ಕರ್ನಾಟಕದಲ್ಲಿ ಜೀತದಾಳುಗಳ ರೀತಿಯಲ್ಲಿ ದುಡಿಯುತ್ತಿದ್ದ ಪುತ್ತಿಗೆಯ ಯುವಕ ಸೇರಿದಂತೆ 18 ಮಂದಿಯನ್ನು ರಕ್ಷಿಸಿದ ಪೊಲೀಸರು
ಕಾಸರಗೋಡು: ಕರ್ನಾಟಕದ ಹಾಸನದಲ್ಲಿ ಜೀತದಾಳುಗಳ ರೀತಿಯಲ್ಲಿ ದುಡಿಸುತ್ತಿದ್ದ ಕಾಸರಗೋಡು ಪುತ್ತಿಗೆ ನಿವಾಸಿ ಸೇರಿದಂತೆ 18 ಮಂದಿಯನ್ನು ಕರ್ನಾಟಕ ಪೊಲೀಸರು ಹಾಗೂ ಕಂದಾಯ ಇಲಾಖೆಯವರು ಸೇರಿ ನಡೆಸಿದ ಕಾರ್ಯಾಚರಣೆಯಲ್ಲಿ ರಕ್ಷಿಸಿದ ಘಟನೆ ನಡೆದಿದೆ. ಪುತ್ತಿಗೆ ವಿಕಾಸ್ನಗರದ ನಿವಾಸಿ ಉದಯ (37) ಹಾಗೂ ಕೊಲ್ಲಂ ನಿವಾಸಿಗಳೂ ಸೇರಿದಂತೆ ಒಟ್ಟು 18 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಈ ಪೈಕಿ ಉದಯರನ್ನು ಕರ್ನಾಟಕದ ಸಂಬಂಧಪಟ್ಟ ಅಧಿಕಾರಿಗಳು ಕಾಸರಗೋಡಿಗೆ ಕರೆತಂದು ಅವರನ್ನು ಜಿಲ್ಲಾ ಹೆಚ್ಚುವರಿ ಮೆಜಿಸ್ಟ್ರೇಟ್ (ಎಡಿಎಂ) ಕೆ.ವಿ.ಶ್ರುತಿಯವರ ಸಾನಿಧ್ಯದಲ್ಲಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಹಾಸನ …