ಪೊಲೀಸರ ಮೇಲೆ ಹಲ್ಲೆಗೈದು  ಮಾದಕವಸ್ತು ಪ್ರಕರಣದ ಆರೋಪಿ ಪರಾರಿ: ಉಪೇಕ್ಷಿಸಿದ ಸ್ಕೂಟರ್‌ನಲ್ಲಿ ಎಂಡಿಎಂಎ ಪತ್ತೆ

ಉಪ್ಪಳ: ಮಾದಕವಸ್ತು ಪ್ರಕರಣದ ಆರೋಪಿಯೋರ್ವ ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಿದ್ದಾನೆ. ಪರಾರಿ ವೇಳೆ ಆರೋಪಿ ಉಪೇಕ್ಷಿಸಿದ ಸ್ಕೂಟರ್ ನಲ್ಲಿ 1.32 ಗ್ರಾಂ ಎಂಡಿಎಂಎ ಪತ್ತೆಯಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ 8 ಗಂಟೆ ವೇಳೆ ಈ ಘಟನೆ ನಡೆದಿದೆ. ಮೂಸೋಡಿ ನಿವಾಸಿ ಮಜೀದ್ ಎಂಬಾತ ಪೊಲೀ ಸರಿಗೆ ಹಲ್ಲೆಗೈದು ಪರಾರಿಯಾಗಿದ್ದು ಆತನಿಗಾಗಿ ಶೋಧ ನಡೆಸಲಾಗುತ್ತಿ ದೆಯೆಂದೂ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ:-ಮಜೀದ್ ಈ ಹಿಂದೆ ಮಾದಕವಸ್ತು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. …

ಲೈಂಗಿಕ ಆರೋಪ: ಸಿಪಿಎಂ ಮುಖಂಡ ಸುಧಾಕರ ಪಕ್ಷದಿಂದ ಅಮಾನತು; ತನಿಖೆಗೆ 3 ಮಂದಿಯ ತಂಡ

ಕಾಸರಗೋಡು: ಸಿಪಿಎಂ ಮುಖಂಡ ಕಾಟುಕುಕ್ಕೆಯ ಸುಧಾಕರನನ್ನು ಪಕ್ಷದಿಂದ ಅಮಾನತು ಮಾಡಲಾ ಗಿದೆ. ಲೈಂಗಿಕ ಆರೋಪಕ್ಕೆ ಸಂಬಂ ಧಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಆರೋಪದ ಬಗ್ಗೆ ತನಿಖೆ ನಡೆಸಲು ಈ ವ್ಯಕ್ತಿ ಒಳಗೊಂಡ ಕುಂಬಳೆ ಏರಿಯಾ ಸಮಿತಿಯ ಮೂರು ಮಂದಿ ಮುಖಂಡರಿಗೆ ಹೊಣೆ ನೀಡ ಲಾಗಿದೆ. ಕುಂಬಳೆ ಇಚ್ಲಂಗೋಡು ಎಲ್‌ಪಿ ಶಾಲೆಯ ಅಧ್ಯಾಪಕನಾಗಿ ರುವ ಸುಧಾಕರ ಎಣ್ಮಕಜೆ ಪಂಚಾಯತ್‌ನ ಬಾಳೆಮೂಲೆ ೩ನೇ ವಾರ್ಡ್ ಸದಸ್ಯನಾಗಿದ್ದು, ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿಯಾ ಗಿದ್ದನು. 1995ರಿಂದ ಜಿಲ್ಲೆಯ ನಿವಾಸಿ ಯಾದ ಓರ್ವೆ …

ಯುವಕನಿಗೆ ಇರಿತ: ಇಬ್ಬರ ವಿರುದ್ಧ ನರಹತ್ಯಾಯತ್ನ ಕೇಸು ದಾಖಲು

ಕಾಸರಗೋಡು: ಕೂಡ್ಲು ಉಳಿಯತ್ತಡ್ಕ ನೇಶನಲ್ ನಗರದಲ್ಲಿ ನಿನ್ನೆ ಮಧ್ಯಾಹ್ನ ಯುವಕರ ಮಧ್ಯೆ ಘರ್ಷಣೆಯುಂಟಾಗಿ ಅದರಲ್ಲಿ ಓರ್ವ ಇರಿತಕ್ಕೊಳಗಾದ ಘಟನೆ ನಡೆದಿದೆ.  ಉಳಿಯತ್ತಡ್ಕ ನೇಶನಲ್ ನಗರದ ಶಬಾನ ಮಂಜಿಲ್ ನಿವಾಸಿ ಮೊಹಮ್ಮದ್ ಸಲಾಲ್ ಅಕ್ತರ್ (21) ಇರಿತಕ್ಕೊಳಗಾದ ಯುವಕನಾಗಿದ್ದಾನೆ. ಆತ ನೀಡಿದ ದೂರಿನಂತೆ ಕುಂಬಳೆ ನಾಯ್ಕಾಪು ನಿವಾಸಿಗಳಾದ ಅಮಾನ್ ಮತ್ತು ಅನಾನ್ ಎಂಬಿಬ್ಬರ ವಿರುದ್ಧ ಕಾಸರಗೋಡು ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ನೇಶನಲ್ ನಗರದಲ್ಲಿ ನನ್ನನ್ನು ತಡೆದು ನಿಲ್ಲಿಸಿ ಇರಿದು, ತುಳಿದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ …

ಮಲೆಯಾಳಂ ಭಾಷಾ ಮಸೂದೆ ತಕ್ಷಣ ಹಿಂತೆಗೆದುಕೊಳ್ಳಬೇಕು-ಸಿದ್ಧರಾಮಯ್ಯ

ಬೆಂಗಳೂರು: ಕೇರಳ ಸರಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ಮಲೆಯಾಳಂ ಭಾಷಾ ಮಸೂದೆ-೨೦೨೫ ಕಾಸರಗೋಡಿನ ಕನ್ನಡಿಗರಿಗೆ ತೀವ್ರ ಸಮಸ್ಯೆಯಾಗಲಿದ್ದು, ಅದನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳ ಸರಕಾರ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಲ್ಲಿ ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಸುಧೀರ್ಘ ಸಂದೇಶ ಪ್ರಕಟಿಸಿರುವ ಸಿದ್ಧರಾಮಯ್ಯ ಒಂದು ವೇಳೆ ಕಾಸರಗೋಡಿನ ಕನ್ನಡಿಗರ ಹಿತ ನಿರ್ಲಕ್ಷಿಸಿ ಅವರ ಮೇಲೆ  ಮಲೆಯಾಳಂ ಭಾಷೆಯನ್ನು ಹೇರಿದಲ್ಲಿ ನಮ್ಮ ಸರಕಾರ ಅವರ ಜೊತೆಗೆ ನಿಂತು ಸರ್ವ ರೀತಿಯ ಬೆಂಬಲ ನೀಡಲಿದೆ ಎಂದೂ ಸಿದ್ಧರಾಮಯ್ಯ ಹೇಳಿದ್ದಾರೆ.  …

ವಾರಂಟ್ ಆರೋಪಿ ಸೆರೆ

ಉಪ್ಪಳ:  ಮೂರು ವಾರಂಟ್ ಪ್ರಕರಣಗಳಲ್ಲಿ ಆರೋಪಿಯಾದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಸೋಂಕಾಲ್‌ನ ಮೊಹಮ್ಮದ್ ಫಾರೂಕ್ ಯಾನೆ ಚೀಲ ಫಾರೂಕ್ (25) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಈತ ಅಮಲು ಪದಾರ್ಥ ಕೈವಶವಿರಿಸಿಕೊಂಡ, ಕೊಲೆಯತ್ನ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಈತನ ವಿರುದ್ಧ ವಾರಂಟ್ ಜ್ಯಾರಿಯಲ್ಲಿದೆ. ಈತ ನಿನ್ನೆ ಉಪ್ಪಳದಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್, ಎಸ್‌ಐಗಳಾದ ಶಬರಿಕೃಷ್ಣ, ವೈಷ್ಣವ್, ಮಹಿಳಾ ಪೊಲೀಸ್ ವಂದನ ಎಂಬಿವರು ತಕ್ಷಣ ಅಲ್ಲಿಗೆ ತಲುಪಿ ಬಂಧಿಸಿದ್ದಾರೆ.  ಅಮಲು …

ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 11.20 ಲಕ್ಷ ರೂ. ಕಾಳಧನ ಸಹಿತ ಓರ್ವ ಸೆರೆ

ಕಾಸರಗೋಡು: ಅಂಬಲತ್ತರ ಪೊಲೀಸರು ಹಾಗೂ ಬೇಕಲ ಡಿವೈಎಸ್ಪಿ ನೇತೃತ್ವದ ಸ್ಕ್ವಾಡ್ ಸಂಯುಕ್ತವಾಗಿ ನಡೆಸಿದ ತಪಾಸಣೆಯಲ್ಲಿ 11.50 ಲಕ್ಷ ರೂಪಾಯಿ ಕಾಳಧನ ಸಹಿತ ಓರ್ವನನ್ನು ಬಂಧಿಸಲಾಗಿದೆ. ಅಂಬಲತ್ತರ ಕಲ್ಲಂದೋಳಿಯ ಅಬ್ಬಾಸ್ (40) ಎಂಬಾತ ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಪಾರಪ್ಪಳ್ಳಿಯಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಅಬ್ಬಾಸ್  ಕಾಳಧನ ಸಹಿತ ಸೆರೆಗೀಡಾಗಿದ್ದಾನೆ.  ಹಣವನ್ನು  ಕಟ್ಟುಗಳಾಗಿಸಿ ಸೀಟಿನಡಿಯಲ್ಲಿ ಬಚ್ಚಿಡಲಾಗಿತ್ತು.  ಹೆಚ್ಚಿನ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಅಲ್ಪ ಕಾಲದ ಬಳಿಕ  ಕಾಸರಗೋಡು …

ಪೊಸಡಿಗುಂಪೆಯಲ್ಲಿ ಬೆಂಕಿ ಆಕಸ್ಮಿಕ

ಉಪ್ಪಳ: ಪೊಸಡಿಗುಂಪೆ ಪರಿಸರದಲ್ಲಿ ಇಂದು ಬೆಳಿಗ್ಗೆ  ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದು ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ.  ದಿನಂಪ್ರತಿ ನೂರಾರು ಮಂದಿ ಭೇಟಿ ನೀಡುವ ಪ್ರವಾಸಿ ಕೇಂದ್ರವಾದ ಪೊಸಡಿಗುಂಪೆ ಪ್ರದೇಶದಲ್ಲಿ  ಬೆಂಕಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಲ್ಲಿಗೆ ತಲುಪುವವರು ಬೀಡಿ, ಸಿಗರೇಟ್ ಸೇದಿ ಅದನ್ನು ನಂದಿಸದೆ ಎಸೆಯುತ್ತಿ ರುವುದೇ  ಬೆಂಕಿ ಹತ್ತಿಕೊಳ್ಳಲು ಕಾರಣವಾಗಿದೆಯೆಂದು ಹೇ ಲಾಗುತ್ತಿದೆ.

ಮನೆ ಆವರಣದಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಮನೆ ಆವರಣದಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಅಡೂರು ಹೌಸ್ ನಿವಾಸಿ  ಜಿ. ಭಾಸ್ಕರ ಎಂಬವರ ಪುತ್ರ ರಾಜೇಶ್ ಜಿ. (47) ಸಾವನ್ನಪ್ಪಿದ ವ್ಯಕ್ತಿ. ಇವರು ಮೊನ್ನೆ ಸಂಜೆ ಅವರ ಮನೆ ಆವರಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದನ್ನು ಕಂಡ ಸ್ನೇಹಿತ ತಕ್ಷಣ ಮುಳ್ಳೇರಿಯ ಕೋ-ಆಪರೇಟಿವ್ ಆಸ್ಪತ್ರೆಗೆ ಸಾಗಿಸಿ ವೈದ್ಯರು ತಪಾಸಣೆ ನಡೆಸಿದಾಗ ರಾಜೇಶ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಆದೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಳ್ಳೂರು ದೇವಸ್ಥಾನದ ಕಾಣಿಕೆಹುಂಡಿ ಕಳವು

ಮುಳ್ಳೇರಿಯ: ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ಕಾಣಿಕೆ ಹುಂಡಿಯಿಂದ  ಹಣ ಕಳವು ನಡೆದ ಬಗ್ಗೆ ವರದಿಯಾಗಿದೆ.  ಎರಡು  ದಿನಗಳ ಹಿಂದೆ ಈ ಕಳವು ನಡೆದಿದೆ. ಕ್ಷೇತ್ರದ ಪ್ರವೇಶದ್ವಾರದ ಬಳಿಯಿರುವ  ಕಾಣಿಕೆ ಹುಂಡಿಯ ಬೀಗ ಮುರಿದು ಹಣ ಕಳವು ನಡೆಸಲಾಗಿದೆ. ಎರಡು ದಿನಗಳ ಹಿಂದೆ ಹುಂಡಿಯಿಂದ ಹಣ ತೆಗೆಯಲೆಂದು ದೇವಸ್ಥಾನ ಸಮಿತಿಯವರು ಅಲ್ಲಿಗೆ ಹೋದಾಗ  ಹುಂಡಿಯ ಬೀಗ ಮುರಿದಿರುವುದು ಕಂಡುಬಂದಿದೆ. ಅದರಿಂದ ಎಷ್ಟು ಹಣ ಕಳವಿಗೀಡಾಗಿದೆಯೆಂದು ಖಚಿತವಾಗಿ ತಿಳಿದುಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆ ಕ್ಷೇತ್ರ ಸಮಿತಿಯವರು ಆದೂರು ಪೊಲೀಸರಿಗೆ …

ಜಿಲ್ಲಾ ನ್ಯಾಯಾಲಯ ಸಮುಚ್ಛಯದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣ: ದಾಖಲಿಸಿ ತನಿಖೆ ಆರಂಭಿಸಿದ ಸೈಬರ್ ಪೊಲೀಸರು

ಕಾಸರಗೋಡು: ವಿದ್ಯಾನಗರದಲ್ಲಿ ರುವ ಜಿಲ್ಲಾ ನ್ಯಾಯಾಲಯ ಸಮುಚ್ಛಯದಲ್ಲಿ ನಿನ್ನೆ ಉಂಟಾದ ಹುಸಿ ಬಾಂಬ್ ಬೆದರಿಕೆ ಬಗ್ಗೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ನ್ಯಾಯಾಲಯದ ಶಿರಸ್ತೇದಾರ್ ಅನೀಶ್ ಜೋನ್ ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಲೆತ್ನಿಸುವ ಮೂಲಕ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ ಆರೋಪದಂತೆ ಈ ಪ್ರಕರಣ ದಾಖಲಿಸಲಾಗಿದೆ. ತಮಿಳು ಲಿಬರೇಶನ್ ಆರ್ಗನೈಸೇಶನ್ (ಟಿಎಲ್‌ಒ) ಎಂಬ ಹೆಸರಲ್ಲಿ ನಿನ್ನೆ ಮುಂಜಾನೆ 3.30ರ ವೇಳೆಗೆ ಜಿಲ್ಲಾ …