ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ  ಸಹಸ್ರ ಕಲಶಾಭಿಷೇಕ-ಬ್ರಹ್ಮಕಲಶಾಭಿಷೇಕ ನಾಳೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ  ಸಹಸ್ರ ಕಲಶಾಭಿಷೇಕ-ಬ್ರಹ್ಮಕಲಶಾಭಿಷೇಕ ನಾಳೆ ನಡೆಯಲಿರುವುದು.  ನಾಳೆ ಮುಂಜಾನೆ ೫ರಿಂದ ಗಣಪತಿಹೋಮ, ಕವಾಟೋ ದ್ಘಾಟನೆ, ಶಾಂತಿ, ಪ್ರಾಯಶ್ಚಿತ್ತ ಮತ್ತು ತತ್ವಹೋಮಗಳ ಕಲಶಾಭಿಷೇಕ ನಡೆಯಲಿದೆ. ಅನಂತರ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ಸಹಸ್ರ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಅವಭೃತ ಪ್ರೋಕ್ಷಣೆ, ಮಹಾಪೂಜೆ, ಮಂಗಲಮಂತ್ರಾಕ್ಷತೆ, ರಾತ್ರಿ ೭ರಿಂದ ಶ್ರೀ ದೇವರ ಉತ್ಸವಬಲಿ, ರಾತ್ರಿ ಪೂಜೆ ನಡೆಯಲಿದೆ. ಬೆಳಿಗ್ಗೆ ೧೧.೩೦ಕ್ಕೆ ಶ್ರೀ ಸಂಸ್ಥಾನ ಗೋಕರ್ಣ  ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ  …

ಹೊಳೆಗಳು, ಜಲಮೂಲಗಳು ಬತ್ತಿಬರಡು :ಕುಡಿಯುವ ನೀರಿಗೆ ತೀವ್ರ ಕ್ಷಾಮ

ಕಾಸರಗೋಡು: ಬೇಸಿಗೆ ಮಳೆ ತೀವ್ರಗೊಳ್ಳದ ಹಿನ್ನೆಲೆಯಲ್ಲಿ ಹೊಳೆಗಳು, ಜಲಮೂಲಗಳು ಬತ್ತಿ ಬರಡಾಗಿದ್ದು, ಜಿಲ್ಲೆ ತೀವ್ರ ಬರ ಎದುರಿಸುವ ಹಾಗೂ ಕುಡಿ ಯುವ ನೀರು ಕ್ಷಾಮಕ್ಕೆ ತುತ್ತಾಗುವ ಸಾಧ್ಯತೆ ಕಂಡುಬರುತ್ತಿದೆ. ಬೇಸಿಗೆಯ ಬಿಸಿ ಅತೀವ ಅಸಹನೀಯವಾಗಿ ಮುಂದುವರಿ ಯುತ್ತಿದೆ. ಜನರು ಬೇಯುತ್ತಿದ್ದು, ಕುಡಿ ಯುವ ನೀರು ಕ್ಷಾಮ ಕೂಡ ಎದುರಿ ಸುತ್ತಿರುವುದರಿಂದ ಅತ್ಯಂತ ಸಂಕಷ್ಟ ಉಂಟಾಗಿದೆ. ಕೃಷಿಗೆ ಅಗತ್ಯವಾಗಿರುವ ನೀರು ಲಭಿಸದ ಹಿನ್ನೆಲೆಯಲ್ಲಿ ಕೃಷಿಕರು ಸಂದಿಗ್ಧತೆಯಲ್ಲಿದ್ದಾರೆ. ಹೊಳೆಗಳು ಬತ್ತಿ ಬರಡಾದ ಕಾರಣ ಕೃಷಿಗಾಗಿ ಇಲ್ಲಿಂದ ಉಪಯೋಗಿಸುತ್ತಿದ್ದ ನೀರು ಇಲ್ಲದಂತಾಗಿದೆ. …

ಸೂರ್ಯಾಘಾತವೆಂಬ ಶಂಕೆ: ಕಾರಡ್ಕದಲ್ಲಿ ಗೇರುಬೀಜ ಸಂಗ್ರಹಿಸಲು ತೆರಳಿದ್ದ ವೃದ್ಧ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಗೇರುಬೀಜ ಹೆಕ್ಕಲೆಂದು ಹೋಗಿದ್ದ ವೃದ್ಧ ಗೇರು ತೋಟದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಣ್ಣೂರು ಉದಯಗಿರಿ ಆಲಕ್ಕೋಡ್ ನಿವಾಸಿ, ಕಾರಡ್ಕ ಪಂಚಾಯತ್‌ನ ನೆಚ್ಚಿಪಡ್ಪು ನೀರೋಳಿಪಾರದಲ್ಲಿ  ವಾಸವಾಗಿ ರುವ ಎ.ಡಿ. ದೇವಸ್ಯ (೭೨) ನಿಧನಹೊಂದಿದವರು. ನಿನ್ನೆ ಸಂಜೆ ೩  ಗಂಟೆಗೆ ದೇವಸ್ಯ ಗೇರುಬೀಜ ಹೆಕ್ಕಲು ಹೋಗಿದ್ದರೆನ್ನಲಾಗಿದೆ. ಸಂಜೆ ವೇಳೆಗೆ ಆ ದಾರಿಯಲ್ಲಿ ಹೋದವರು ದೇವಸ್ಯರನ್ನು ಅಸ್ವಸ್ಥ ಸ್ಥಿತಿಯಲ್ಲಿ ಕಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಘಟನೆಯಲ್ಲಿ ಆದೂರು ಪೊಲೀಸರು ಅಸಹಜ ಸಾವಿಗೆ …

ರೈಲಿನ ಗಾಳಿಗೆ ಸಿಲುಕಿ ಬಿದ್ದು ಗಾಯಗೊಂಡ ಬಾಲಕಿ ಮೃತ್ಯು

ಕಾಸರಗೋಡು:  ರೈಲುಗಾಡಿ ಸಂಚರಿಸುವ ವೇಳೆ ಬೀಸಿದ ಬಲವಾದ ಗಾಳಿಗೆ ಸಿಲುಕಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಬಾಲಕಿ ಸಾವನ್ನಪ್ಪಿದ್ದಾಳೆ. ಚೆಂಗಳ ನಾಲ್ಕನೇ ಮೈಲು ತೈವಳಪ್ಪು ನಿವಾಸಿ ಗಲ್ಪ್ ಉದ್ಯೋಗಿ ತಾಹೀರ್ ನಜಾದ್ -ಆಸಿಯ  ದಂಪತಿ ಪುತ್ರಿ ಮರಿಯಂ ನವಾಲ್ ತಾಹೀರ್ (5) ಸಾವನ್ನಪ್ಪಿದ ಬಾಲಕಿ. ಈತಿಂಗಳ ೧೮ರಂದು ಸಂಜೆ ಅಜ್ಜಿ ಅಡ್ಕತ್ತಬೈಲಿನ ನಫೀಸ (52)ರ ಜೊತೆ ಮೊಗ್ರಾಲ್ ನಾಂಗಿಯಲ್ಲಿ ರೈಲು ಹಳಿಯ ಸಮೀಪ ನಡೆದುಹೋಗುತಿದ್ದ ವೇಳೆ   ಮಂಗಳೂರಿನಿಂದ ತಿರುವನಂತಪುರಕ್ಕೆ ಸಂಚರಿಸಿದ ಮಾವೇಲಿ ಎಕ್ಸ್‌ಪ್ರೆಸ್ ರೈಲಿನ ಗಾಳಿಗೆ …

ಹೊಯ್ಗೆ ಸಂಗ್ರಹಿಸುತ್ತಿದ್ದ ವೇಳೆ  ಪೊಲೀಸರನ್ನು ಕಂಡು ಪರಾರಿಯಾದ ಟಿಪ್ಪರ್ ಲಾರಿ ಮಾಲಕ ಸೆರೆ

ಕುಂಬಳೆ: ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸುತ್ತಿದ್ದ ವೇಳೆ ಪೊಲೀಸರನ್ನು ಕಂಡು ಟಿಪ್ಪರ್ ಲಾರಿ ಹಾಗೂ ಹೊಯ್ಗೆ ಸಂಗ್ರಹ ಉಪಕರಣಗಳನ್ನು ಉಪೇಕ್ಷಿಸಿ ಪರಾರಿಯಾದ ಪ್ರಕರಣದಲ್ಲಿ ವಾಹನದ ಆರ್‌ಸಿ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಪೆರಿಯಡ್ಕದ ಎಂ. ಅಶ್ರಫ್ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಹೊಯ್ಗೆ ಲೋಡ್ ಮಾಡುವ ಕಾರ್ಮಿಕರ ಸಹಿತ ಐದು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಇತರ ಆರೋಪಿಗಳಾದ ಲೋಡಿಂಗ್ ಕಾರ್ಮಿಕರಿಗಾಗಿ  ಶೋಧ ಮುಂದುವರಿ ಯುತ್ತಿದೆ. ಮಾರ್ಚ್ ೩೦ರಂದು ಸಂಜೆ ಶಿರಿಯ ಹೊಳೆಯ ಹೇರೂರು ಪೈಯಾರ್‌ಕಡವಿನಲ್ಲಿ ಅನಧಿಕೃತವಾಗಿ …

ಶೇಣಿ ಇಂದಿರಾ ನಿಧನ

ಪೆರ್ಲ: ಹಿರಿಯ ಬಿಜೆಪಿ ಮುಖಂಡ ಶೇಣಿ ಬಾಲಕೃಷ್ಣ ನಾಯಕ್‌ರ ಪತ್ನಿ ಇಂದಿರಾ (52) (ಲತಾ ನಾಯಕ್) ನಿನ್ನೆ ನಿಧನ ಹೊಂದಿದರು. ಕಳೆದ ಕೆಲವು ಸಮಯಗಳಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. 2005ರಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಶೇಣಿ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೃತರು ಪತಿ, ಮಕ್ಕಳಾದ ರೂಪ, ದೀಪ, ಪ್ರದೀಪ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಾಪ್ತಿ

ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಭಗವತಿ ಮಾತೆಯರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಿನ್ನೆ ಸಮಾಪ್ತಿಗೊಂಡಿತು. ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿ ಪೌರೋಹಿತ್ಯ ವಹಿಸಿದರು. ಇದೇ ವೇಳೆ ನಡೆದ ಧಾರ್ಮಿಕ ಸಭೆಯನ್ನು ಒಡಿಯೂರು ಶ್ರೀ ಗುರುದೇವಾ ನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ವಿವಿಧ ವಿಭಾಗಗಳ ಗಣ್ಯರು ಉಪಸ್ಥಿತರಿ ದ್ದರು. ಈ ತಿಂಗಳ 26ರಿಂದ ಮೇ 3ರ ತನಕ ಕ್ಷೇತ್ರದಲ್ಲಿ ಭರಣಿ ಮಹೋತ್ಸವ ವಿವಿಧ ಕಾರ್ಯ ಕ್ರಮಗಳೊಂದಿಗೆ …

ಕುಡಿಯುವ ನೀರು ಕ್ಷಾಮ ತೀವ್ರಗೊಂಡ ಸ್ಥಳಗಳಲ್ಲಿ ಕುಡಿಯುವ ನೀರು ವಿತರಣೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ನಿರ್ದೇಶ

ಕಾಸರಗೋಡು: ಕುಡಿಯುವ ನೀರು ಕ್ಷಾಮ ತೀವ್ರಗೊಳ್ಳುತ್ತಿರುವ  ಹಿನ್ನೆಲೆಯಲ್ಲಿ ಎಲ್ಲಾ ಪ್ರದೇಶಗಳಿಗೂ ಕುಡಿಯುವ ನೀರು ಲಭಿಸುತ್ತದೆಯೇ ಎಂಬುದನ್ನು ಖಚಿತಪಡಿಸಬೇಕೆಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನಿರ್ದೇಶ ನೀಡಿದರು. ಜಿಲ್ಲಾಧಿಕಾರಿ ಚೇಂಬರ್‌ನಲ್ಲಿ ನಡೆದ ಜಿಲ್ಲಾ ಬರ ಅವಲೋಕನ ಸಭೆಯಲ್ಲಿ ಜಿಲ್ಲಾಧಿಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಈ ನಿರ್ದೇಶ ನೀಡಿದ್ದಾರೆ. ತೀವ್ರವಾದ ಕುಡಿಯುವ ನೀರು ಕ್ಷಾಮ ಎದುರಿಸುವ ಪ್ರದೇಶಗಳಲ್ಲಿ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಲಭ್ಯಗೊಳಿಸುವುದಕ್ಕೆ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತ ಇಲಾಖೆಯ ಜೋಯಿಂಟ್ ಡೈರೆಕ್ಟರ್‌ಗೆ ಹೊಣೆ ನೀಡಲಾಗಿದೆ. ವಿದ್ಯುತ್  ವಿತರಣೆಯಲ್ಲಿನ ತಡೆಯನ್ನು ಪರಿಹರಿಸಿ ಬಾವಿಕ್ಕರೆ …

ರಜಾ ಕಾಲದಲ್ಲಿ ಉಲ್ಲಾಸ ಮೂಡಿಸಲು ಕೈಕಂಬದಲ್ಲಿ ಎಕ್ಸ್‌ಪೋ ಇಂದಿನಿಂದ

ಕುಂಬಳೆ: ರಜಾ ಕಾಲದಲ್ಲಿ ಉಲ್ಲಾಸದಿಂದಿರಲು ಉಪ್ಪಳ ಎಕ್ಸ್‌ಪೋ ಇಂದಿನಿಂದ ಆರಂಭಗೊಳ್ಳಲಿದೆ. ಏಷ್ಯನ್ ಟೂರ್ಸ್ ಆಂಡ್ ಟ್ರಾವಲ್ಸ್ ಇರಿಟ್ಟಿ ಕಾರ್ಯಕ್ರಮವನ್ನು ಪ್ರಾಯೋಜಿಸಿದೆ. ಸಂಜೆ 3 ಗಂಟೆಯಿಂದ ರಾತ್ರಿ ೧೦.೩೦ರ ವರೆಗೆ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 8ಗಂಟೆಯಿಂದ 10.30ರ ವರೆಗೆ ಪ್ರತೀ ದಿನ ಮಲಯಾಳದ ಖ್ಯಾತರಾದ ಕಲಾವಿದರು ಭಾಗವಹಿಸುವ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ. ಮಕ್ಕಳಿಗೆ, ಹಿರಿಯರಿಗೆ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮಗಳು, ಸ್ಥಳದಲ್ಲೇ ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮದಂಗವಾಗಿ ಫ್ಲವರ್ ಶೋ, ಅಪೂರ್ವ ವಿಭಾಗದ ಹೂ ಕುಂಡಗಳು ಸಹಿತವಿರುವ ಸಾಮಗ್ರಿಗಳ …

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹೆಸರಲ್ಲಿ ಮೋಟಾರು ಕಾರ್ಮಿಕರಿಗೆ, ಸಾರ್ವಜನಿಕರಿಗೆ ತೊಂದರೆಯಾಗದಿರಲಿ-ಟ್ಯಾಕ್ಸಿ ಆಂಡ್ ಲೈಟ್ ವೆಹಿಕಲ್ ಯೂನಿಯನ್

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಹೆಸರಲ್ಲಿ ಮೋಟಾರು ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಯಾಗದಂತೆ   ಅಧಿಕಾರಿಗಳು ಜಾಗ್ರತೆ ವಹಿಸಬೇಕೆಂದು ಟ್ಯಾಕ್ಸಿ ಆಂಡ್ ಲೈಟ್ ಮೋಟಾರ್ ವೆಹಿಕಲ್  ಯೂನಿಯನ್ (ಬಿಎಂಎಸ್) ಜಿಲ್ಲಾ ಸಮ್ಮೇಳನ ಒತ್ತಾಯಿಸಿದೆ. ಸಮ್ಮೇಳನದಲ್ಲಿ ಜಿಲ್ಲಾಧ್ಯಕ್ಷ ಸುನಿಲ್ ವಾಳಕ್ಕೋಡ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಅನಿಲ್ ಬಿ ನಾಯರ್, ಹರೀಶ್ ಕುದ್ರೆಪ್ಪಾಡಿ, ರಾಜೇಶ್ ಪೊಳ್ಳಕ್ಕಡ, ರಾಜೀವನ್ ಮಾವುಂಗಾಲ್, ಗೀತಾ ಬಾಲಕೃಷ್ಣನ್ ಮಾತನಾಡಿದರು. ನೂತನ ಪದಾಧಿ ಕಾರಿಗಳಾಗಿ ಸುನಿಲ್ ವಾಳಕ್ಕೋಡ್ (ಅಧ್ಯಕ್ಷ), ಚಂದ್ರನ್ …