ಕಾಸರಗೋಡು: ಬೀರಂತಬೈಲು ನಿವಾಸಿ ದಿ| ಸರ್ವೋತ್ತಮ ಎಂಬವರ ಪತ್ನಿ ಪುಷ್ಪಾವತಿ (82) ನಿಧನ ಹೊಂದಿದರು. ಮೃತರು ಮಕ್ಕಳಾದ ಶೋಭನ, ಶ್ರೀರಾಮಮೂರ್ತಿ, ಹರೀಶ, ಆಶಾ, ತಾರಕೇಶ, ಸಂತೋಷ, ಅಳಿಯ- ಸೊಸೆಯಂದಿರಾದ ರಾಧಾಕೃಷ್ಣ (ಮಂಗಳೂರು), ವಿಜಯೇಂದ್ರ (ಹೊಸನಗರ), ಪುಷ್ಪಲತಾ, ವಾಣಿಶ್ರೀ, ಜ್ಞಾನೇಶ್ವರಿ, ಸಹೋದರ-ಸಹೋದರಿಯರಾದ ಗಣೇಶ್ (ಉಡುಪಿ),ಶ್ಯಾಮಸುಂದರ (ಮಂಗಳೂರು), ನಿರ್ಮಲಾ (ತಲ್ಲಾಣಿ, ಬೇಕಲ), ಜಲಜಾಕ್ಷಿ (ಕೂಡ್ಲು), ಲಲಿತಾ (ಪುತ್ತೂರು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಗಂಗಾಧರ ಈ ಹಿಂದೆ ನಿಧನಹೊಂದಿದ್ದಾರೆ.






