ನಡೆ ಹಾದಿಯ ನೀರಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ರಸ್ತೆ ಬದಿಯ ಕಾಲುದಾರಿಯ ನೀರಿನಲ್ಲಿ ವ್ಯಕ್ತಿಯೋರ್ವ  ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಡಿ ಗ್ರಾಮದ ಕರುವಂಗೋಳು ನಿವಾಸಿ ನಾರಾಯಣ ನಾಯ್ಕ (69) ಸಾವನ್ನಪ್ಪಿದ ವ್ಯಕ್ತಿ.  ಸಾಮಗ್ರಿ ತರಲೆಂದು ಇವರು ನಿನ್ನೆ ಬೆಳಿಗ್ಗೆ ೯ ಗಂಟೆಗೆ ಮನೆಯಿಂದ ಹೊರಟಿದ್ದರು.  ತಡವಾದರೂ ಅವರು ಮನೆಗೆ ಹಿಂತಿ ರುಗಲಿಲ್ಲ. ಈಮಧ್ಯೆ ಎದುರ್ತೋಡು ಜಂಕ್ಷನ್‌ನ ಕಾಲುದಾರಿಯಲ್ಲಿ ನೀರು ಕಟ್ಟಿ ನಿಂತಿದ್ದ ಸ್ಥಳದಲ್ಲಿ ಅವರು ನಿನ್ನೆ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ವಿದ್ಯಾನಗರ ಪೊಲೀಸರು …

ಆರಿಕ್ಕಾಡಿಯಲ್ಲಿ ಸಂಚಾರ ಸ್ವಾತಂತ್ರ್ಯಕ್ಕೆ ಬೇಕಾಗಿ ಹೋರಾಟ: ಸ್ಥಳೀಯರಿಂದ ಹೆದ್ದಾರಿ ಪ್ರತಿಭಟನೆ

ಕುಂಬಳೆ: ಟೋಲ್ ಬೂತ್ ಅಪೀಲು ತಿರಸ್ಕರಿಸಿದರೂ ಆರಿಕ್ಕಾಡಿಯಲ್ಲಿ ಹೋರಾಟದ ತೀವ್ರತೆ ಕಡಿಮೆಯಾಗಿಲ್ಲ. ಸಂಚಾರ ಸ್ವಾತಂತ್ರ್ಯ ತಡೆಯುವವರ ವಿರುದ್ಧ ಆರಿಕ್ಕಾಡಿ ಹೆದ್ದಾರಿಯಲ್ಲಿ ಸ್ಥಳೀಯರು ನಿನ್ನೆ ಪ್ರತಿಭಟಿಸಿದರು. ಆರಿಕ್ಕಾಡಿ ಕಡವತ್‌ನಿಂದ ಕುಂಬಳೆ ಪೇಟೆಗೆ, ಕುಂಬಳೆ ಪೇಟೆಯಿಂದ ಆರಿಕ್ಕಾಡಿ ಕಡವತ್‌ಗೆ ತೆರಳಬೇಕಿದ್ದರೆ ಸರ್ವೀಸ್ ರಸ್ತೆ ಇಲ್ಲದಿರುವುದು ಸಮಸ್ಯೆ ಯಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಂತಿಮ ಹಂvಕ್ಕೆ ತಲುಪಿದರೂ ಸರ್ವೀಸ್ ರಸ್ತೆ ನಿರ್ಮಿಸದಿರುವುದರ ಬಗ್ಗೆ ಸ್ಥಳೀಯರು ಪ್ರತಿಭಟಿಸಿದ್ದಾರೆ. ಹಲವು ಕಾಲದಿಂದ ಇಲ್ಲಿನವರು ಸರ್ವೀಸ್ ರಸ್ತೆಗಾಗಿ ಬೇಡಿಕೆ ಮುಂದಿಟ್ಟಿದ್ದರೂ ಇದುವರೆಗೂ ಪ್ರಯೋಜನ ಉಂಟಾಗಿಲ್ಲ. ಈ …

ಕಾಂಗ್ರೆಸ್‌ನಿಂದ ಗೃಹ ಸಂಪರ್ಕಕ್ಕೆ ಚಾಲನೆ

ಮಂಗಲ್ಪಾಡಿ: ಕೇಂದ್ರ ಸರಕಾರ ಹಾಗೂ ಕೇರಳ ಸರಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಗೃಹ ಸಂದರ್ಶನದಂತೆ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮವನ್ನು ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿ.ಎಂ.ಕೆ. ಉದ್ಘಾಟಿಸಿದರು. ಅಶ್ರಫ್ ಮುಟ್ಟಂ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ಫಾರೂಕ್ ಶಿರಿಯಾ, ರಾಜೇಶ್, ಗೀತಾ ಬಂದ್ಯೋಡು, ಮುಹಮ್ಮದ್ ಮಲಂದೂರು, ತಾಹಿರಾ, ಜಾವಿದ್, ಸಿದ್ದಿಕ್, ಶಫಿಕ್, ಬಾಬು, ಸುಂದರ, ಮೂಸ, ಇಸ್ಮಾಯಿಲ್, ಮುಹಮ್ಮದ್ ಮೇರ್ಕಳ, ಯೂಸಫ್, ಹನೀಫ್ ಉಪಸ್ಥಿತರಿದ್ದರು. ಅಶ್ರಫ್ …

ಎನ್‌ಆರ್‌ಇಜಿ ಕಾರ್ಮಿಕರಿಂದ ವಿವಿಧ ಅಂಚೆ ಕಚೇರಿಗಳಿಗೆ ಮಾರ್ಚ್

ಪೈವಳಿಕೆ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರ ಯೂನಿಯನ್ (ಎನ್‌ಆರ್‌ಇಜಿ) ಪೈವಳಿಕೆ ಪಂಚಾ ಯತ್ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪೈವಳಿಕೆ ಅಂಚೆ ಕಚೇರಿಗೆ ಮಾರ್ಚ್, ಧರಣಿ ನಡೆಸಲಾಯಿತು. ವರ್ಷಕ್ಕೆ 200 ದಿನದ ಕೆಲಸ ನೀಡಬೇಕು, ಭೂ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿದ ಕೇಂದ್ರ ಸರಕಾರದ ನೀತಿ ಹಿಂತೆಗೆಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ವಿವಿಧ ಪಂಚಾಯತ್‌ಗಳಲ್ಲಿ ಮಾರ್ಚ್, ಧರಣಿ ನಡೆಸಲಾಗಿದೆ. ಪೈವಳಿಕೆ ಪಂಚಾಯತ್‌ನಲ್ಲಿ ಸಿಐಟಿಯು ಮಂಜೇಶ್ವರ ಏರಿಯಾ ಉಪಾಧ್ಯಕ್ಷ ಚಂದ್ರ ನಾಕ್ ಮಾನಿಪ್ಪಾಡಿ ಉದ್ಘಾಟಿಸಿದರು. ಶ್ರೀನಿವಾಸ …

ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಓಣಂ ಸಂತೆ ಉದ್ಘಾಟನೆ

ವರ್ಕಾಡಿ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಓಣಂ ಸಂತೆ ಯನ್ನು ಬ್ಯಾಂಕ್‌ನ ಅಧ್ಯಕ್ಷ ಮೊಹ ಮ್ಮದ್ ಹನೀಫ್ ಉದ್ಘಾಟಿಸಿದರು. ಉಪಾಧ್ಯಕ್ಷ ಸತ್ಯನಾರಾಯಣ ಭಟ್, ನಿರ್ದೇಶಕರಾದ ಜಗದೀಶ್ ಚೆಂಡ್ಲ, ರಬಿಯಾ, ಸತೀಶ್ ಕೂಟತ್ತಜೆ, ಸದಸ್ಯರಾದ ಗಂಗಾಧರ ಕಳಿಯೂರು, ಕಿಶೋರ್ ಕುಮಾರ್ ನಾಯ್ಕ್ ಬಜ, ಧಾರಿಕ ಧರ್ಮನಗರ, ಅರುಂಧತಿ ಧರ್ಮನಗರ, ಸುಕುಮಾರ ನಾಯ್ಕ್, ರೋಸಲಿನ್ ಡಿ’ಸೋಜ ಭಾಗವಹಿಸಿದರು. ಬ್ಯಾಂಕ್ ಕಾರ್ಯದರ್ಶಿ ಶ್ರೀವತ್ಸ ಭಟ್ ಸ್ವಾಗತಿಸಿ, ದಯಾವತಿ ವಂದಿಸಿದರು.

ಪ್ರತಾಪನಗರದಲ್ಲಿ ದಿ| ಧನ್‌ರಾಜ್ ಹೆಸರಿನ ಶಿಲಾಫಲಕ ಸ್ಥಾಪನೆ

ಮಂಗಲ್ಪಾಡಿ: ಪ್ರತಾಪನಗರ ಜಂಕ್ಷನ್‌ಗೆ ಬಿಜೆಪಿ ಮಂಡಲ ಉಪಾಧ್ಯಕ್ಷರಾಗಿದ್ದ ದಿ| ಧನರಾಜ್ ಪ್ರತಾಪನಗರ ಇವರ ಹೆಸರನ್ನಿರಿಸಲಾ ಯಿತು. ಪ್ರತಾಪನಗರ ಫ್ರೆಂಡ್ಸ್‌ನ ನೇತೃತ್ವದಲ್ಲಿ ಶಿಲಾಫಲಕವನ್ನು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಸ್ಥಾಪಿಸಿ ಉದ್ಘಾಟಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಪಂ. ಸದಸ್ಯೆ ಸುಧಾ ಗಣೇಶ್, ಮುಖಂಡರಾದ ಚಂದ್ರಹಾಸ ಪೂಜಾರಿ, ಮೋಹನ್ ಪೂಜಾರಿ, ಗಣೇಶ್ ಪುಳಿಕುತ್ತಿ, ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಪುಳಿಕುತ್ತಿ, ಪ್ರತಾಪನಗರ ಫ್ರೆಂಡ್ಸ್‌ನ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಎಡನೀರು ಮಠಕ್ಕೆ ಬದಿಯಡ್ಕ ಪೇಟೆಯವರಿಂದ ಹಸಿರುವಾಣಿ ಸಮರ್ಪಣೆ

ಬದಿಯಡ್ಕ: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚಾರಣೆಯಂಗವಾಗಿ ನಿನ್ನೆ ಬದಿಯಡ್ಕದಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಲಾಯಿತು. ಬದಿಯಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನರೇಂದ್ರ ಬಿ.ಎನ್., ಗೋಸಾಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ, ನಾಟ್ಯ ವೈದ್ಯ ಗೋವಿಂದ ಭಟ್ ಬೇಂದ್ರೋಡು, ಪ್ರತಿಭಾ ಬದಿಯಡ್ಕ, ನಾರಾಯಣ ಮಣಿಯಾಣಿ ಚೇರ್ಕೂಡ್ಲು, ಹರೀಶ್ ಭಟ್ ಚೇರ್ಕೂಡ್ಲು, ರಂಜನ್ ಕಡಮಣ್ಣಾಯ ಪೆರಡಾಲ, ಮಹೇಶ್ ವಳಕುಂಜ ಉಪಸ್ಥಿತರಿದ್ದರು. ಸಮಿತಿ ವತಿಯಿಂದ ಪಾದ ಪೂಜೆ, ಪಾದುಕ …

ಭರತನಾಟ್ಯದಲ್ಲಿ ಡಿಸ್ಟಿಂಕ್ಷನ್

ಬದಿಯಡ್ಕ: ಕರ್ನಾಟಕ ರಾಜ್ಯ ಡಾ| ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ನಡೆಸಿದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಸಾನ್ವಿ ಡಿ. ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾಳೆ. ಪುತ್ತೂರು ಶಾರದ ಕಲಾ ಕೇಂದ್ರದ ಗುರು ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್‌ರ ಶಿಷ್ಯೆಯಾದ ಈಕೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಯಾಗಿದ್ದಾಳೆ. ಈಕೆ ಕುಂಟಿಕ್ಕಾನ ಬಳಿಯ ದೇವರಮೆಟ್ಟು ನಿವಾಸಿಯೂ ಪ್ರಸ್ತುತ ಪುತ್ತೂರು ಕರ್ಮಲದಲ್ಲಿ ವಾಸಿಸುವ ಬಾಲಚಂದ್ರ ಡಿ. ಹಾಗೂ ಅನುಪಮ (ಪುತ್ತೂರು ತಾಲೂಕು ಕಚೇರಿ ಉದ್ಯೋಗಿ) ದಂಪತಿಯ ಪುತ್ರಿ.

ಮೊಗ್ರಾಲ್ ಯುನಾನಿ ಡಿಸ್ಪೆನ್ಸರಿಗೆ ಸರಕಾರದ ಆಯುಷ್ ಕಾಯಕಲ್ಪ ಪ್ರಶಸ್ತಿ ಪ್ರದಾನ

ಕುಂಬಳೆ: ಕೇರಳ ಸರಕಾರದ ಪ್ರಥಮ ಆಯುಷ್ ಕಾಯಕಲ್ಪ ಪ್ರಶಸ್ತಿ ಕುಂಬಳೆ ಪಂಚಾಯತ್‌ನ ಮೊಗ್ರಾಲ್ ಸರಕಾರಿ ಯುನಾನಿ ಡಿಸ್ಪೆನ್ಸರಿಗೆ ಲಭಿಸಿದೆ. ಆರೋಗ್ಯ ಸೇವೆಗಳಿಗೆ ಲಭಿಸಿದ ಅಂಗೀಕಾರವಿದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಸಚಿವೆ ವೀಣಾ ಜೋರ್ಜ್‌ರಿಂದ ಪ್ರಶಸ್ತಿಯನ್ನು ಕುಂಬಳೆ ಪಂ. ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್, ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಯುನಾನಿ ಮೆಡಿಕಲ್ ಆಫೀಸರ್ ಡಾ| ಶಕೀರಲಿ ಕೆ.ಎ, ಜಿಲ್ಲಾ ಪ್ರೋಗ್ರಾಂ ಮೆನೇಜರ್ ಡಾ| ನಿಖಿಲ್, ಜೋಸ್ ಎಂ.ಎಸ್. ಎಂಬಿವರು ಸ್ವೀಕರಿಸಿದರು.

ಇಡೀ ನಾಡನ್ನು ಬೆಚ್ಚಿ ಬೀಳಿಸಿದ ತಲಪಾಡಿ ಬಸ್ ಅಪಘಾತ:ಆರು ಮಂದಿಯ ದಾರುಣ ಸಾವಿನಿಂದ ನಾಡು ಶೋಕಸಾಗರ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿ ನಿನ್ನೆ ಸಂಭವಿಸಿದ ಬಸ್ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಹಿತ ಆರು ಮಂದಿ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ನಿನ್ನೆ ಮಧ್ಯಾಹ್ನ 1.45 ರ ವೇಳೆ ಕರ್ನಾಟಕ ಕೆಎಸ್‌ಆರ್‌ಟಿಸಿ  ಬಸ್ ಆಟೋ ರಿಕ್ಷಾಕ್ಕೆ  ಢಿಕ್ಕಿ ಹೊಡೆದು ಈ ಭೀಕರ ಅಪಘಾತವುಂಟಾಗಿದೆ. ಆಟೋ ರಿಕ್ಷಾ ಚಾಲಕ ಕೋಟೆಕಾರು ಬಳಿಯ ಅಜ್ಜಿನಡ್ಕ ಮುಳ್ಳುಗದ್ದೆ ನಿವಾಸಿ ಹೈದರ್ ಅಲಿ (47), ಪ್ರಯಾಣಿಕರಾದ  ಅಜ್ಜಿನಡ್ಕದ ಖದೀಜ (60), ನೆಬೀಸ (52), ನೆಬೀಸರ ಅತ್ತೆ ಪರಂಗಿಪೇಟೆ ಪರಾರಿ …