ಉಪ್ಪಿನಂಗಡಿಯ ಕಳ್ಳನೋಟು ಕೇಂದ್ರಕ್ಕೆ ಪೊಲೀಸ್ ದಾಳಿ: ಕಾಸರಗೋಡು ನಿವಾಸಿಗಳ ಸಹಿತ 7 ಮಂದಿ ಸೆರೆ

ಕಾಸರಗೋಡು: ಕರ್ನಾಟಕದ ಉಪ್ಪಿನಂಗಡಿಯ ಕಳ್ಳನೋಟು ನಿರ್ಮಾಣ ಕೇಂದ್ರಕ್ಕೆ  ಪೊಲೀಸರು ದಾಳಿ ನಡೆಸಿ ಕಾಸರಗೋಡು ನಿವಾಸಿಗಳ ಸಹಿತ ಏಳು ಮಂದಿಯನ್ನು ಬಂಧಿಸಿದ್ದಾರೆ. ಚೆಂಗಳ ಪಾಡಿ ಸಮೀಪದ ಕ್ವಾರ್ಟರ್ಸ್‌ವೊಂ ದರಲ್ಲಿ ವಾಸಿಸುವ ಶೆರೀಫ್ (51),  ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೋರ್ಕಟ್ಟದ ಮುಹಮ್ಮದ್ ನಬಾಸ್ (37), ಪುತ್ತೂರು ಬಪ್ಪಳಿಗೆಯ ಇಬ್ರಾಹಿಂ (60), ಉತ್ತರಕನ್ನಡ ಮರಕ್ಕನಾಡಿಯ ಸಂದೀಪ್ ಪುಂಡಲೀಕ (30), ಪುತ್ತೂರು ಕುಂಬ್ರದ ಸಲ್ಮಾನ್ ಫಾರೀಸ್ (25), ಬೆಳ್ತಂಗಡಿ ಉರ್ವಾಳೂರಿನ ಸಿರಾಜ್ ಯಾನೆ ಸಿರಾಜುದ್ದೀನ್ (34), ಪುತ್ತಿಲದ ಇರ್ಷಾದ್ (31) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ.  ಕಳ್ಳನೋಟು  ಮುದ್ರಣ ಕೇಂದ್ರದಿಂದ 500 ರೂಪಾಯಿಗಳ  ಕಳ್ಳನೋಟುಗಳನ್ನು  ಮುದ್ರಿಸಿದ ಶೀಟ್, ಕಂಪ್ಯೂಟರ್, ಜೆರಾಕ್ಸ್ ಯಂತ್ರ, ಸೀಲು ಎಂಬಿವುಗಳನ್ನು ವಶಪಡಿಸಲಾಗಿದೆ. ಪೊಲೀಸರಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಉಪ್ಪಿನಂ ಗಡಿ ಎಸ್‌ಐ ಕೆ.ಪಿ ಸುಕೇಶ್‌ರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸೆರೆಗೀಡಾದವರನ್ನು  ಸಮಗ್ರ ತನಿಖೆಗೊಳಪಡಿಸಲಾಗುತ್ತಿದೆ. ಇದೇ ವೇಳೆ ಸೆರೆಗೀಡಾದ ಕಾಸರಗೋಡು ನಿವಾಸಿಗಳ ಕುರಿತು ಕಾಸರಗೋಡು ಪೊಲೀಸರೂ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page