ಯುವತಿಯೊಂದಿಗೆ ಅವಮಾನಕರ ನಡವಳಿಕೆ: ಯೂತ್ ಕಾಂಗ್ರೆಸ್ ಮುಖಂಡ ಶ್ರೀಜಿತ್ ಕೋಡೋತ್ ವಿರುದ್ಧ ಶಿಸ್ತು ಕ್ರಮ

 
ಕಾಸರಗೋಡು: ಯುವತಿಯ ಜೊತೆ ಅವಮಾನಕರವಾದ ರೀತಿಯಲ್ಲಿ ನಡೆದುಕೊಂಡನೆಂಬ ದೂರಿನಂತೆ ಯೂತ್ ಕಾಂಗ್ರೆಸ್ ಮುಖಂಡನನ್ನು ಹುದ್ದೆಯಿಂದ ಹೊರತುಪಡಿಸಲಾಗಿದೆ. ಮಂಡಲ ನೇತೃತ್ವದ ನಿರ್ದೇಶ ಪ್ರಕಾರ ಜಿಲ್ಲಾ ನೇತೃತ್ವ ಶಿಸ್ತು ಕ್ರಮ ಸ್ವೀಕರಿಸಿದೆ. ಉದುಮ ವಿಧಾನಸಭಾ ಮಂಡಲ ಉಪಾಧ್ಯಕ್ಷನಾಗಿದ್ದ ಶ್ರೀಜಿತ್ ಕೋಡೋತ್ ಯುವತಿಯ ಜೊತೆ ಅವಮಾನಕರವಾದ ರೀತಿಯಲ್ಲಿ ವ್ಯವಹರಿಸಿದನೆಂಬ ಆರೋಪ ಕೇಳಿ ಬಂದಿತ್ತು. ಘಟನೆ ಬಗ್ಗೆ ಯುವತಿ  ಕಾಂಗ್ರೆಸ್ ಮಂಡಲ ಸಮಿತಿಗೆ ದೂರು ನೀಡಿದ್ದರು. ಸಂಘಟನೆಗೆ ಅವಮಾನ ಉಂಟಾಗುವ ರೀತಿಯ ವ್ಯವಹಾರ ಯೂತ್ ಕಾಂಗ್ರೆಸ್ ನೀತಿಯಂತೆ ಅಂಗೀಕರಿಸಲು ಸಾಧ್ಯವಿಲ್ಲವೆಂದು ಜಿಲ್ಲಾ ಕಮಿಟಿ ತಿಳಿಸಿದೆ. ಶ್ರೀಜಿತ್‌ನನ್ನು ಉದುಮ ಮಂಡಲ ಉಪಾಧ್ಯಕ್ಷ ಹುದ್ದೆಯಿಂದ ಹೊರತುಪಡಿಸಿರುವುದಾಗಿ ಮುಂದೆ ಸಂಘಟನಾ ಚಟುವಟಿಕೆಗಳಿಂದ ಈ ವ್ಯಕ್ತಿ ದೂರ ಉಳಿಯಲು ನಿರ್ದೇಶಿಸಿರುವು ದಾಗಿಯೂ ಯೂತ್ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಸಮಿತಿ ತಿಳಿಸಿದೆ.

You cannot copy contents of this page