ದೇಶವನ್ನು ಆಳ್ವಿಕೆ ನಡೆಸುವವರು ಜಾತ್ಯಾತೀತ ಮೌಲ್ಯವನ್ನು ಬುಡಮೇಲುಗೊಳಿಸುತ್ತಿದ್ದಾರೆ- ಎಂ.ವಿ. ಜಯರಾಜನ್

ಉಪ್ಪಳ: ಬಿಜೆಪಿಯ ಆಡಳಿತದ ಮೂಲಕ ದೇಶದಲ್ಲಿ ಜಾತ್ಯತೀತ ಮೌಲ್ಯಗಳು ಇಲ್ಲದಾಗುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಎಂ ವಿ ಜಯರಾಜನ್ ಹೇಳಿದರು. ಉಪ್ಪಳದಲ್ಲಿ ಡಿವೈಎಫ್‌ಐ ನಡೆಸಿದ ಸಮರ ಸಂಗಮ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ಜಾತ್ಯತೀತದ ಕೇಂದ್ರವಾದ ಕೇರಳವನ್ನು ರಾಜ್ಯಪಾಲರು ವಿಭಜನೆ ಮಾಡಲು ಶ್ರಮಿಸುತ್ತಿದ್ದಾರೆ. ರಾಜೇಂದ್ರ ಅರ್ಲೇಕರ್ ಅವರ ವಿಭಜನ ನೀತಿ ಕೇರಳದಲ್ಲಿ ನಡೆಯಲ್ಲ ಎಂದು ಅವರು ಹೇಳಿದರು. ಅಬೂಬಕ್ಕರ್ ಸಿದ್ದೀಕ್ ಹುತಾತ್ಮ ಮಂದಿರದ ಶಿಲಾನ್ಯಾಸವÀನ್ನು ಎಂ.ವಿ ಜಯರಾಜನ್ ನಿರ್ವಹಿಸಿದರು. ಆಕಾಶ್ …

ಪಚ್ಲಂಪಾರೆಯಲ್ಲಿ ಆಟಿಡ್ ಒಂಜಿ ದಿನ, ಸಾಧಕರಿಗೆ ಸನ್ಮಾನ

ಉಪ್ಪಳ: ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಮಹಾಂಕಾಳಿ ದೈವಸ್ಥಾನದ ವತಿಯಿಂದ ಪಚ್ಲಂಪಾರೆಯಲ್ಲಿ ಪಟ್ಟತ ಮೊಗರು ಅರಸು ವೇದಿಕೆ ಯಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಕ್ರೀಡಾಕೂಟ ನಡೆಯಿತು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದೈವಸ್ಥಾನದ ಗೌರವಾಧ್ಯಕ್ಷ ಬಾಬು. ಯು. ಪಚ್ಲಂಪಾರೆ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಯನ್ನು ದೈವಸ್ಥಾನದ ಗುರಿಕಾರರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮೋಹನ. ಯು. ಮಂಜೇಶ್ವರ, ಮಹೇಶ್ ಬಂಗ್ಲೆಗುಡ್ಡೆ ಸುಳ್ಯ, ಕರಿಯ ಉಪ್ಪಳ. ಭಾಸ್ಕರ ಬಲ್ಮಠ, ಗುರುವಪ್ಪ ಟೈಲರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ …

ಲಯನ್ಸ್ ಕ್ಲಬ್ ವತಿಯಿಂದ ನೀರೊಳಿಕೆ ಆಶ್ರಮಕ್ಕೆ ಸಹಾಯ ಹಸ್ತಾಂತರ

ಉಪ್ಪಳ: ಲಯನ್ಸ್ ಕ್ಲಬ್ ಮಂಜೇಶ್ವರ ಉಪ್ಪಳ ಇದರ ವತಿಯಿಂದ ವರ್ಕಾಡಿ ನೀರೊಳಿಕೆಯ ಶ್ರೀ ಮಾತಾ ಬಾಲಿಕಾಶ್ರಮಕ್ಕೆ ವಸ್ತು ರೂಪದಲ್ಲಿ ದಿನಸು ಮತ್ತು ಸಹಾಯಧನ ಕೊಡಲಾಯಿತು. ಕ್ಲಬ್ ಅಧ್ಯಕ್ಷ ಲಯನ್ ಕಮಲಾಕ್ಷ ಪಂಜ, ಲಯನ್ ಚರಣ್ ಬಂದ್ಯೋಡ್, ಲಯನ್ ಮಾಧವ. ಕೆ, ಲಯನ್ ಲಕ್ಷ್ಮಣ ಕುಂಬ್ಳೆ, ಲಯನ್ ಅಶೋಕ್ ಉಪ್ಪಳ, ಲಯನ್ ವಿಜಯನ್ ನಾಯರ್ ಶೃಂಗಾರ್, ಲಯನ್ ಪ್ರವೀಣ್ ಪಕ್ಕಳ, ಲಯನ್ ಉದಯ ಶೆಟ್ಟಿ, ಲಯನ್ ತಿಮ್ಮಪ್ಪ ಭಂಡಾರಿ ಉಪಸ್ಥಿತರಿದ್ದರು.

ಮುಳಿಯಾರು ಎಬಿಸಿ ಕೇಂದ್ರಕ್ಕೆ ಕೇಂದ್ರ ತಂಡ ಭೇಟಿ

ಕಾಸರಗೋಡು:  ಬೀದಿ ನಾಯಿ ಗಳನ್ನು  ಸಂತಾನಹರಣ ಶಸ್ತ್ರಚಿಕಿತ್ಸೆಗೊಳಪ ಡಿಸಲು ಮುಳಿಯಾರಿನಲ್ಲಿ ಸ್ಥಾಪಿಸಿದ ಎಬಿಸಿ ಕೇಂದ್ರ ತಂಡ ಇಂದು ಸಂದರ್ಶಿ ಸಲಿದೆ.  ಕೇಂದ್ರದ ಚಟುವಟಿಕೆಗೆ ಅಗತ್ಯದ ಅನುಮತಿ ಲಭಿಸಲು ರಾಷ್ಟ್ರೀಯ ಮೃಗ ಕ್ಷೇಮ ಮಂಡಳಿಯ ಪ್ರತ್ಯೇಕ  ಪರಿಶೀಲನೆಗಾಗಿ  ಕೇಂದ್ರ ತಂಡ ಇಲ್ಲಿಗೆ ಆಗಮಿಸಲಿದೆಯೆಂದು ತಿಳಿದುಬಂದಿದೆ. ಈ ತಂಡದ ಪರಿಶೀಲನೆ ಬಳಿಕ ಅನುಮತಿ ಲಭಿಸಿದರೆ ಮಾತ್ರವೇ  ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಬಹು ದಾಗಿದೆ. ಬೀದಿ ನಾಯಿಗಳ ಉಪಟಳ ತೀವ್ರಗೊಂಡ ಹಿನ್ನೆಲೆಯಲ್ಲಿ ಎಬಿಸಿ ಕೇಂದ್ರದ ಚಟುವಟಿಕೆ ಆರಂಭಿಸಬೇಕೆಂಬ ಬೇಡಿಕೆ  …

ಎಡನೀರು ಮಠದಲ್ಲಿ ರೆಮೋನಾ ಇವೆಟ್ಟ್ ಪೆರೇರಾರಿಗೆ ಅಭಿನಂದನೆ, ಸಾಧನಾ ಪುರಸ್ಕಾರ ಪ್ರದಾನ

ಬದಿಯಡ್ಕ: ಕಲೆ, ಸಂಸ್ಕೃತಿಗಳು ಈ ಮಣ್ಣಿನ ಸತ್ತ÷್ವದ ಸಂಕೇತಗಳು. ಅದನ್ನು ಕರಗತಮಾಡಿಕೊಳ್ಳುವುದು ಜೀವಮಾನ ಸಾಧನೆಯಾಗಿದ್ದು, ಅದರಲ್ಲೂ ವಿಶ್ವ ದಾಖಲೆ ನಿರ್ಮಿಸುವುದು ಅತ್ಯಪೂರ್ವ. ದೇವರ ಅನುಗ್ರಹ, ಸಂಕಲ್ಪ ಶಕ್ತಿಗಳಿಂದ ವ್ಯಕ್ತಿ ಶಕ್ತಿಯಾಗುವುದೇ ಬದುಕಿನ ಸಾರ್ಥಕತೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ನುಡಿದರು.ಶ್ರೀಮಠದಲ್ಲಿ ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ನಡೆಯುತ್ತಿರುವ ಸಾಂ ಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯದಲ್ಲಿ ಸಾಧನೆಗೈದ ಮಂಗಳೂರಿನ ರೆಮೋನಾ ಇವೆಟ್ಟ್ ಪೆರೇರಾ ಅವರನ್ನು ಅಭಿನಂದಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ …

ಹೊಸಂಗಡಿ ಬಳಿ ಅಂಗಡಿಗಳ ಮುಂದೆ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆ: ತನಿಖೆ ಆರಂಭ

ಉಪ್ಪಳ: ಹೊಸಂಗಡಿ ಬಳಿಯ ಅಂಗಡಿಪದವು ದುರ್ಗಿಪಳ್ಳ ಪರಿಸರದಲ್ಲಿ ಎರಡು ಅಂಗಡಿಗಳ ಮುಂದೆ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಬೆಳಿಗ್ಗೆ ಅಂಗಡಿಗಳನ್ನು ತೆರೆಯಲು ವ್ಯಾಪಾರಿಗಳು ತಲುಪಿದಾಗ ರಕ್ತ ಕಂಡುಬಂದಿದೆ. ಭಾರೀ ಪ್ರಮಾಣದಲ್ಲಿ ರಕ್ತ ಚೆಲ್ಲಿರಬಹುದೆಂದು ಅಂದಾಜಿ ಸಲಾಗಿದೆ. ಈ ಬಗ್ಗೆ ವ್ಯಾಪಾರಿಗಳು ನೀಡಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿ ಇಲ್ಲಿ ರಕ್ತ ಚೆಲ್ಲಿರಬಹುದೆಂದು ಅಂದಾಜಿಸಲಾಗಿದೆ. ಇದು ಮನುಷ್ಯನದ್ದೇ ಅಥವಾ ಯಾವುದಾದರೂ ಪ್ರಾಣಿಯದ್ದಾಗಿರಬಹುದೇ ಎಂದು ಖಚಿತಪಡಿಸಲಾಗಿಲ್ಲ. ಎರಡು ಅಂಗಡಿಗಳ ಮುಂದೆ ರಕ್ತ …

ಮಹಿಳಾ ಡಾಕ್ಟರ್ ವಾಸಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕೊಚ್ಚಿ: ಮಹಿಳಾ ಡಾಕ್ಟರ್ ವಾಸ ಸ್ಥಳದಲ್ಲಿ ಮೃತಪಟ್ಟಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆಲುವಾ ರಾಜಗಿರಿ ಆಸ್ಪತ್ರೆಯ ಡಾಕ್ಟರ್ ಮೀನಾಕ್ಷಿ ವಿಜಯ ಕುಮಾರ್ ಮೃತಪಟ್ಟವರು. ರಾಜಗಿರಿ ಆಸ್ಪತ್ರೆಯ ಸರ್ಜಿಕಲ್ ಐಸಿಯುನಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಕುನ್ನುವಳಿಯಲ್ಲಿ ರುವ ಫ್ಲ್ಯಾಟ್‌ನಲ್ಲಿ ಇವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಆಸ್ಪತ್ರೆಯಿಂದ ಫೋನ್ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಬಳಿಕ ಆಸ್ಪತ್ರೆ ಅಧಿಕಾರಿಗಳು ಫ್ಲ್ಯಾಟ್‌ನಲ್ಲಿರು ವವರಿಗೆ ಮಾಹಿತಿ ನೀಡಿದ್ದು, ಅವರು ಬಂದು ನೋಡಿದಾಗ ಡಾಕ್ಟರ್ ಮಲಗುವ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಇವರ ಕೈಗೆ …

ಮಹಿಳೆ ಕೆರೆಗೆ ಬಿದ್ದು ಮೃತ್ಯು

ಪೆರ್ಲ: ಮಹಿಳೆಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಎಣ್ಮಕಜೆ ಸೇರಾಜೆ ನಿವಾಸಿ ದಿ| ಅಮ್ಮು ರೈಯವರ ಪತ್ನಿ ಕುಸುಮ (85) ಮೃತಪಟ್ಟವರು. ಇವರು ನಿನ್ನೆ ಬೆಳಿಗ್ಗೆ ಮನೆ ಸಮೀಪದ ತೋಟಕ್ಕೆ ತೆರಳಿದ್ದರು. ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ತೋಟದಲ್ಲಿ ಹುಡುಕಿದಾಗ ಕೆರೆಯಲ್ಲಿ ಇವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ನ್ನಲಾಗಿದೆ. ಮೃತದೇಹವನ್ನು ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆ ಹಿತ್ತಿಲಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತರು ಮಕ್ಕಳಾದ ಕಸ್ತೂರಿ, ಕೃಷ್ಣವೇಣಿ, ಸುರೇಶ, …

ಹಿತ್ತಿಲಿನಲ್ಲಿ ಎಂಡಿಎಂಎ ಬಳಕೆ: ಯುವತಿ ಸಹಿತ ಮೂವರ ಸೆರೆ

ಮಂಜೇಶ್ವರ: ಮಾದಕ ವಸ್ತುವಾದ ಎಂಡಿಎಂಎ ಸೇದುತ್ತಿದ್ದ ಓರ್ವೆ ಯುವತಿ ಹಾಗೂ ಇಬ್ಬರು ಯುವಕರನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಮಂಗಳೂರು ಸುರತ್ಕಲ್‌ನ ನಿಕೇತ್ ಸುರೇಶ್ (39), ಕುದ್ರೋಳಿಯ ಹುಸೈನ್ (34), ಕದ್ರಿಯ ಫಾತಿಮತ್ ಫೈರೋಸ್ ಪರ್ವಿನ್ (33) ಎಂಬಿವರು ಬಂಧಿತರಾದವರಾಗಿದ್ದಾರೆ. ಇವರು ನಿನ್ನೆ ಬೆಳಿಗ್ಗೆ ತೂಮಿನಾಡು ಹಿಲ್‌ಟಾಪ್ ನಗರದ ಖಾಸಗಿ ವ್ಯಕ್ತಿಯ ಹಿತ್ತಿಲಿನಲ್ಲಿ ಎಂಡಿಎಂಎ ಸೇದುತ್ತಿದ್ದರೆನ್ನಲಾಗಿದೆ. ಈ ಭಾಗದಲ್ಲಿ ನಿನ್ನೆ ಎಸ್‌ಐ ಅಜಯ್ ಎಸ್. ಮೆನೋನ್‌ರ ನೇತೃತ್ವದಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದ ವೇಳೆ ಈ ಮೂರು ಮಂದಿ …

ಹಿರಿಯ ಬಿಜೆಪಿ ಕಾರ್ಯಕರ್ತ ನಿಧನ

ಕೂಡ್ಲು: ಕೋಣಿಬೈಲು ಬಾಳಿಕೆ ಧರ್ಮಚಾವಡಿ ಟ್ರಸ್ಟಿ, ನಗರದಲ್ಲಿ  ಹಲವು ವರ್ಷಗಳ ಕಾಲ ಟೈಲರ್ ಆಗಿದ್ದ  ಬಿ. ಗೋಪಾಲಕೃಷ್ಣ ಶೆಟ್ಟಿ (77) ನಿಧನ ಹೊಂದಿದರು. ಕೂಡ್ಲು ನಾಂಗುರಿ ನಿವಾಸಿಯಾದ ಇವರು ಪ್ರಸ್ತುತ ರಾಮದಾಸನಗರದಲ್ಲಿ ವಾಸಿಸುತ್ತಿದ್ದರು. ಬಿಜೆಪಿ, ಸಂಘ ಪರಿವಾರದ ಹಿರಿಯ ಕಾರ್ಯಕರ್ತ ರಾಗಿದ್ದ ಇವರು ಧಾರ್ಮಿಕ ರಂಗಗಳಲ್ಲೂ ಸಕ್ರಿಯರಾಗಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ್ದರು.  ಇವರ ಪತ್ನಿ ಕಲ್ಯಾಣಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಶರತ್, ಭರತ್, ಪ್ರತಾಪ್, ರೇಶ್ಮಾ, ಅಳಿಯ ರಂಜಿತ್, …