ಕುಂಟಂಗೇರಡ್ಕ ಸ್ಮಶಾನದಿಂದ ಮರ ಕಡಿದು ಸಾಗಾಟ: ಕುಂಬಳೆ ಪಂ. ಕಾಂಗ್ರೆಸ್ ಸದಸ್ಯ ಬಂಧನ

ಕುಂಬಳೆ: ಕುಂಬಳೆ ಪಂಚಾ ಯತ್‌ನ ಅಧೀನದಲ್ಲಿ  ಕಿದೂರು ಕುಂಟಂಗೇರಡ್ಕದಲ್ಲಿರುವ ಸ್ಮಶಾನದಿಂದ ಮರಗಳನ್ನು ಕಡಿದು ಸಾಗಿಸಿದ ಪ್ರಕರಣದಲ್ಲಿ ಕುಂಬಳೆ ಪಂಚಾಯತ್ ಸದಸ್ಯನನ್ನು ಬಂಧಿಸಲಾಗಿದೆ. ಪಂ.ನ ೮ನೇ ವಾರ್ಡ್ (ಮಡ್ವ)ನ ಕಾಂಗ್ರೆಸ್ ಸದಸ್ಯನಾದ ರವಿರಾಜ್  ಯಾನೆ ತುಮ್ಮ (38) ಎಂಬಾತನನ್ನು ಕುಂ ಬಳೆ ಎಸ್‌ಐ ಅನೂಪ್‌ರ ನೇತೃತ್ವ ದಲ್ಲಿ ಬಂಧಿಸಲಾಗಿದೆ.  ಈತನನ್ನು ನ್ಯಾಯಾಲಯದಲ್ಲಿ ಹಾಜರುಪಡಿ ಸಿದ್ದು, ಈ ವೇಳೆ ಜಾಮೀನು ನೀಡಲಾಗಿದೆ.

ಎರಡು ವಾರಗಳ ಹಿಂದೆ ಸ್ಮಶಾನ ಭೂಮಿಯಿಂದ ೧೨೪ ಮರಗಳನ್ನು ಕಡಿದು ಸಾಗಿಸಲಾಗಿತ್ತು. ಮರ ಸಾಗಾಟ ವಿವಾದಕ್ಕೆಡೆಯಾದ ಹಿನ್ನೆಲೆಯಲ್ಲಿ ಕುಂಬಳೆ ಪಂ. ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಕೇಸು ದಾಖಲಿಸಿ ನಡೆಸಿದ ತನಿಖೆಯಲ್ಲಿ ರವಿರಾಜ್‌ನ ನೇತೃತ್ವದಲ್ಲಿ ಮರಗಳನ್ನು ಕಡಿದು ಸಾಗಿಸಿರುವುದಾಗಿ ತಿಳಿದು ಬಂದಿದೆ. 25,೦೦೦ ರೂಪಾಯಿಗಳ ಮರಗಳನ್ನು ಮರದ ಮಿಲ್ಲೊಂದಕ್ಕೆ ಮಾರಾಟ ಮಾಡಿರುವುದಾಗಿಯೂ ಪೊಲೀಸರು ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ.

You cannot copy contents of this page