ಪುತ್ರಿಯನ್ನು ಕೊಲೆಗೈದು ತಂದೆ ಆತ್ಮಹತ್ಯೆಗೈದ ಘಟನೆ: ಬಾಲಕಿ ವರ್ಷಗಳ ಕಾಲ ದೌರ್ಜನ್ಯಕ್ಕೀಡಾಗಿದ್ದಾಳೆಂದು ವರದಿ

ಕೊಚ್ಚಿ: ಎಳಮಕ್ಕರದಲ್ಲಿ ಪುತ್ರಿಯನ್ನು ಕೊಲೆಗೈದು ತಂದೆ ಆತ್ಮಹತ್ಯೆಗೈದ ಘಟನೆಯಲ್ಲಿ ಆತಂಕಗೊಳ್ಳುವ ಮರಣೋತ್ತರ ಪರೀಕ್ಷಾ ವರದಿ ಬಹಿರಂಗಗೊಂಡಿದೆ. ಬಾಲಕಿ ಹಲವು ವರ್ಷಗಳಿಂದ ದೌರ್ಜನ್ಯಕ್ಕೀಡಾಗಿರುವುದಾಗಿಯೂ ಸಾವು ಸಂಭವಿಸುವ ಗಂಟೆಗಳ ಹಿಂದೆಯೂ ದೌರ್ಜನ್ಯ ನಡೆದಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ. ಆದರೆ ಬಾಲಕಿಯನ್ನು ದೌರ್ಜನ್ಯಗೈದಿ ರುವುದು ಯಾರು, ಎಲ್ಲಿ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಎಳಮಕ್ಕರ ಪೊಲೀಸ್ ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪುತ್ರಿ ದೌರ್ಜನ್ಯಕ್ಕೀಡಾದ ಮಾಹಿತಿ ತಿಳಿದಿಲ್ಲವೆಂದು ಕೊಚ್ಚಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ತಾಯಿ ಪೊಲೀಸರಲ್ಲಿ …

ಕೇರಳದಲ್ಲಿ ಗಂಟೆಗೆ 160 ಕಿ.ಮೀ. ವೇಗದ ಏಳು ರೈಲು ಯೋಜನೆಗೆ ಅನುಮತಿ

ತಿರುವನಂತಪುರ: ಕೇರಳದಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ಕ್ರಮಿಸುವ ಏಳು ರೈಲು ಯೋಜನೆಗೆ ಕೇಂದ್ರ ರೈಲ್ವೇ ಸಚಿವಾಲಯ ಅನುಮತಿ ನೀಡಿದೆ. ಇದರಂತೆ ಶೊರ್ನೂರು-ಮಂಗಳೂರು (307 ಕಿ.ಮೀ), ಕೊಯಂಬತ್ತೂರು-ಶೊರ್ನೂರು (99 ಕಿ.ಮೀ), ಶೊರ್ನೂರು-ಎರ್ನಾಕುಳಂ (106 ಕಿ.ಮೀ), ಎರ್ನಾಕುಳಂ-ಕಾಯಂಕುಳಂ (ಕೋಟ್ಟಯಂ ಮೂಲಕ 115 ಕಿ.ಮೀ), ಕಾಯಂಕುಳಂ-ತಿರುವನಂತಪುರ (105 ಕಿ.ಮೀ), ತಿರುವನಂತಪುರ-ನಾಗರ್‌ಕೋವಿಲ್  (76 ಕಿ.ಮೀ) ಮತ್ತು ಪೊದಾವೂರ್- ಅಂಬಲಪುಳ ಎಂಬೀ ರೈಲು ಅಭಿವೃದ್ಧಿ ಯೋಜನೆಗಳನ್ನು ಕೇರಳದಲ್ಲಿ ಜ್ಯಾರಿಗೊಳಿಸಲಾಗುದೆಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಾಜ್ಯ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಈ …

2027ರಿಂದ ಒಂದನೇ ತರಗತಿ ಸೇರ್ಪಡೆ ಪ್ರಾಯಮಿತಿ ಆರು ವರ್ಷ

ತಿರುವನಂತಪುರ: 2027-28ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ಸೇರ್ಪಡೆಗೊಳಿಸುವ ವಯೋಮಿತಿ ಯನ್ನು ಆರು ವರ್ಷವಾಗಿ ನಿಗದಿಪಡಿ ಸಲಾಗಿದೆ. ಇದರಂತೆ ಆರು ವರ್ಷ ಪೂರ್ತಿಯಾದ ಮಕ್ಕಳಿಗೆ ಮಾತ್ರವೇ ಇನ್ನು ಒಂದನೇ ತರಗತಿಗೆ ಪ್ರವೇಶ ಲಭಿಸಲಿದೆ. ಈ ಹೊಸ ಕ್ರಮ ಜ್ಯಾರಿಗೊಳ್ಳುವ ವೇಳೆ ಒಂದನೇ ತರಗತಿಗೆ ಸೇರ್ಪಡೆಗೊಳ್ಳುವ ವಿದ್ಯಾ ರ್ಥಿಗಳ ಸಂಖ್ಯೆಯಲ್ಲಿ  ಶೇ. ೪೫ರಷ್ಟು  ಕುಸಿತ ಉಂಟಾಗುವ ಸಾಧ್ಯತೆ ಇದೆಯೆಂದು  ಲೆಕ್ಕಹಾಕಲಾಗಿದೆ. ಮಾತ್ರವಲ್ಲ ಅಧ್ಯಾಪಕರ ಖಾಯಂ ನೇಮಕಾತಿಯ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದನೇ …

ಎಡರಂಗದ ಮಂಜೇಶ್ವರ ಮಂಡಲ ಅಭಿವೃದ್ಧಿ ಮುನ್ನಡೆ ಜಾಥಾ ಕಾಟುಕುಕ್ಕೆಯಿಂದ ಆರಂಭ

ಉಪ್ಪಳ: ಎಲ್.ಡಿ.ಎಫ್ ಮಂಜೇಶ್ವರ ಮಂಡಲ ಅಭಿವೃದ್ದಿ ಮುನ್ನಡೆ ಜಾಥಾ ನಿನ್ನೆ ಸಂಜೆ ಕಾಟು ಕುಕ್ಕೆಯಲ್ಲಿ ಸಿಪಿಎಂ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ಉದ್ಘಾಟಿಸಿ ದರು. ಜಾಥಾ ಇಂದು ಬೆಳಿಗ್ಗೆ ಪೆರ್ಲದಿಂದ ಆರಂಭಗೊAಡಿದ್ದು, ವಿವಿಧ ಕೇಂದ್ರಗಳಲ್ಲಿ ಪರ್ಯಟನೆ ನಡೆಸಿ ನಾಳೆ ಸಂಜೆ 6ಗಂಟೆಗೆ ಮಜೀರ್ಪಳ್ಳದಲ್ಲಿ ಸಮಾರೋಪೆಗೊಳ್ಳಲಿದೆ. ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು ಸಮಾರೋಪ ಉದ್ಘಾಟಿಸುವರು. ಮುಖಂಡರಾದ ಕೆ.ಆರ್ ಜಯಾನಂದ, ಜಯರಾಮ ಬಲ್ಲಂಗುಡೇಲು, ಸಿ.ಎ ಝು ಬೈರ್, ಅಹಮ್ಮದ್ ನೇತೃತ್ವ ನೀಡುವರು.

ಬಿಜೆಪಿ ವಿರುದ್ಧ ಐಕ್ಯರಂಗದಿಂದ ಚುನಾವಣಾಧಿಕಾರಿಗೆ ದೂರು

ಮಂಜೇಶ್ವರ: ವಿಧಾನಸಭಾ ಮಂಡಲದಲ್ಲಿ ಬಿಜೆಪಿ ಕೆಲವು ಅಧಿಕಾರಿಗಳ ಜೊತೆ ಸೇರಿಕೊಂಡು ಒಂದು ಸಮುದಾಯದ ಮತಗಳನ್ನು ವ್ಯಾಪಕವಾಗಿ ತಿರಸ್ಕರಿಸುತ್ತಿದೆ ಎಂದು ಶಾಸಕ ಎಕೆಎಂ ಅಶ್ರಫ್ ಆರೋಪಿಸಿ ದ್ದಾರೆ. ಫಾರ್ಮ್ 7 ದುರುಪಯೋಗ ಮಾಡಿ  ನಕಲಿ ದೂರು ನೀಡುವ ಬಿಜೆಪಿ ಮುಖಂಡರ ವಿರುದ್ಧ ಕಾನೂನು ಕ್ರಮ ಸ್ವೀಕರಿಸಬೇಕೆಂದು ಆಗ್ರಹಿಸಿ ಯುಡಿಎಫ್ ವಿಧಾನಸಭಾ ಮಂಡಲ ಸಮಿತಿ ಇಲೆಕ್ಟ್ರಲ್ ರಿಜಿಸ್ಟ್ರೇ ಶನ್ ಆಫೀಸರ್‌ಗೆ ದೂರು ನೀಡಿದೆ.

ಮಂಜೇಶ್ವರದಲ್ಲಿ ವ್ಯಾಪಕ ಮುಸ್ಲಿಂ ಲೀಗ್ ನಕಲಿ ಮತ ಸೇರ್ಪಡೆ ಬಗ್ಗೆ ಬಿಜೆಪಿಯಿಂದ ಚುನಾವಣಾಧಿಕಾರಿಗೆ ದೂರು

ಮಂಜೇಶ್ವರ: ಮಂಜೇಶ್ವರ ಕ್ಷೇತ್ರದಲ್ಲಿ ಮತದಾರರ ಯಾದಿಗೆ ನಕಲಿ ಮತಗಳನ್ನು ಸೇರಿಸಲಾಗುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಚುನಾವಣಾ ಅಧಿಕಾರಿಗೆ ದೂರು ನೀಡಿದೆ. ಮತದಾರರ ಯಾದಿಯಲ್ಲಿ ಮುಸ್ಲಿಂ ಲೀಗ್ ನಕಲಿ ಮತಗಳನ್ನು ವ್ಯಾಪಕವಾಗಿ ಸೇರ್ಪಡೆಗೊಳಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 23 ವರ್ಷದಿಂದ ಮೇಲಿನ ಎಲ್ಲಾ ಹೊಸ ಮತದಾರರನ್ನು ಸರಿಯಾದ ದಾಖಲೆಗಳಿಲ್ಲದೆ ಸೇರಿಸಲಾಗುತ್ತಿದ್ದು, ಇತರ ರಾಜ್ಯಗಳ ಜನರನ್ನು ಕೂಡಾ ನಕಲಿ ದಾಖಲೆಗಳ ಮೂಲಕ ಸೇರಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.  ಈಬಗ್ಗೆ ಸೂಕ್ತ ತನಿಖೆ ನಡೆಸಲು ಬಿಎಲ್‌ಒಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕೆಂದು …

ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಯಾವುದೇ ಒಕ್ಕೂಟಕ್ಕೂ ಬೆಂಬಲ ಘೋಷಿಸಿಲ್ಲ- ಕೆವಿವಿಇಎಸ್ ಜಿಲ್ಲಾ ಕೌನ್ಸಿಲ್

ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಘೋಷಿತ ನಿಲುವುಗಳಲ್ಲಿ ಯಾವುದೇ ಬದಲಾವಣೆ ಮಾಡಬೇಕಾದ ಸನ್ನಿವೇಶ ಈಗ ಇಲ್ಲ ಎಂದು, ಸಂಘಟನೆ ನಿಷ್ಪಕ್ಷ ನಿಲುವಿನಲ್ಲಿ ಗಟ್ಟಿಯಾಗಿ ನಿಲ್ಲಲು ಕೆವಿವಿಇಎಸ್ ಕಾಸರಗೋಡು ಜಿಲ್ಲಾ ಕೌನ್ಸಿಲ್ ಸಭೆ ತೀರ್ಮಾನಿಸಿದೆ. ಎಲ್ಲಾ ಧರ್ಮಗಳಲ್ಲೂ, ಜಾತಿಯಲ್ಲೂ, ರಾಜಕೀಯಕ್ಕೊಳಪಟ್ಟವರು ಸಂಘಟನೆಯ ಸದಸ್ಯರಾಗಿದ್ದಾರೆ. ಸಂಘಟನೆ ರೂಪೀಕೃತಗೊಂಡ ಕಾಲದಿಂದ ಆರಂಭಿಸಿ ಇದುವರೆಗೆ ಸ್ವತಂತ್ರವಾದ ರಾಜಕೀಯ ನಿಲುವುಗಳನ್ನು ಸಂಘಟನೆ ಸ್ವೀಕರಿಸಿದೆ. ಚುನಾವಣೆಗಳಲ್ಲಿ ಸದಸ್ಯರಿಗೆ ಅವರವರ ರಾಜಕೀಯ ನಿಲುವುಗಳನ್ನು ಹೊಂದಬ ಹುದು. ಅದರ ಜೊತೆಗೆ ಸಂಘಟನೆಯ ಸಾರ್ವಜನಿಕ ನಿಲುವು, ಐಕ್ಯವನ್ನು …

ತೂಮಿನಾಡು ಕೊಲೆ ಪ್ರಕರಣ:  ಆರೋಪಿಯನ್ನು ಕತ್ತಿ ಖರೀದಿಸಿದ ಅಂಗಡಿ, ಮನೆಗೆ ತಂದು ಮಾಹಿತಿ ಸಂಗ್ರಹ; ಮಹಿಳೆಯರಿಂದ ಪ್ರತಿಭಟನೆ

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜತ್ತೂರಿನಲ್ಲಿ ಪುತ್ರಿ ಹಾಗೂ ಪತ್ನಿಯ ಸಹೋದರಿಯ ಪತಿಯನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಆರೋಪಿ ಉಮ್ಮರ್ ಫಾರೂಕ್‌ನನ್ನು ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡಲಾಗಿದ್ದು, ಆತನನ್ನು ಘಟನೆ ನಡೆದ ಸ್ಥಳಕ್ಕೆ ತಂದು ಹೇಳಿಕೆ ಸಂಗ್ರಹ ಪೂರ್ತಿಗೊಂಡಿತು. ಇಂದು ಮಧ್ಯಾಹ್ನ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುವುದೆಂದು ತನಿಖಾ ಅಧಿಕಾರಿ ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ತಿಳಿಸಿದ್ದಾರೆ.  ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ಐದು ದಿನಕ್ಕೆ ತನಿಖಾ ಅನ್ವಯ ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ …

ಉದ್ಯಮಿ, ಬಿಜೆಪಿ ಮುಖಂಡ ವಿಕ್ರಮ್ ಪೈ ವಿರುದ್ಧ ಕೊಲೆ ಯತ್ನ: ಸ್ಫೋಟದಿಂದ ಕಾರಿಗೆ ಹಾನಿ

ಕುಂಬಳೆ: ಬಿಜೆಪಿ ಮುಖಂಡ ಹಾಗೂ ಉದ್ಯಮಿ ಆಗಿರುವ ಕುಂಬಳೆಯ ವಿಕ್ರಮ್ ಪೈ ವಿರುದ್ಧ ಕೊಲೆ ಯತ್ನ ಘಟನೆ ನಡೆದಿದೆ. ವಿಕ್ರಮ್ ಪೈಯ ಪೊಸತ್ತಡ್ಕದಲ್ಲಿರುವ ಆಗ್ರೋ ಡೈರಿ ಫಾರ್ಮ್‌ಗಿರುವ ಕಾಂಕ್ರೀಟ್ ರಸ್ತೆಯಲ್ಲಿ ಸಂಭವಿಸಿದ ಸ್ಫೋಟದಿಂದ ಕಾರಿಗೆ ಹಾನಿಯುಂಟಾಗಿದೆ. ಟಯರ್ ನಾಶವಾಗಿದೆ. ಕಾರಿನ ಅಡಿ ಭಾಗ ನಜ್ಜುಗುಜ್ಜಾಗಿದೆ. ಬೆಳಿಗ್ಗೆ ಮನೆಯಿಂದ ಫಾರ್ಮ್‌ಗಿರುವ ಪ್ರಯಾಣ ಮಧ್ಯೆ ಫಾರ್ಮ್‌ನ ಬಳಿಗೆ ತಲುಪುವಾಗ ಕಾರಿನ ಚಕ್ರ ಹತ್ತಿದಾಗ ಸ್ಫೋಟ ಸಂಭವಿ ಸಿರುವುದಾಗಿ  ಹೇಳಲಾಗುತ್ತಿದೆ. ಅತ್ಯುಘ್ರ ಶಬ್ದದಿಂದ ಒಡಗೂಡಿ ಸ್ಫೋಟ ಸಂಭವಿಸಿದ್ದು, ಪರಿಸರವಾಸಿಗಳು ಓಡಿ ಬಂದಾಗ …

ಪರಸ್ಪರ ಜಗಳ ಮೂರು ಮಂದಿ ಸೆರೆ

ಕುಂಬಳೆ: ಕಯ್ಯಾರು ಗ್ರಾಮದ ಚೇವಾರು ಎಂಬಲ್ಲಿ ನಿನ್ನೆ ಪರಸ್ಪರ ಜಗಳವಾಡುತ್ತಿದ್ದ ಏಳು ಮಂದಿ ಪೈಕಿ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಬಂಬ್ರಾಣ ಬಾಯಿಕಟ್ಟೆ ಹೌಸ್‌ನ ಮೊಹಮ್ಮದ್ ಜಾಸಿಂ ಸಿ.ಎ (20), ಬಂಬ್ರಾಣ ಬತ್ತೇರಿಯ ಹಮೀದ್ ಅಲಿ ತಾಹಿರ್ (22) ಮತ್ತು  ಬಂಬ್ರಾಣ ಉಳುವಾರಿನ ಅಬ್ದುಲ್ ಜಲೀಲ್ (19) ಎಂಬಿವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.