ಧ ಕ್ರಿಯಾ ಸಮಿತಿ ಹೋರಾಟಕ್ಕೆ

ಉಪ್ಪಳ: ಕೈಕಂಬದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯದ ವಿರುದ್ಧ ಆಂದೋಲನ ತೀವ್ರಗೊಳಿಸಲು ಕ್ರಿಯಾ ಸಮಿತಿ ಮುಂದೆ ಬಂದಿದೆ. ಕೈಕಂಬದ ಅಪಾರ್ಟ್‌ಮೆಂಟೊಂದರ ಮಲಿನ ಜಲವನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯಬಿಡುವುದರ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ಕೈಕಂಬ ಮಾಲಿನ್ಯಮುಕ್ತ ಕ್ರಿಯಾ ಸಮಿತಿ ತಿಳಿಸಿದೆ. ಈ ಅಪಾರ್ಟ್‌ಮೆಂಟ್‌ನಿಂದ ಸಮೀಪ ನಿವಾಸಿಗಳ ಕುಡಿಯುವ ನೀರಿನ ಮೂಲ ಕೂಡಾ ಮಲಿನೀಕರ ಣಗೊ ಳ್ಳುತ್ತಿದ್ದು, ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಸಲಾಗುತ್ತಿದೆ. ಈ ಮಧ್ಯೆ ನಿರಂತರವಾಗಿ ಫ್ಲಾಟ್‌ನಿಂದ ಮಲಿನ ಜಲವನ್ನು ಸಾರ್ವಜನಿಕ ಸ್ಥಳಗಳಿಗೆ ಹರಿಯಬಿಡಲಾಗುತ್ತಿದೆ. ಪಂಚಾಯತ್, ಆರೋಗ್ಯ ಇಲಾಖೆ …

ಅಂತಿಮ ಮತದಾರರ ಪಟ್ಟಿ ಇಂದು ಪ್ರಕಟ

ತಿರುವನಂತಪುರ: ಸ್ಥಳೀಯಾಡಳತ ಚುನಾವಣೆಗಿರುವ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಇಂದು ಪ್ರಕಟಿಸಲಿದೆ. ಕಳೆದ ತಿಂಗಳ 30ರಂದು ಪ್ರಕಟಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದವರಿಂದ ಮಾಹಿತಿ ಸಂಗ್ರಹಕ್ಕೆ  29ರ ವರೆಗೆ ಸಮಯ ನೀಡಿದ ಹಿನ್ನೆಲೆಯಲ್ಲಿ ಪಟ್ಟಿ  ಬಿಡುಗಡೆ ಇಂದಿಗೆ ಮುಂದೂಡಲಾಗಿತ್ತು.

ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಗೆ ಅಭಿನಂದನೆ

ಮಂಜೇಶ್ವರ: ಕಲ್ಲಿಕೋಟೆ ವಲಯ ದಲ್ಲಿ ಪಕ್ಷ ತೀರ್ಮಾನಿಸಿದ ಕಾರ್ಯಕ್ರಮ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಗೆ ಅಭಿನಂದನೆ ಸಲ್ಲಿಸಲಾಯಿತು. ಮಂಡಲ ಸಮಿತಿ ಅಧ್ಯಕ್ಷ ಆದರ್ಶ್ ಬಿ.ಎಂ., ಪ್ರಧಾನ ಕಾರ್ಯದರ್ಶಿ ಯತಿರಾಜ್, ಕೆ.ವಿ. ಭಟ್ ಇವರು ಗೌರವ ಸ್ವೀಕರಿಸಿ ದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಕೃಷ್ಣದಾಸ್, ರಾಜ್ಯ ಉಪಾಧ್ಯಕ್ಷರಾದ ಎಂ.ಟಿ. ರಮೇಶ್, ಶ್ರೀಕಾಂತ್, ಶಾನ್ ಜೋರ್ಜ್, ಸಜೀವನ್, ಗೋಪಾಲಕೃಷ್ಣ, ನವ್ಯಾ ಹರಿದಾಸ್ ಉಪಸ್ಥಿತರಿದ್ದರು.