ಮಧೂರು: ಬಿಎಂಎಸ್ ಮಧೂರು ವಲಯ ಪ್ರತಿನಿಧಿ ಸಮ್ಮೇಳನ ಕೂಡ್ಲು ಅಧ್ಯಾಪಕ ಭವನ ಸಭಾಂಗಣದಲ್ಲಿ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಮಧೂರು ವಲಯ ಅಧ್ಯಕ್ಷ ವಸಂತ ಕೊರುವೈಲು ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಅನಿಲ್ ಬಿ. ನಾಯರ್, ಕೆ. ಗುರುದಾಸ್, ಬಿ. ಮನೀಶ್, ಕೆ. ಸುರೇಶ್, ಎನ್. ನಮಿತ, ಎ. ದೇವಕಿ, ಎ. ತೇಜಸ್, ಕೆ.ಎಸ್. ಶರತ್ಕುಮಾರ್, ಪ್ರಭಾಶಂಕರ, ಕೆ.ದಯಾನಂದ, ಕೆ. ಸದಾಶಿವ ಮಾತನಾಡಿದರು. ವಲಯ ಕಾರ್ಯದರ್ಶಿ ಸಿ.ಎಚ್. ಶ್ರೀಧರ ಸ್ವಾಗತಿಸಿ,ವಲಯ ಕೋಶಾಧಿಕಾರಿ ಕೆ. ಅವಿನಾಶ್ ವಂದಿಸಿದರು.




