ಮುಂದಿನ ರಾಜ್ಯೋದಯ ದಿನದಂದು ಕೇರಳ ಕಡು ಬಡವರಿಲ್ಲದ ಮೊದಲ ರಾಜ್ಯವಾಗಲಿದೆ- ಸಚಿವ ಕೆ. ರಾಜನ್

ಕಾಸರಗೋಡು: ಮುಂದಿನ ಕೇರಳ ರಾಜ್ಯೋದಯ ದಿನದಂದು ಕಡು ಬಡವರಿಲ್ಲದ ಮೊದಲ ರಾಜ್ಯವಾಗಿ ಕೇರಳ ಬದಲಾಗಲಿದೆ ಎಂದು ಸಚಿವ ಕೆ. ರಾಜನ್ ನುಡಿದರು. ಕಾಸರಗೋಡು ರೆವೆನ್ಯೂ ಡಿವಿಷನಲ್ ಕಚೇರಿ ಕಟ್ಟಡ ಹಾಗೂ ಜಿಲ್ಲಾ ಮಟ್ಟದ ಪಟ್ಟೆ ಮೇಳ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾನೂನುಗಳು, ಕಾಯ್ದೆಗಳು ಜನಸಾಮಾನ್ಯರಿಗೆ ಸಹಾಯಕವಾಗುವ ರೀತಿಯಲ್ಲಿ ನೌಕರರು ವ್ಯವಸ್ಥಿತಗೊಳಿಸಬೇಕೆಂದು, ಕಾನೂನುಗಳ ಸಿಕ್ಕುಗಳನ್ನು ತೋರಿಸಿ ಜನರನ್ನು ಸಂಕಷ್ಟಭರಿತರಾಗಿ ಮಾಡಬಾರದೆಂದು ನೌಕರರಿಗೆ ಸಚಿವರು ನಿರ್ದೇಶ ನೀಡಿದರು. ರಾಜ್ಯದ ಒಕ್ಕಲಿಗರ ದೂರುಗಳು ಹಾಗೂ ಸಮಸ್ಯೆಗಳನ್ನು ಪೂರ್ಣವಾಗಿ ಪರಿಹಾರಗೊಳಿಸಿದ ರಾಜ್ಯವಾಗಿ ಕೇರಳ …

ಕೇರಳದಲ್ಲಿ ತೃತೀಯ ಬಾರಿ ಎಡರಂಗ ಜಯಭೇರಿ ಬಾರಿಸಲಿದೆ- ಎಂ.ವಿ. ಜಯರಾಜನ್

ಪೈವಳಿಕೆ: ಪೈವಳಿಕೆಯ ಶೆಟ್ಟಿ ಸಹೋದರರ 68ನೇ ಹುತಾತ್ಮ ದಿನಾಚರಣೆಯನ್ನು ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ.ವಿ. ಜಯರಾಜನ್ ಉದ್ಘಾಟಿಸಿದರು. ಅವರು ಮಾತನಾಡಿ, ಕೇರಳ ಅಭಿವೃದ್ಧಿ ಹೊಂದಿದ ರಾಜ್ಯಗಳ ಸಾಲಿಗೆ ಸೇರುತ್ತಿದೆ ಮಾತ್ರವಲ್ಲ ಶಿಕ್ಷಣರಂಗ, ಆರೋಗ್ಯರಂಗದಲ್ಲಿ ವಿಶ್ವಕ್ಕೇ ಮಾದರಿಯಾಗುತ್ತಿದೆ. ಪ್ರತೀ ತಿಂಗಳು ವಿವಿಧ ಪಿಂಚಣಿಗಳಿಗಾಗಿ 900 ಕೋಟಿ ರೂ. ವೆಚ್ಚ ಮಾಡುತ್ತಿದೆ. ಆರೋಗ್ಯರಂಗದಲ್ಲಿ ಕೇಂದ್ರ ಸರಕಾರದ 36 ಅಂಗೀಕಾರ ರಾಜ್ಯಕ್ಕೆ ದೊರಕಿದೆ. ವಯನಾಡಿನಲ್ಲಿ ಪ್ರಾರಂಭಿಸಲಾದ ರೈಲು ಸುರಂಗ ಮಾರ್ಗ ಭಾರತದ 3ನೇ ಅತೀ ಉದ್ದದ ಹಾಗೂ ಪ್ರಥಮ ದ್ವಿಮುಖ …

ಜ್ವರ ತಗಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು

ಪೆರ್ಲ: ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಅಡ್ಕಸ್ಥಳ ಬಳಿಯ ರಾಮಜ್ಜಗುರಿ ನಿವಾಸಿ ಯುವತಿ ಅಸೌಖ್ಯ ಬಾಧಿಸಿ ನಿಧನ ಹೊಂದಿದರು. ಇಲ್ಲಿನ ರಾಧಾಕೃಷ್ಣರೈ- ನಳಿನಿ ದಂಪತಿ ಪುತ್ರಿ ಮಯೂರಿ (26) ನಿಧನ ಹೊಂದಿದ ಯುವತಿ. ಇವರು ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿನಿಂದ ಊರಿಗೆ ಹಿಂತಿರುಗಿದ್ದರು. ಶನಿವಾರ ಜ್ವರ ಉಲ್ಬಣಗೊಂಡು ಇವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು. ಮೃತರು ತಂದೆ, ತಾಯಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಸ್‌ನಲ್ಲಿ 120 ಗ್ರಾಂ ಗಾಂಜಾ ಸಾಗಾಟ: ಜಾರ್ಖಂಡ್ ನಿವಾಸಿ ಸೆರೆ

ಮಂಜೇಶ್ವರ: ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ತಂಡ ನಡೆಸಿದ ತಪಾಸಣೆಯಲ್ಲಿ ಕರ್ನಾಟಕ ಕೆಎಸ್‌ಆರ್‌ಟಿಸಿಯಲ್ಲಿ ಗಾಂಜಾ ಸಾಗಿಸಲು ಯತ್ನಿಸಿದ ಜಾರ್ಖಂಡ್ ನಿವಾಸಿ ಸೆರೆಯಾಗಿದ್ದಾನೆ. ಲತೇಹಾರ್ ಜಿಲ್ಲೆಯ ಬಿಂಶುಬಂದ್ ರೇವಂತ್ ಕುರ್ದ್ ನಿವಾಸಿ ಆಶಿಶ್ ಕುಮಾರ್ ತಿವಾರಿ (24) ಸೆರೆಯಾದ ವ್ಯಕ್ತಿ. ನಿನ್ನೆ ಸಂಜೆ 4 ಗಂಟೆ ವೇಳೆ ವಾಹನ ತಪಾಸಣಾನಿರತರಾಗಿದ್ದ ಅಬಕಾರಿ ದಳ ಅಧಿಕಾರಿಗಳು ಗಾಂಜಾ ಸಾಗಾಟ ಪತ್ತೆಹಚ್ಚಿದ್ದಾರೆ. ಈತನ ಕೈವಶ 120 ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಆರೋಪಿ ಹಾಗೂ ಗಾಂಜಾವನ್ನು ಕುಂಬಳೆ ರೇಂಜ್‌ಗೆ ಹಸ್ತಾಂತರಿಸಲಾಗಿದೆ. ಅಬಕಾರಿ ಇನ್ಸ್‌ಪೆಕ್ಟರ್ ಜಿನು ಜೇಮ್ಸ್‌ರ …

ಸಚಿವರಿಂದ ಕಂದಾಯ ವಿಭಾಗೀಯ ಕಚೇರಿ ಉದ್ಘಾಟನೆ

ಕಾಸರಗೋಡು: ನಗರದ ಪಿಲಿಕುಂಜೆಯಲ್ಲಿ ನೂತನವಾಗಿ ನಿರ್ಮಿಸಲಾದ ಕಂದಾಯ ವಿಭಾಗೀಯ ಕಚೇರಿ (ಆರ್.ಡಿ.ಒ)ವನ್ನು ಇಂದು ಬೆಳಿಗ್ಗೆ ನಡೆದ ಸಮಾರಂಭದಲ್ಲಿ ರಾಜ್ಯ ಕಂದಾಯ ಖಾತೆ ಸಚಿವ ಕೆ. ರಾಜನ್ ಉದ್ಘಾಟಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ರಿ-ಬಿಲ್ಡ್ ಕೇರಳ ಯೋಜನೆಯಲ್ಲಿ ಒಳಪಡಿಸಿ ಆರ್‌ಡಿಒ ಕಚೇರಿಯಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿದೆ. 2020-21ನೇ  ಆರ್ಥಿಕ ವರ್ಷದ ರೀ-ಬಿಲ್ಡ್ ಕೇರಳ ಇನ್‌ಸ್ಸೆಂಟೀವ್ ನಿಧಿಯಿಂದ ೪ ಕೋಟಿ ರೂ. ಈ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ.  ಇದು 1052.39 ಸ್ಕ್ವಾರ್ ಫೀಟ್‌ನ ದ್ವಿ ಅಂತಸ್ತಿನ ಕಟ್ಟಡವಾಗಿದೆ. …

ತಲೆಹೊರೆ ಕಾರ್ಮಿಕನ ಮೃತದೇಹ ಚರಂಡಿಯಲ್ಲಿ ಪತ್ತೆ

ಹೊಸದುರ್ಗ: ಪಯ್ಯನ್ನೂರು ಎಫ್.ಸಿ.ಐ ಗೋದಾಮಿನ ತಲೆ ಹೊರೆ ಕಾರ್ಮಿಕ ಚರಂಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಅನ್ನೂರು ಪಡಿಂಞಾರೆಕ್ಕೆ ರೆಯ ತಾಯಂಬತ್ತ್ ರಾಜೇಶ್ (45) ಮೃತಪಟ್ಟ ವ್ಯಕ್ತಿ. ಪಯ್ಯನ್ನೂರು ಮುರಿಕೊವ್ವಲ್ ಉಷಾ ರೋಡ್‌ನ ಚರಂಡಿಯಲ್ಲಿ  ಮೃತದೇಹ ಪತ್ತೆ ಯಾಗಿದೆ. ನಿನ್ನೆ ಮಧ್ಯಾಹ್ನ ಮೃತ ದೇಹ ಕಂಡ ನಾಗರಿಕರು ಪೊಲೀ ಸರಿಗೆ ಮಾಹಿತಿ ನೀಡಿದ್ದರು.  ಪಯ್ಯ ನ್ನೂರು ಪೊಲೀಸರು ತಲುಪಿ ಮೃತದೇಹವನ್ನು  ಆಸ್ಪತ್ರೆಯ ಶವಾಗಾರಕ್ಕೆ ತಲುಪಿ ಸಿದರು. ಇದೇ ವೇಳೆ ರಾಜೇಶ್‌ರ ಸಾವಿನಲ್ಲಿ ನಿಗೂಢತೆಗಳಿವೆಯೆಂದು ಸಂಬಂಧಿಕರು ಆರೋಪಿಸಿದ್ದಾರೆ. ಬಾರ್‌ನಲ್ಲಿ …

ರಾಜ್ಯದಲ್ಲಿ ಇನ್ನಷ್ಟು ವ್ಯಾಪಿಸತೊಡಗಿದ ಮೆದುಳು ಜ್ವರ: ಕೈಗೂಸು ಸೇರಿದಂತೆ ಮತ್ತೆ ಇಬ್ಬರು ಬಲಿ

ಕಲ್ಲಿಕೋಟೆ:? ರಾಜ್ಯದಲ್ಲಿ ಮೆದುಳುಜ್ವರ (ಅಮೀಬಿಕ್ ಜ್ವರ) ಇನ್ನಷ್ಟು ವ್ಯಾಪಿಸತೊಡಗಿದ್ದು ಅದರ ಪರಿಣಾಮ ಚಿಕಿತ್ಸೆಯಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಕಲ್ಲಿಕೋಟೆ ಒಮಶ್ಶೇರಿ ನಿವಾಸಿ ದಂಪತಿಯ ಮೂರು ತಿಂಗಳ ಹಸುಗೂಸು ಹಾಗೂ ಮಲಪ್ಪುರಂ ಕಣ್ಣಮಂಗಲಂ ಚೇರೂರು ಕಾಪ್ಪಿಲ್  ಕಣ್ಣೋತ್ ರಮ್ಲ (52) ಎಂಬವರು ಈ ಜ್ವರಕ್ಕೆ ಬಲಿಯಾದವರಾಗಿದ್ದಾರೆ. ಇವರಿ ಬ್ಬರನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇ ಜು ಆಸ್ಪತ್ರೆಯಲ್ಲಿ ದಾಖಲಾಗಿತ್ತು. ಇದ ರಲ್ಲಿ ಹಸುಗೂಸನ್ನು ಕಳೆದ 28 ದಿನ ಗಳಿಂದ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಾವಿ ನೀರಿನಿಂದ ಮಗುವಿಗೆ ಜ್ವರ …

ಕುಂಬಳೆಯಲ್ಲಿ ಶಾಲಾ ಅಧಿಕಾರಿಗಳು ತಿಳಿಯದೆ ಮೈದಾನ ಅಳೆದು ಕಲ್ಲುಗಳನ್ನಿರಿಸಿರುವುದಾಗಿ ಆರೋಪ

ಕುಂಬಳೆ: ಹಲವು ವರ್ಷಗಳಿಂದ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಹಾಗೂ ಜಿಎಸ್‌ಬಿಎಸ್‌ನ ಮಕ್ಕಳು ಆಟವಾಡುವ ಮೈದಾನದ ಒಂದು ಭಾಗವನ್ನು ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ಯಾರಿಗೂ ತಿಳಿಯದಂತೆ ಅಳೆದು ಕಲ್ಲುಗಳನ್ನಿರಿಸಿರುವುದು ಕುಂಬಳೆಯಲ್ಲಿ ಚರ್ಚೆಗೆಡೆಯಾಗಿದೆ. ಕಳೆದ ಶುಕ್ರವಾರ ಮಧ್ಯಾಹ್ನ ವೇಳೆ ಅಧಿಕಾರಿಗಳು ತಲುಪಿ ಕಲ್ಲುಗಳನ್ನಿರಿಸಿರುವುದಾಗಿ ಹೇಳಲಾಗು ತ್ತಿದೆ. ಈ ಹಿಂದೆ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದ ರೆಸ್ಟ್ ಹೌಸ್ ಭಾಗದಿಂದ ಮೈದಾನವಾಗಿ ಉಪಯೋಗಿಸುತ್ತಿದ್ದ ಸ್ಥಳವನ್ನು ಅಳತೆ ಮಾಡಿ ಕಲ್ಲುಗಳನ್ನಿರಿಸಲಾಗಿದೆ. ಇದೇ ವೇಳೆ ಶಾಲಾ ಮಕ್ಕಳು ಆಟವಾಡುವ ಮೈದಾನದಿಂದ ಒಂದಿಂಚು …

ಜಿಲ್ಲಾ ಭೂಹಕ್ಕುಪತ್ರ ವಿತರಣೆ ಸಚಿವರಿಂದ ಚಾಲನೆ

ಕಾಸರಗೋಡು: ಎಲ್ಲರಿಗೂ ಜಮೀನು, ಎಲ್ಲರಿಗೂ ಭೂದಾಖಲುಪತ್ರ ಹಾಗೂ ಎಲ್ಲಾ ಸೇವೆಗಳೂ ಸ್ಮಾರ್ಟ್ ಎಂಬ ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಜ್ಯಾರಿಗೊಳಿಸುವ ಸಲುವಾಗಿ ಆರಂಭಿಸಲಾದ ಭೂಹಕ್ಕುಪತ್ರ ವಿತರಣಾ ಕಾರ್ಯಕ್ರಮದಂತೆ ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮ ಕಾಸರಗೋಡು ಟೌನ್ ಹಾಲ್‌ನಲ್ಲಿ  ಇಂದು ಬೆಳಿಗ್ಗೆ ಆರಂಭಗೊಂಡಿತು. ರಾಜ್ಯ ಕಂದಾಯ ಖಾತೆ ಸಚಿವ  ಕೆ. ರಾಜನ್ ಉದ್ಘಾಟಿಸಿದರು. ಮಾತ್ರವಲ್ಲ ಜಿಲ್ಲೆಯಲ್ಲಿ ಅರ್ಹರಾದ 1497 ಮಂದಿಗೆ ಭೂಹಕ್ಕು ಪತ್ರಗಳ ವಿತರಣೆಗೆ ಸಚಿವರು  ಚಾಲನೆ ನೀಡಿದರು.  ಕಡು ಬಡವರಿಲ್ಲದ ಕೇರಳ ಯೋಜನೆಯಲ್ಲಿ ಒಳಗೊಂಡವರೂ ಭೂಹಕ್ಕುಪತ್ರ ಪಡೆಯುವವರಲ್ಲಿ ಒಳಗೊಂಡಿದ್ದಾರೆ. …