ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಚಪ್ಪರ ನಿರ್ಮಾಣ ಕಾರ್ಮಿಕನಾದ ಯುವಕ ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ದೇಳಿ ಕುನ್ನುಪಾರದ ದಾಮೋದರನ್ ಎಂಬವರ ಪುತ್ರ ಧನುಷ್ (21) ಮೃತ ಯುವಕನಾಗಿದ್ದಾರ. ಮೊನ್ನೆ ರಾತ್ರಿ ಊಟಮಾಡಿ ಮಲಗಿದ್ದ ಧನುಷ್ ನಿನ್ನೆ ಬೆಳಿಗ್ಗೆ ಎದ್ದಿರಲಿಲ್ಲ. ಇದರಿಂದ ಮನೆಯವರು ಎಬ್ಬಿಸಲು ಕೊಠಡಿಗೆ ಹೋದಾಗ ಧನುಷ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಂದೆ, ತಾಯಿ ಗೀತಾ, …

ನಿವೃತ್ತ ಎಇಒ ನಿಧನ

ಕುಂಬಳೆ: ಮೂಲತಃ ಇಡುಕ್ಕಿ ನೆಡುಕಂಡಂ ನಿವಾಸಿ ಕುಂಬಳೆ ಕಂಚಿಕಟ್ಟೆ ಶ್ರೀರಾಘದಲ್ಲಿ ವಾಸಿಸುತ್ತಿರುವ ನಿವೃತ್ತ ಎಇಒ ವಿಜಯನ್ ಕೆ.ಟಿ.(63) ನಿಧನ ಹೊಂದಿದರು. ಹಲವು ವರ್ಷಗಳ ಕಾಲ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಲೆಯಾಳ ಅಧ್ಯಾಪಕನಾಗಿದ್ದರು. ಮೃತರು ಪತ್ನಿ ಗೀತ ಕೆ.(ಸೂರಂಬೈಲು ಸರಕಾರಿ ಹೈಸ್ಕೂಲ್ ಅಧ್ಯಾಪಿಕೆ), ಮಕ್ಕಳಾದ ಅರ್ಜುನ್ ವಿಜಯ್, ತೇಜಸ್ ವಿಜಯ್, ಸಹೋದರ ಸುರೇಶ್, ಸಹೋದರಿಯರಾದ ಉಷಾ, ಶೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಹುಟ್ಟೂರಾದ ವಯನಾಡು ಕಾಟಿ ಕುಳಂಗೆ ಕೊಂಡೊಯ್ಯಲಾಗುವು ದೆಂದು ಸಂಬಂಧಿಕರು ತಿಳಿಸಿದ್ದಾರೆ.

ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ವಲಸೆ ಕಾರ್ಮಿಕ ಸಾವು

ಕಾಸರಗೋಡು: ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಲಸೆ ಕಾರ್ಮಿಕ ಸಾವನ್ನಪ್ಪಿದ್ದಾರೆ. ಕರ್ನಾಟಕ ವಿಜಯನಗರ ಹಾವಿನಗರ ಗಲ್ಲಿಯ ಶಂಕರ್ ನಾಯ್ಕ- ಕಮಲ ದಂಪತಿ ಪುತ್ರ ವಿನೋದ್ (38) ಸಾವನ್ನಪ್ಪಿದ ಕಾರ್ಮಿಕ. ಕಳೆದ ಜನವರಿ ೯ರಂದು ವಿದ್ಯಾನಗರ ಐಟಿಐ ರಸ್ತೆ ಬಳಿ ಹೊಸದಾಗಿ ನಿರ್ಮಿಸುತ್ತಿದ್ದ ಕಟ್ಟಡವೊಂದರ ಮೂರನೇ ಅಂತಸ್ತಿನಲ್ಲಿ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ವಿನೋದ್ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಮೊದಲು ಮಂಗಳೂರಿನ ಆಸ್ಪತ್ರೆಗೂ ನಂತರ ಬಳ್ಳಾರಿಯ ಆಸ್ಪತ್ರೆಗೆ  ದಾಖಲಿಸಿ ಉನ್ನತ ಮಟ್ಟದ …

19ರ ಯುವತಿ ನಾಪತ್ತೆ

ಕಾಸರಗೋಡು: ಮನೆಯೊಳಗೆ ನಿದ್ರಿಸುತ್ತಿದ್ದ ಯುವತಿ ನಾಪತ್ತೆಯಾಗಿ ರುವುದಾಗಿ ದೂರಲಾಗಿದೆ. ಚೀಮೇನಿ ಪೋತಕಂಡಂ ನಂಙಾರತ್ ಹೌಸ್ ನಿವಾಸಿ ಕರೀಂರ ಪುತ್ರಿ ಶರಫು ನಾಜಿಯ (19) ನಾಪತ್ತೆಯಾದ ಬಗ್ಗೆ ದೂರ ಲಾಗಿದೆ. ನಿನ್ನೆ ರಾತ್ರಿ 12 ಗಂಟೆಯ ಬಳಿಕ ಯುವತಿ ನಾಪತ್ತೆಯಾಗಿ ರಬೇಕೆಂದು ಶಂಕಿಸಲಾಗಿದೆ. ಚೀಮೇನಿ ಪೊಲೀಸರು ಕೇಸು ನೋಂದಾಯಿಸಿ ದ್ದಾರೆ. ಯುವತಿಯ ಪತ್ತೆಗೆ ಯತ್ನ ನಡೆಸಲಾಗುತ್ತಿದೆ. ಇದೇ ವೇಳೆ ಈಕೆ ಯುವಕನೊಂದಿಗೆ ಪತ್ತೆಹಚ್ಚಿರುವುದಾಗಿ ಪೊಲೀಸರು ಮಾಹಿತಿ ನೀಡುತ್ತಿದ್ದು, ಇವರಿಬ್ಬರನ್ನು ಠಾಣೆಗೆ ಹಾಜರಾಗಲು ನಿರ್ದೇಶಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ಸುರೇಶ್‌ಗೋಪಿ ಕಚೇರಿಯ ನಾಮಫಲಕಕ್ಕೆ ಕರಿ ಆಯಿಲ್ ಸುರಿದ ದುಷ್ಕರ್ಮಿಗಳು: ಬಿಜೆಪಿಯಿಂದ ವ್ಯಾಪಕ ಪ್ರತಿಭಟನೆ

ತೃಶೂರು: ಕೇಂದ್ರ ಸಚಿವ ಸುರೇಶ್ ಗೋಪಿಯವರ ಕಚೇರಿಯ ನಾಮಫಲ ಕಕ್ಕೆ ದುಷ್ಕರ್ಮಿಗಳು ಕರಿ ಆಯಿಲ್ ಸುರಿದು ವಿಕೃತಗೊಳಿ ಸಿದ್ದಾರೆ. ಇದನ್ನು ಪ್ರತಿಭಟಿಸಿ ಬಿಜೆಪಿ ಇಂದು ರಾಜ್ಯ ವ್ಯಾಪಕವಾಗಿ ಪ್ರತಿಭಟನೆ ಆರಂಭಿಸಿದೆ. ತೃಶೂರಿನ ಚೇರೂರ್‌ನಲ್ಲಿ ಸುರೇಶ್‌ಗೋಪಿಯ ಎಂ.ಪಿ ಕಚೇರಿ ಇದ್ದು ಅದರ ನಾಮಫಲಕಕ್ಕೆ ನಿನ್ನೆ ಸಂಜೆ ಕರಿ ಆಯಿಲ್ ಪ್ರಯೋಗ ನಡೆಸಲಾಗಿದೆ. ಇದು ಸಿಪಿಎಂ ನಡೆಸಿದ ದುಷ್ಕೃತ್ಯವಾಗಿದೆಯೆಂದು ಬಿಜೆಪಿ ಆರೋಪಿಸಿದೆ. ಅದರ ವಿರುದ್ಧ ತೃಶೂರಿನಾದ್ಯಂತ ಭಾರೀ ಪ್ರತಿಭಟನೆ ನಡೆಸಿದೆ. ಪ್ರತಿಭಟನಾ ಮೆರವಣಿಗೆ ಘರ್ಷಣೆಗೂ ದಾರಿ ಮಾಡಿಕೊಟ್ಟಿತು.  ಅದರಲ್ಲಿ ಬಿಜೆಪಿ …

ಪತ್ನಿ ನಾಪತ್ತೆಯಾದುದರಿಂದ ಮನನೊಂದ ಪತಿ ಆತ್ಮಹತ್ಯೆ: ಪೊಲೀಸರ ಶೋಧ ವೇಳೆ ಪತ್ನಿ ಪತ್ತೆ

ಕಾಯಂಕುಳಂ: ಪತ್ನಿ ಎರಡು ತಿಂಗಳಿಂದ ನಾಪತ್ತೆಯಾಗಿದ್ದುದರಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಇದೇ ವೇಳೆ ಪೊಲೀಸರು ನಡೆಸಿದ ಶೋಧ ವೇಳೆ ಕಣ್ಣೂರಿನಲ್ಲಿ ಹೋಂನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪತ್ನಿಯನ್ನು ಪತ್ತೆ ಹಚ್ಚಲಾಗಿದೆ. ಕಣ್ಣಂಬಳ್ಳಿ ಭಾಗಂ ವಿಷ್ಣುಭವನದ ವಿನೋದ್ (49) ಎಂಬವರು ಸಾವಿಗೀಡಾದ ವ್ಯಕ್ತಿ. ಇವರ ಪತ್ನಿ ರಂಜಿನಿ ಕಳೆದ ಜೂನ್ 11ರಂದು ಬೆಳಿಗ್ಗೆ ಬ್ಯಾಂಕ್‌ಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಅನಂತರ ಅವರು ಮನೆಗೆ ಮರಳಿ ಬಂದಿರಲಿಲ್ಲ. ಈ ಬಗ್ಗೆ ದೂರು ಲಭಿಸಿದ ಪೊಲೀಸರು …

ಅಸೌಖ್ಯ: ಮಹಿಳೆ ನಿಧನ

ಪೈವಳಿಕೆ: ಕುಡಾಲು ಕೋರಿಕಾರ್ ನಿವಾಸಿ ನಾಗವೇಣಿ ರೈ (68) ನಿಧನ ಹೊಂದಿ ದರು. ಕಳೆದ ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆಯಲ್ಲಿದ್ದರು. ಒಂದು ವಾರದ ಹಿಂದೆ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಮಧ್ಯಾಹ್ನ ನಿಧನರಾದರು. ಮೃತರು ಪತಿ ಹಿರಿಯ ಕೃಷಿಕ ಕುಡಾಲು ಗುತ್ತು ವಿಠಲ ರೈ, ಮಕ್ಕಳಾದ ಗಣೇಶ್ ರೈ, ದಿನೇಶ್ ರೈ, ಗೀತಾ ಶೆಟ್ಟಿ, ಪ್ರಕಾಶ್ ರೈ, ಸೊಸೆಯಂದಿರಾದ ಅಕ್ಷತಾ, ದೀಕ್ಷಿತಾ, ಅಳಿಯ ಪ್ರಕಾಶ್ ಶೆಟ್ಟಿ, ಸಹೋದರ ಸಹೋದರಿಯರಾದ ನಾಗಣ್ಣ ಭಂಡಾರಿ, …

ಗಣೇಶ್ ಕಾಸರಗೋಡು ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ

ಕಾಸರಗೋಡು: ಕಾಸರಗೋಡಿನ ಕನ್ನಡಭವನ ಮತ್ತು ಗ್ರಂಥಾಲಯ ಕೊಡಮಾಡುವ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಸಾಹಿತಿ ಗಣೇಶ್ ಕಾಸರಗೋಡು ಅವರನ್ನು ಆಯ್ಕೆ ಮಾಡಲಾಗಿದೆ. ಈ ತಿಂಗಳ 27ರಂದು ಸಂಜೆ 5 ಗಂಟೆಗೆ ಕಾಸರಗೋಡು ಕನ್ನಡಭವನ ಸಮುಚ್ಚಯದ ಸಭಾಂಗಣ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಣೇಶ್ ಕಾಸರಗೋಡು ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್, ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ: ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ವಾರ್ಡ್ಗಳ ಸಂಖ್ಯೆ 725ಕ್ಕೇರಿಕೆ

ಕಾಸರಗೋಡು: ಸ್ಥಳೀಯಾಡ ಳಿತ ಸಂಸ್ಥೆಗಳ ವಾರ್ಡ್ ವಿಭಜನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರಂತೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ಗಳ ವಾರ್ಡ್ಗಳ ಸಂಖ್ಯೆ ಈಗ 664ರಿಂದ 725ಕ್ಕೇರಿದೆ. 2011ರ ಜನಗಣತಿ ಆಧಾರದಲ್ಲಿ ವಾರ್ಡ್ಗಳ ಮರು ವಿಭಜನೆ ನಡೆಸಲಾಗಿದೆ. ಇದರ ಜೊತೆಗೆ ಪ್ರತೀ ವಾರ್ಡ್ಗಳ ಡಿಜಿಟಲ್ ಭೂಪಟಗಳನ್ನು ತಯಾರಿಸಲಾಗಿದೆ. ಇದರ ಹೊರತಾಗಿ ಜಿಲ್ಲೆಯ ಕಾಸರಗೋಡು, ಹೊಸದುರ್ಗ ಮತ್ತು ನೀಲೇಶ್ವರ ನಗರಸಭೆಗಳ ವಾರ್ಡ್ ಗಳ ಸಂಖ್ಯೆ, ವಾರ್ಡ್ಗಳ ಮರು ವಿಭಜನೆ ಬಳಿಕ ವಾರ್ಡ್ಗಳ ಸಂಖ್ಯೆ 113ರಿಂದ 120ಕ್ಕೇರಿದೆ. ಅದೇ ರೀತಿ ಬ್ಲೋಕ್ ಪಂಚಾ ಯತ್ಗಳ …

ರಾಹುಲ್ ಗಾಂಧಿ ಬಂಧನ ಪ್ರತಿಭಟಿಸಿ ಮುಳ್ಳೇರಿಯದಲ್ಲಿ ಪ್ರತಿಭಟನೆ

ಮುಳ್ಳೇರಿಯ: ನಕಲಿ ಮತದಾನದ ವಿರುದ್ಧ ಪ್ರತಿಕ್ರಿಯಿಸಿದ ಲೋಕಸಭೆಯ ವಿಪಕ್ಷ ಮುಖಂಡ ರಾಹುಲ್  ಗಾಂಧಿಯನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ಕಾರಡ್ಕ ಬ್ಲೋಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮುಳ್ಳೇರಿಯದಲ್ಲಿ ನಡೆದ ಪ್ರತಿಭಟನೆಗೆ ಬ್ಲೋಕ್ ಸಮಿತಿ ಅಧ್ಯಕ್ಷ ಗೋಪಕುಮಾರ್ ವಿ, ಕೆ. ವಾರಿಜಾಕ್ಷನ್, ಆನಂದ ಮವ್ವಾರ್, ಇಬ್ರಾಹಿಂ ಹಾಜಿ ಸಿ, ಶ್ರೀಧರನ್ ಅಯರ್‌ಕಾಡ್, ಪ್ರಸಾದ್ ಭಂಡಾರಿ, ಗಂಗಾಧರ ಗೋಳಿಯಡ್ಕ, ಶ್ಯಾಮ್‌ಪ್ರಸಾದ್ ಮಾನ್ಯ, ಪುರುಷೋತ್ತಮನ್ ಕೆ, ಜ್ಯೋನಿ ಕ್ರಾಸ್ತ, ವಿನೋದನ್ ನಂಬ್ಯಾರ್ ಬಿ.ಕೆ., ಚಂದ್ರಹಾಸ ಬಲೆಕ್ಕಳ, ರಂಜಿತ್ ಕುಮಾರ್, ಶಾರದಾ …