ಕುಂಬಳೆ-ಕಂಚಿಕಟ್ಟೆ ರಸ್ತೆಯಲ್ಲಿ ಸಂಚಾರಕ್ಕೆ ಆತಂಕ: ಒಂದೆಡೆ ರಸ್ತೆಯಲ್ಲಿ ಹೊಂಡ ಸೃಷ್ಟಿ ಇನ್ನೊಂದೆಡೆ ಮಾನವ ನಿರ್ಮಿತ ಹೊಂಡ

ಕುಂಬಳೆ: ಕುಂಬಳೆಯಿಂದ ಕೊಡ್ಯಮ್ಮೆ ಭಾಗಕ್ಕೆ ತೆರಳುವ ರಸ್ತೆ ಮಧ್ಯೆ ಕಂಚಿಕಟ್ಟೆಯಲ್ಲಿ ಆಳದ ಗುಹೆ ಪ್ರತ್ಯಕ್ಷಗೊಂಡಿದೆ. ಡಾಮರು ರಸ್ತೆಯ ಮಧ್ಯೆ ಹೊಂಡ ಸೃಷ್ಟಿಯಾಗಿದ್ದು, ಅದು ಒಳಗೆ ಆಳವಾಗಿ ಕಾಣಿಸುತ್ತಿದೆ. ಇದರಿಂದ ಇಕ್ಕಟ್ಟಾದ ಈ ರಸ್ತೆಯಲ್ಲಿ ಹೊಂಡ ಸೃಷ್ಟಿಯಾಗಿರುವುದು  ಅಪಾಯ ಭೀತಿಯೊಡ್ಡುತ್ತಿದೆ. ಇದರಿಂದ ಸ್ಥಳೀ ಯರು ಅಲ್ಲಿ ಕಲ್ಲುಗಳನ್ನಿರಿಸಿ ಮುನ್ಸೂ ಚನೆ ನೀಡದ್ದಾರೆ. ಈ ಹೊಂಡವನ್ನು ಶೀಘ್ರ ಮುಚ್ಚದಿದ್ದಲ್ಲಿ ರಸ್ತೆ ಪೂರ್ಣ ಹೊಂಡವಾಗಿ ಮಾರ್ಪಾಡುಗೊಳ್ಳಲಿ ವೆಯೆಂದು ಸ್ಥಳೀಯರು ಹೇಳುತ್ತಿದ್ದಾರೆ. ಇದೇ ರಸ್ತೆಯಲ್ಲಿ ಇನ್ನೊಂದೆಡೆ ಮಾನವನ ಕೆಲಸದಿಂದ ರಸ್ತೆ ಹಾನಿಗೀ ಡಾಗಿದ್ದು, …

ನಾಡು ಅಭಿವೃದ್ಧಿಗಾಗಿ ಕಾಯುತ್ತಿರುವಾಗ ರೀಲ್ಸ್‌ನಲ್ಲಿ ಸಕ್ರಿಯರಾದ ಪಂ. ಜನಪ್ರತಿನಿಧಿಗಳು: ಕಾರ್ಯಕರ್ತರಿಂದ ತೀವ್ರ ಟೀಕೆ

ಕುಂಬಳೆ: ಜನರು ಉತ್ತಮ ನಿರೀಕ್ಷೆಯಿರಿಸಿ ಜನಪ್ರತಿನಿಧಿಗಳನ್ನು ಆಯ್ಕೆಮಾಡಿ ಉತ್ತಮ ಆಡಳಿತಕ್ಕಾಗಿ ಕಾದು ನಿಂತಿದ್ದರೆ ಜನಪ್ರತಿನಿಧಿಗಳಿಗೆ ಅದೇನು ಸಂಭವಿಸಿತು ಎಂದು ತಿಳಿಯದೆ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕುಂಬಳೆ ಪಂಚಾಯತ್ ಹಾಗೂ ಮಂಜೇಶ್ವರ ವಲಯದ ಜನಪ್ರತಿನಿ ಧಿಗಳ ನಡವಳಿಕೆಯಿಂದ ಅವರ ಬೆಂಬಲಿಗರು ಕೂಡಾ ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಜನ ಪ್ರತಿನಿಧಿಗಳು ಈಗ ರೀಲ್ಸ್‌ನಲ್ಲೇ ಮುಳುಗಿದ್ದಾರೆ ಎಂದು ಲೀಗ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಅಭಿವೃದ್ಧಿ ವಿಷಯಗಳ ಬಗ್ಗೆ ಕೇಳಿದರೆ ಜನಪ್ರತಿನಿಧಿಗಳಿಂದ ಯಾವುದೇ ಉತ್ತರವಿಲ್ಲ. ಇದು ಕುಂಬಳೆ ಪಂಚಾಯತ್‌ನ ಮುಸ್ಲಿಂ ಲೀಗ್‌ನಲ್ಲಿ ಹೊಸ ವಿವಾದ  ಹುಟ್ಟುಹಾಕಿದೆ. …

ರಾಜಕೀಯ ಕಲಿಕೆ ನಿರಂತರ ಪ್ರಕ್ರಿಯೆ- ಕೆ. ರಂಜಿತ್

ಪೈವಳಿಕೆ : ಬಿಜೆಪಿ ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷ. ಪಕ್ಷದ ಸಿದ್ದಾಂತ, ತತ್ವ ಜೊತೆಗೆ ಚರಿತ್ರೆ ಮತ್ತು ಇತಿಹಾಸ ಹಾಗೂ ಪಕ್ಷದ ಮುಂದಿನ ಯೋಜನೆಗಳನ್ನು ಯುವ ಕಾರ್ಯಕರ್ತರು ಕಲಿತು ಪಕ್ಷದ ಕಾರ್ಯ ಚಟುವಟಿಕೆ ಮಾಡಿದರೆ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಹೇಳಿದರು.ಬಿಜೆಪಿ ಮಂಜೇಶ್ವರ ಮಂಡಲ ಪ್ರಶಿಕ್ಷಣ ಶಿಬಿರ ಸಜಂಕಿಲ ಆವಳ ಮಠ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ಗೈದರು.ಜಿಲ್ಲಾ …

ಅಂತಾರಾಷ್ಟ್ರೀಯ ಮಾದಕವಿರೋಧಿ ದಿನದಂಗವಾಗಿ ಜಾಗೃತಿ ಜಾಥಾ

ಮಂಜೇಶ್ವರ: ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗ ವಾಗಿ, ಲಹರಿಮುಕ್ತ ಸಮಾಜ ನಿರ್ಮಾ ಣದ ಸಂಕಲ್ಪದೊAದಿಗೆ ಮಂಜೇಶ್ವರ ಪೊಲೀಸ್ ಠಾಣೆ ಮತ್ತು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ತೂಫಾನ್ ದಿ ನಾರ್ಕೋ ಹಂಟ್’ ಅಭಿಯಾನ ಯಶಸ್ವಿಯಾಗಿ ನಡೆಯಿತು. ಉಪ್ಪಳದಿಂದ ತಲಪಾಡಿವರೆಗೆ ನಡೆದ ಲಹರಿವಿರೋಧಿ ಜಾಗೃತಿ ಜಾಥಾಕ್ಕೆ ಕಾಸರಗೋಡು ಎಎಸ್‌ಪಿ ಅಚ್ಯುತ್ ಅಶೋಕ್ ನೇತೃತ್ವ ವಹಿಸಿದ್ದರು.ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿ ಮಾತನಾಡಿದರು. 3 ಗಂಟೆಗೆ ಆರಂಭವಾದ ಜಾಥಾದಲ್ಲಿ ಶಾಲಾ ವಿದ್ಯಾರ್ಥಿಗಳು, ಎಸ್‌ಪಿಸಿ ಕೆಡೆಟ್‌ಗಳು, ಟ್ರೋಮಾಕೇರ್ …

ಕ್ಷೇಮನಿಧಿ ಸದಸ್ಯರಿಗೆ ಪಿಂಚಣಿ, ಸೌಲಭ್ಯ ಸೂಕ್ತ ಸಮಯಕ್ಕೆ ನೀಡಲು ಬಿಎಂಎಸ್ ಆಗ್ರಹ

ಕಾಸರಗೋಡು: ರಾಜ್ಯದಲ್ಲಿ ಅದಲಿಬದಲಿಯಾಗಿ ಆಡಳಿತ ನಡೆಸುವ ಸರಕಾರಗಳು ಕಾರ್ಮಿಕರೊಂದಿಗೆ ತೋರಿಸುವ ಅವಗಣನೆ ಬದಲಿಸಬೇಕೆಂದು, ಕ್ಷೇಮನಿಧಿಯಲ್ಲಿ ಸದಸ್ಯರಾದ ಕಾರ್ಮಿಕರಿಗೆ ಸೂಕ್ತ ಸಮಯದಲ್ಲಿಯೇ ಪಿಂಚಣಿ ಹಾಗೂ ಇತರ ಸೌಲಭ್ಯಗಳನ್ನು ನೀಡಲಿರುವ ಕ್ರಮವನ್ನು ರಾಜ್ಯ ಸರಕಾರ ಶೀಘ್ರವೇ ಕೈಗೊಳ್ಳಬೇಕೆಂದು ಬಿಎಂಎಸ್ ಚೆಂಗಳ ಪಂಚಾಯತ್ ಸಮ್ಮೇಳನ ಆಗ್ರಹಿಸಿದೆ. ಎನ್‌ಜಿಒ ಸಂಘ್ ಜಿಲ್ಲಾ ಉಪಾಧ್ಯಕ್ಷ ರಾಜೇಶ್ ನೆಕ್ರಾಜೆ ಉದ್ಘಾಟಿಸಿ ಮಾತನಾಡಿದರು. ಬಿಎಂಎಸ್ ಚೆಂಗಳ ಪಂಚಾಯತ್ ಅಧ್ಯಕ್ಷೆ ಚಿತ್ರಕಲಾ ಮಾವಿನಕಟ್ಟೆ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಕಾಸರಗೋಡು ವಲಯ ಕಾರ್ಯದರ್ಶಿ ಬಾಬು ಮೋನ್ ಚೆಂಗಳ, ನಿರ್ಮಾಣ ಕಾರ್ಮಿಕರ …

ರಾ. ಹೆದ್ದಾರಿಯಲ್ಲಿ ಕರ್ತವ್ಯದಲ್ಲಿದ್ದಾಗ ಕಾರು ಢಿಕ್ಕಿ: ಕಾಲುಗಳನ್ನು ಕಳೆದುಕೊಂಡ ಪೊಲೀಸ್ ಅಧಿಕಾರಿ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದು ಗಾಯಗೊಂಡ ಸಿವಿಲ್ ಪೊಲೀಸ್ ಆಫೀಸರ್‌ರ ಎರಡೂ ಕಾಲುಗಳನ್ನು ತುಂಡರಿ ಸಬೇಕಾದ ಅತೀ ದಯನೀಯ ಸ್ಥಿತಿ ಉಂಟಾಗಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಪಿಲಿಕ್ಕೋಡ್ ನಿವಾಸಿ ಕೆ.ಎಂ. ಸೂರಜ್‌ರ ಕಾಲು ಗಳನ್ನು ಕತ್ತರಿಸಿ ತೆಗೆಯಲಾಯಿತು. ಬಲಕಾಲಿಗೆ ಶೇ. 70ರಷ್ಟು ಗಾಯವುಂ ಟಾಗಿತ್ತು. ಮೂರುಬಾರಿ ಶಸ್ತ್ರ ಚಿಕಿತ್ಸೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಈ ಕಾಲನ್ನು ಕತ್ತರಿಸಿ ತೆಗೆಯಲಾಯಿತು.ಕಾಲು ಕತ್ತರಿಸಿ ತೆಗೆಯಬೇಕಾಗಿ ಬಂದ ಇನ್ನೋರ್ವ ಸಿವಿಲ್ ಪೊಲೀಸ್ ಆಫೀಸರ್ ಚಿಟ್ಟಾರಿಕ್ಕಲ್ …

ಜಿಲ್ಲೆಯಾದ್ಯಂತ ಪೋಲಿಯೊ ಲಸಿಕೆ ಅಭಿಯಾನ

ಮಂಜೇಶ್ವರ: ಪೋಲಿಯೊ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊAದಿಗೆ ನಿನ್ನೆ ಜಿಲೆ್ಲüಯಾದ್ಯಂತ ಪೋಲಿಯೊ ಲಸಿಕಾ ಅಭಿಯಾನ ನಡೆಯಿತು. ಅಭಿಯಾನದಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೈಜೋಡಿಸಿ ಯಶಸ್ವಿಗೊಳಿಸಿದರು. ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪಂಚಾಯತ್‌ನ ವಿವಿಧ ಭಾಗಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಜಿ.ಎಚ್.ಎಸ್ ಅಂಗನವಾಡಿ, ಉದ್ಯಾವರ ಅಂಗನವಾಡಿ ಮತ್ತು ತಲಪಾಡಿ ಬಸ್ ನಿಲ್ದಾಣದಲ್ಲಿ ನಡೆದ ಲಸಿಕಾ ಕಾರ್ಯಕ್ರಮಗಳಿಗೆ ಪಂಚಾಯತ್ ಸದಸ್ಯರಾದ ಮುಕ್ತಾರ್ ಎ, …

ಹಗ್ಗ ಜಗ್ಗಾಟ ಕ್ರೀಡಾಪಟು ನೇಣು ಬಿಗಿದು ಮೃತ್ಯು

ಕಾಸರಗೋಡು: ರಾಷ್ಟ್ರೀಯ ಹಗ್ಗ ಜಗ್ಗಾಟ ಕ್ರೀಡಾಪಟು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಪುಲ್ಲೂರು ಎ.ಕೆ.ಜಿ. ಕ್ಲಬ್ ಸಮೀಪದ ನಿವಾಸಿ ಇಟ್ಟು ಯಾನೆ ಬೈಜು (37) ಮೃತಪಟ್ಟ ವ್ಯಕ್ತಿ. ಇವರು ಕಾಸರ ಗೋಡಿನಲ್ಲಿ ಮೊಬೈಲ್ ಟವರ್‌ನ ಸೆಕ್ಯೂ ರಿಟಿ ನೌಕರನಾಗಿದ್ದರು. ಶನಿವಾರ ಸಂಜೆ 4 ಗಂಟೆಗೆ ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ರಾಷ್ಟ್ರೀಯ ಹಗ್ಗಾ ಜಗ್ಗಾಟ ಪಂದ್ಯಾಟದಲ್ಲಿ ರಾಜ್ಯವನ್ನು ಪ್ರತಿನಿಧೀಕರಿಸಿ ಮೂರು ಬಾರಿ ಸ್ಪರ್ಧಿಸಿ ಪದಕ ಗೆದ್ದಿದ್ದರು. ಕಾಸರಗೋಡು ಜಿಲ್ಲಾಪರವಾಗಿ ಹಲವು ಬಾರಿ …

ನೀಲೇಶ್ವರ ಕ್ಷೇತ್ರದಿಂದಕಳವುಗೈದ ಆರೋಪಿ ಸೆರೆ

 ಕಾಸರಗೋಡು: ನೀಲೇಶ್ವರ ಕೋಟಪ್ಪುರಂನ ದೇವಸ್ಥಾನದಿಂದ ಕಾಣಿಕೆ ಹಣ ಕಳವು ನಡೆಸಿದ ಆರೋಪಿಯೋರ್ವ ಸೆರೆಗೀಡಾಗಿದ್ದಾನೆ. ಪತ್ತನಂತಿಟ್ಟ ನಿವಾಸಿ ವಿಷ್ಣು (32) ಎಂಬಾತ ಬಂಧಿತ ಆರೋಪಿ. ವಾಳಯಾರ್ ನಿಂದ ಈತನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಮೇ ೨೪ರಂದು ಕೋಟಪ್ಪುರಂ ಶ್ರೀ ವೈಕುಂಠ ಕ್ಷೇತ್ರಕ್ಕೆ ನುಗ್ಗಿದ ಆರೋಪಿ ಆರು ಕಾಣಿಕೆ ಹುಂಡಿಗಳ ಬೀಗ ಮುರಿದು ಅಂದಾಜು 2೦ ಸಾವಿರ ರೂ. ಕಳವುಗೈದಿದ್ದನು. ರಾಜ್ಯದ ವಿವಿಧೆಡೆ ನಡೆದ ಕಳವು ಪ್ರಕರಣಗಳಲ್ಲಿ ಈತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹದ ಹೆಸರಲ್ಲಿ ರಾಜಕೀಯ ಲಾಭ ಗಳಿಸಲು ಮುಸ್ಲಿಂಲೀಗ್ ಪ್ರಯತ್ನಿಸುತ್ತಿರುವುದು ಖಂಡನೀಯ-ಎಂ.ಎಲ್. ಅಶ್ವಿನಿ

ಉಪ್ಪಳ: ಅಸೌಖ್ಯ ಬಾಧಿಸಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹದ ಹೆಸರಲ್ಲಿ ರಾಜಕೀಯ ಲಾಭ ಗಳಿಸಲು ಮುಸ್ಲಿಂಲೀಗ್ ಹಾಗೂ ಲೀಗ್‌ನ ಜನಪ್ರತಿನಿಧಿಗಳು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಸದಸ್ಯನ ಅಂತ್ಯ ಸಂಸ್ಕಾರದ ಖರ್ಚು ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದಕ್ಕಿರುವ ಅನುಮತಿಯನ್ನು ಜನಪ್ರತಿನಿಧಿಗಳಿಗೆ ನೀಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರದ ಖರ್ಚು ವಹಿಸಿರು ವುದು, ಸಂಸ್ಕಾರ ಕಾರ್ಯಗಳಿಗೆ ನೇತೃತ್ವ ನೀಡಿರುವುದು ಸೇವಾಭಾರತಿಯಾಗಿದೆ …