ಉಪ್ಪಳ: ಬೀದಿ ನಾಯಿಗಳ ಅಕ್ರಮಣ ವ್ಯಾಪಕಗೊಂಡು ಜನರಲ್ಲಿ ಭೀತಿ ಉಂಟಾಗಿರುವ ಬೆನ್ನಲ್ಲೇ ಪ್ರತಾಪ ನಗರ, ಉಪ್ಪಳ, ಉಪ್ಪಳ ಗೇಟ್, ಭಗವತೀ ಗೇಟ್, ವಾಮಂಜೂರು ಚೆಕ್ಪೋಸ್ಟ್, ಹೊಸಂಗಡಿ ಮೊದಲಾದ ರಾಷ್ಟಿçÃಯ ಹೆದ್ದಾರಿ ಹಾಗೂ ಒಳ ಪ್ರದೇಶಗಳಲ್ಲಿ ಬೀದಿ ನಾಯಿಗಳು ವ್ಯಾಪಕಗೊಂಡಿದೆ. ಇದರಿಂದ ಶಾಲಾ ಮಕ್ಕಳ ಸಹಿತ ಜನರ ಸಂಚಾರಕ್ಕೆ ಆತಂಕ ಉಂಟಾ ಗಿರುವುದಾಗಿ ದೂರಲಾಗಿದೆ. ವಾಮಂಜೂರು ಚೆಕ್ಪೋಸ್ಟ್ ಬಳಿಯ ಹೆದ್ದಾರಿಯಲ್ಲಿ 10ಕ್ಕಿಂತ ಅಧಿಕ ಬೀದಿ ನಾಯಿಗಳ ಗುಂಪು ಸವಾರಿ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ. ತ್ಯಾಜ್ಯಯಿರುವ ಪ್ರದೇಶದಲ್ಲಿ ಪರಸ್ಪರ ಕಚ್ಚಾಡಿಕೊಳ್ಳು ವುದು, ವಾಹನಗಳ ಎದುರಿಗೆ ಅಡ್ಡಾದಿಡ್ಡಿಯಾಗಿ ಓಡುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಇದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯÁಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ. ಅಲೆಮಾರಿ ನಾಯಿಗಳ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.







