ಹೃದಯಾಘಾತ: ಚಾಲಕ ನಿಧನ

ಮಾನ್ಯ: ಕಾರ್ಮಾರು ಬಳಿಯ ಚೆಡೇಕಲ್ಲು ನಿವಾಸಿ ವಿನ್ಸೆಂಟ್ ಡಿಸೋಜಾ (63) ಇಂದು ಮುಂ ಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ವಾಹನ ಚಾಲಕನಾಗಿ ಕೆಲಸ ನಿರ್ವಹಿಸುತ್ತಿ ದ್ದರು. ಮೃತರು ಪತ್ನಿ ಅಲಿಸ್ ಡಿಸೋಜಾ, ಮಕ್ಕಳಾದ ಪ್ರವೀಣ್ ಡಿಸೋಜಾ, ಪವಿತಾ ಡಿಸೋಜಾ, ಪ್ರಮಿತಾ ಡಿಸೋಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ ಕೊಲ್ಲಂಗಾನ ಸಂತ ಥೋಮಸ್‌ರ ದೇವಾಲಯದಲ್ಲಿ ನಡೆಯಲಿದೆ.

ಮನೆಯಿಂದ ವಿದೇಶಿ ಕರೆನ್ಸಿ ಸೇರಿ 4೦೦೦ ರೂ.ಕಳವು

ಬದಿಯಡ್ಕ: ಕಳ್ಳರು ಮನೆಗೆ ನುಗ್ಗಿ ವಿದೇಶಿ ಕರೆನ್ಸಿ ಹಾಗೂ 4೦೦೦ ರೂ. ಕಳವು ಗೈದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ಶೇಣಿ ಮಣಿಯಂಪಾರ ಹೌಸ್‌ನ ಮುಹಮ್ಮೂದ್ ಮೂಸಾನ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಆ ಬಗ್ಗೆ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜನವರಿ 12ರಂದು ಸಂಜೆ 6 ಗಂಟೆ ಮತ್ತು 7.30 ರ ನಡುವೆ ತಮ್ಮ ಮನೆಯ ಬಾಗಿಲ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಮನೆಯೊಳಗಿನ ಕಪಾಟ್‌ನಲ್ಲಿ …

ಸಂಚರಿಸುತ್ತಿದ್ದ ರೈಲಿನಿಂದ ಬಿದ್ದು ನಾರಂಪಾಡಿ ನಿವಾಸಿ ಮೃತ್ಯು

ಬದಿಯಡ್ಕ: ಸಂಚರಿಸುತ್ತಿದ್ದ ರೈಲಿನಿಂದ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.  ನಾರಂಪಾಡಿ ನಿವಾಸಿ ಇಬ್ರಾಹಿಂ ಅಲ್ತಾಫ್ (18) ಮೃತಪಟ್ಟ ಯುವಕ. ನಿನ್ನೆ ಬೆಳಿಗ್ಗೆ ೬.೪೫ರ ವೇಳೆ ಕಣ್ಣೂರು ತಾಳೆಚೊವ್ವ ಎಂಬಲ್ಲಿ ದುರ್ಘಟನೆ ಸಂಭವಿಸಿದೆ. ಇಬ್ರಾಹಿಂ ಅಲ್ತಾಫ್ ಕಲ್ಲಿಕೋಟೆಯಿಂದ ಸ್ನೇಹಿತರೊಂದಿಗೆ ಮಲಬಾರ್ ಎಕ್ಸ್‌ಪ್ರೆಸ್‌ನಲ್ಲಿ ಕಾಸರಗೋಡಿಗೆ  ಬರುತ್ತಿದ್ದಾಗ ಈ ಘಟನೆ ನಡೆದಿದೆ. ನಾಲ್ವರು ವಿದ್ಯಾರ್ಥಿಗಳೊಂದಿಗೆ ಇತ್ತೀಚೆಗೆ ಈತ ಪ್ರವಾಸಕ್ಕೆಂದು ತೆರಳಿದ್ದನು.  ಇಬ್ರಾಹಿಂ ಅಲ್ತಾಫ್ ರೈಲಿನಿಂದ ಬೀಳುವುದನ್ನು ಕಂಡ ಸ್ನೇಹಿತರು ಹಾಗೂ ಇತರ ಪ್ರಯಾಣಿಕರು ಕೂಡಲೇ ಪೊಲೀಸರಿಗೆ ತಿಳಿಸಿದ್ದರು. ಬಳಿಕ …

ಆಹಾರ ಅನ್ನನಾಳದಲ್ಲಿ ಸಿಲುಕಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು

ಕಾಸರಗೋಡು: ಆಹಾರ ಅನ್ನನಾಳದಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟಳು. ಭೀಮನಡಿ ಒರಿತ್ತಾಯಿಲ್‌ನ ಜೈಮೋನ್ ಜೋಸ್ ಎಂಬವರ ಪುತ್ರಿ ಆಗ್ನಸ್ ಜೈಮೋನ್ (21) ಮೃತಪಟ್ಟ ಯುವತಿ. ಈ ತಿಂಗಳ ೬ರಂದು ರಾತ್ರಿ ಆಹಾರ ಸೇವಿಸುತ್ತಿದ್ದಾಗ ಅನ್ನನಾಳದಲ್ಲಿ ಸಿಲುಕಿತ್ತೆನ್ನಲಾಗಿದೆ. ಇದರಿಂದ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿ ನಿನ್ನೆ ಮೃತಪಟ್ಟಳು.

ಅನಂತಪುರ ಸುಡುಮದ್ದು ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರಿಗೆ ಗಾಯ; ಮಾಲಕಿ ವಿರುದ್ಧ ಕೇಸು ದಾಖಲು

ಕುಂಬಳೆ: ಅನಂತಪುರ ಉದ್ದಿಮೆ ಎಸ್ಟೇಟ್‌ನಲ್ಲಿ ಕಾರ್ಯವೆಸಗುತ್ತಿರುವ ರೆಡ್‌ಫೋರ್ಟ್ ಫಯರ್ ವರ್ಕ್ಸ್ ಎಂಬ ಸುಡುಮದ್ದು ನಿರ್ಮಾಣ ಕಾರ್ಖಾನೆಯಲ್ಲಿ ನಿನ್ನೆ ಸ್ಫೋಟ ಉಂಟಾಗಿ ಅದರ ಮಿಕ್ಸಿಂಗ್ ಘಟಕ ಪೂರ್ಣವಾಗಿ ಕುಸಿದು ಬಿದ್ದಿದೆ. ಅಲ್ಲೇ ಪಕ್ಕ ರಾಶಿ ಹಾಕಲಾಗಿದ್ದ ಕಸದ ರಾಶಿಗೆ ಹಾಕಿದ್ದ ಬೆಂಕಿಯಿಂದ ಕಾರ್ಖಾನೆಗೆ ಬೆಂಕಿ ತಗಲಿಕೊಂಡಿರುವುದಾಗಿ ಸಂಶಯಿಸಲಾಗುತ್ತಿದೆ. ಅನಾಹುತ ಸಂಭವಿಸಿದ ವೇಳೆ ಅಲ್ಲಿಂದ ಪ್ರಾಣ ರಕ್ಷಣೆಗಾಗಿ ಓಟಕಿತ್ತ ಇಬ್ಬರು ಕಾರ್ಮಿಕರಾದ ತಮಿಳುನಾಡು ಶಿವಕಾಶಿ ನಿವಾಸಿಗಳಾದ ಶಂಕರ ಮತ್ತು ಕುರುಪ್ಪ ಸ್ವಾಮಿ ಎಂಬವರು ಬಿದ್ದು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ನಿನ್ನೆ …

ವ್ಯಕ್ತಿಯಿಂದ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತ ಕೊಳವೆ ಬಾವಿ ನಿರ್ಮಾಣ: ಪಂ. ಸದಸ್ಯನ ನೇತೃತ್ವದಲ್ಲಿ ತಡೆ

ಉಪ್ಪಳ: ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ಹೊತ್ತಲ್ಲಿ ವ್ಯಕ್ತಿಯೋರ್ವರು ಕೊಳವೆ ಬಾವಿ ಯನ್ನು ನಿರ್ಮಿಸಲು ಮುಂದಾಗಿದ್ದು ಈ ವೇಳೆ ವಾರ್ಡ್ ಸದಸ್ಯರ ನೇತೃತ್ವದಲ್ಲಿ ಊರವರು ತಡೆದ ಘಟನೆ ಸೋಂಕಾಲಿನಲ್ಲಿ ನಡೆದಿದೆ. ಮಂಗಲ್ಪಾಡಿ ಪಂಚಾಯತ್‌ನ ಸೋಂಕಾಲಿನಲ್ಲಿ ನೂತನವಾಗಿ ನಿರ್ಮಾಣ ಗೊಂಡ ಫ್ಲಾಟ್‌ನ ಮುಂಭಾಗದಲ್ಲಿ ಅನಧಿಕೃತ ವಾಗಿ ನಿನ್ನೆ ರಾತ್ರಿ ಸುಮಾರು 9.30ರ ವೇಳೆ ಕೊಳವೆ ಬಾವಿಯನ್ನು ನಿರ್ಮಿಸಲು ಪ್ರಾರಂಭಿ ಸಲಾಗಿದೆ. ಮಾಹಿತಿ ತಿಳಿದು 7ನೇ ವಾರ್ಡ್ ಸದಸ್ಯ ವಸಂತ ಕುಮಾರ್ ಮಯ್ಯರ ನೇತೃತ್ವ ದಲ್ಲಿ ಊರವರು ತಲುಪಿ ಕಾಮಗಾರಿಯನ್ನು ಮುಂದುವರಿಸದAತೆ …

ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ವಾರ್ಷಿಕ ಜಾತ್ರೆ ನಾಳೆಯಿಂದ

ಕುಂಬಳೆ: ಪ್ರಸಿದ್ಧ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ವರ್ಷಾವಧಿ ಜಾತ್ರಾ ಮಹೋತ್ಸವ ನಾಳೆಯಿಂದ ಆರಂಭಗೊಳ್ಳಲಿದೆ.  ನಾಳೆ ಬೆಳಿಗ್ಗೆ 8ರಿಂದ ಸೋಪಾನ ಸಂಗೀತ, 9.30ರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, 10ಕ್ಕೆ ಶ್ರೀ ಬಲಿ, ಧ್ವಜಾರೋಹಣ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ನಿತ್ಯ ಬಲಿ, ಅನ್ನ ಸಂತರ್ಪಣೆ, ಸಂಜೆ ೫ಕ್ಕೆ ನಡೆ ತೆರೆಯುವುದು, 5.15ರಿಂದ ಯಕ್ಷಗಾನ ಬಯಲಾಟ, 6.30ಕ್ಕೆ ದೀಪಾರಾಧನೆ, ರಾತ್ರಿ 7.30ರಿಂದ ರಂಗಪೂಜೆ, ಉತ್ಸವ ಶ್ರೀ ಭೂತಬಲಿ ನಡೆಯಲಿರುವುದು. ವಾರ್ಷಿಕೋತ್ಸವದಂಗವಾಗಿ ಈ ತಿಂಗಳ 18ರವರೆಗೆ ವಿವಿಧ ವೈದಿಕ, …

ಕಲ್ಲಂಗೈ ಸರ್ವೀಸ್ ರಸ್ತೆಯಲ್ಲಿ ಗುಡ್ಡೆ ಕುಸಿತ: ಶಾಲಾ ಕಟ್ಟಡ ಅಪಾಯಭೀತಿಯಲ್ಲಿದ್ದರೂ ಅಧಿಕಾರಿಗಳಿಗೆ ಮೌನ

ಕುಂಬಳೆ: ಗುಡ್ಡೆ ಕುಸಿತ ಮುಂದುವರಿಯುತ್ತಿರುವ ಮೊಗ್ರಾಲ್‌ಪುತ್ತೂರು ಕಲ್ಲಂಗೈ ಎಎಲ್‌ಪಿ ಶಾಲೆ ಬಳಿ ಗೋಡೆ ಕಟ್ಟಿ ಸಂರಕ್ಷಣೆ ಖಚಿತಪಡಿಸುವುದರಲ್ಲಿ ಅಧಿಕಾರಿಗಳು ಅನಾಸ್ಥೆ ತೋರುತ್ತಿರುವುದು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಮೂಲಕ ಇರುವ ಪ್ರಯಾಣಿಕರಿಗೆ ಬೆದರಿಕೆಯಾಗುತ್ತಿದೆ. ಸ್ಥಳೀಯರು ಆತಂಕದಲ್ಲಿದ್ದಾರೆ. ಈ ಮೊದಲು ಕೂಡಾ ಈ ಬಗ್ಗೆ ಸುದ್ಧಿ ಪ್ರಕಟಗೊಂಡಿತ್ತು. ಶಾಲಾ ಮೆನೇಜ್‌ಮೆಂಟ್ ಇದುವರೆಗೂ ಈ ಬಗ್ಗೆ ಬಾಯಿ ತೆರೆದಿಲ್ಲ. ಈ ಮೂಲಕ ಸಂಚರಿಸುವ ವಾಹನಗಳಿಗೆ, ಪ್ರಯಾಣಿಕರಿಗೆ ಶಾಲಾ ಕಟ್ಟಡ ಭಾರೀ ಬೆದರಿಕೆಯೊಡ್ಡುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಮಣ್ಣು ತೆಗೆದಾಗ ಶಾಲಾ …

ಭಾಷಾ ಮಸೂದೆ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಹೇಳಿಕೆ ವಾಸ್ತವ ವಿರುದ್ಧ-ಕೆ.ಆರ್. ಜಯಾನಂದ

ಮಂಜೇಶ್ವರ: ಕೇರಳ ಸರಕಾರ ಮಂಡಿಸಿ ಅಂಗೀಕರಿಸಿದ ಮಲೆಯಾಳಂ ಭಾಷಾ ಮಸೂದೆಯ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಹಾಗೂ ಸಚಿವರು ಹೇಳಿಕೆ ನೀಡುತ್ತಿರುವುದು ಖಂಡನೀಯವೆಂದು,  ಇದು ಕೇರಳ ವಿರೋಧಿ ಧೋರಣೆಗೆ ಉದಾಹರಣೆಯಾಗಿದೆಯೆಂದು ಸಿಪಿಎಂ ಮಂಜೇಶ್ವರ  ಏರಿಯಾ ಕಾರ್ಯದರ್ಶಿ ಕೆ.ಆರ್. ಜಯಾನಂದ ಆರೋಪಿಸಿದ್ದಾರೆ. ವರ್ಷಗಳ ಹಿಂದೆ  ಮಂಡಿಸಿ ಅಂಗೀಕರಿಸಿದ ಮಲೆಯಾಳಂ ಭಾಷಾ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕದೆ ಮರಳಿಸಿದ್ದರು.  ಆ ಬಳಿಕ ಪರಿಷ್ಕೃತ ಮಸೂದೆಯಲ್ಲಿ ಕೇರಳದ ಮತ್ತು ತಮಿಳುಭಾಷಾ ಅಲ್ಪಸಂಖ್ಯಾತರಿಗೆ ಅವರವರ ಮಾತೃಭಾಷೆಯಲ್ಲಿ ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಮಲೆಯಾಳಂ ಕಲಿಯಲು …

ಬಿಜೆಪಿ ಮಾಜಿ ರಾಜ್ಯ ಕೌನ್ಸಿಲ್ ಸದಸ್ಯ ಕೆ. ಮಾಧವನ್ ನಾಯರ್ ನಿಧನ

ಕಾಸರಗೋಡು: ಬಿಜೆಪಿ ಮಾಜಿ ರಾಜ್ಯ ಕೌನ್ಸಿಲ್ ಸದಸ್ಯ, ನಿವೃತ್ತ ಪಂಚಾಯತ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿದ್ದ ಪರವನಡ್ಕದ ಕೆ. ಮಾಧವನ್ ನಾಯರ್ (88) ನಿಧನ ಹೊಂದಿದರು. ಚೆಮ್ನಾಡ್ ಪಂಚಾಯತ್‌ನಲ್ಲಿ ಇವರು ನಾಲ್ಕು ಬಾರಿ ಸದಸ್ಯನಾಗಿದ್ದರು. ಪರವನಡ್ಕ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷರಾಗಿದ್ದರು. ಕೋಟರುವಂ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾಗಿ ಕಾರ್ಯಾಚರಿಸಿದ್ದಾರೆ. ಎಕ್ಸಿಕ್ಯೂಟಿವ್ ಮಾಧವನ್ ನಾಯರ್ ಎಂದೇ ತಿಳಿಯಲ್ಪಡುತ್ತಿದ್ದ ಇವರು ಪರವನಡ್ಕ ಹಾಗೂ ಪರಿಸರ ಪ್ರದೇಶಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆ ಆರಂಭಿಸುವಲ್ಲಿ ನಿರ್ಣಾಯಕ …