ಪಚ್ಲಂಪಾರೆ ಎಸ್‌ಸಿ ಉನ್ನತಿಯ ಸ್ಮಶಾನ ಅಭಿವೃದ್ಧಿಗೆ ಒತ್ತಾಯ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಪಚ್ಲಂಪಾರೆ ಎಸ್.ಸಿ ಉನ್ನತಿಯಲ್ಲಿರುವ ಸ್ಮಶಾನ ಶೋಚನೀ ಯÁವಸ್ಥೆಯಲ್ಲಿದ್ದು, ಅಭಿವೃದ್ದಿ ಗೊಳಿಸಲು ನಿವಾಸಿಗಳು ಒತ್ತಾ ಯಿಸಿದ್ದಾರೆ. ಸ್ಮಶಾನದಲ್ಲಿ ಮೃತದೇಹ ಸುಡುವ ಶೆಡ್ಡ್ ಹಾಗೂ ಹೊರ ಭಾಗÀ ಅಳವಡಿಸಿದ ತಗಡ್ ಶೀಟ್ ತುಕ್ಕು ಹಿಡಿದು ಹಾನಿಗೀಡಾಗಿದ್ದು, ಮಳೆಗಾಲದಲ್ಲಿ ಸಮಸ್ಯೆಗೆ ಕಾರಣ ವಾಗಿದೆ. ಅಲ್ಲದೆ ನೀರಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆಯಿಲ್ಲದಿರುವು ದರಿಂದ ರಾತ್ರಿ ಹೊತ್ತಲ್ಲಿ ಪರದಾ ಡಬೇಕಾಗಿದೆ. ಹಲವು ವರ್ಷ ಗಳಿಂದಲೂ ಅಭಿವೃದ್ದಿ ಬಗ್ಗೆ ಪಂ ಚಾಯತ್ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದರೂ ಇದು ವರೆಗೂ ದುರಸ್ತಿಕಾರ್ಯದ ಬಗ್ಗೆ ಕ್ರಮಯಿಲ್ಲ ವೆಂದು ಸ್ಥಳೀಯರು ತಿಳಿಸಿದ್ದಾರೆ. ಸಂಬAಧಪಟ್ಟ ಪಂಚಾಯತ್ ಅಧಿಕಾರಿಗಳು ಮಳೆಗಾಲ ಬರುವ ಮುನ್ನವೇ ಸ್ಮಶಾನದ ಅಭಿವೃದ್ದಿ ಕೆಲಸವನ್ನು ನಡೆಸಬೇಕೆಂದು ಊರವರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page