ತಿರುವನಂತಪುರ: ರಾಜ್ಯದ ಪೊಲೀಸ್ ಇಲಾಖೆಯ 161 ಡಿವೈಎಸ್ಪಿಗಳನ್ನು ಅತ್ತಿತ್ತ ಬದಲಾಯಿಸಿ ರಾಜ್ಯ ಸರಕಾರ ಆದೇಶ ಜ್ಯಾರಿಗೊಳಿಸಿದೆ. ಇದರಂತೆ ಬೇಕಲ ಡಿವೈಎಸ್ಪಿಯಾಗಿ ವಿ.ಕೆ. ವಿಶ್ವಂಭರನ್ ನಾಯರ್, ಹೊಸದುರ್ಗ ಡಿವೈಎಸ್ಪಿ ಯಾಗಿ ಎಂ.ಪಿ. ಅನಿಲ್ ಕುಮಾರ್ ಮತ್ತು ಕಾಸರಗೋಡು ಕ್ರೈಮ್ ಬ್ರಾಂಚ್ ಡಿವೈಎಸ್ಪಿಯಾಗಿ ಮೂಸಾ ವಳ್ಳಿಕಾಡನ್ರನ್ನು ನೇಮಿಸಲಾಗಿದೆ. ಅನಿಲ್ ಕುಮಾರ್ ಕಾಞಂಗಾಡ್ ಪುದುಕೈ ನಿವಾಸಿ, ವಿ.ಕೆ. ವಿಶ್ವಂಭರನ್ ಕುಂಡಂಕುಳಿ ನಿವಾಸಿಯಾಗಿದ್ದಾರೆ.





