ಮಧೂರು: ಬೀದಿಬದಿ ವಿಶ್ರಾಂತಿ ಕೇಂದ್ರ ತೆರೆಯಲು ವ್ಯಾಪಾರಿಗಳ ಆಗ್ರಹ

ಮಧೂರು: ಮಧೂರು ಪಂಚಾಯತ್ ವತಿಯಿಂದ ಮಧೂರು ಕ್ಷೇತ್ರ ಪರಿಸರದಲ್ಲಿ ನಿರ್ಮಿಸಿದ ಬೀದಿಬದಿ ವಿಶ್ರಾಂತಿ ಕೇಂದ್ರವನ್ನು ತೆರೆದು ಕಾರ್ಯಾಚರಿಸುವಂತೆ ಮಾಡಬೇಕೆಂದು ಮಧೂರು ವ್ಯಾಪಾರಿ ವ್ಯವಸಾಯಿ ಘಟಕ ಸಮ್ಮೇಳನ ಆಗ್ರಹಿಸಿದೆ. ಮಧೂರು ಕ್ಷೇತ್ರಕ್ಕೆ ತಲುಪುವ ಭಕ್ತರಿಗೆ ಇದು ಬಹಳ ಉಪಪ್ರದವಾಗಲಿದ್ದು, ಈಗ ವಿಶ್ರಾಂತಿ ಕೇಂದ್ರವಿಲ್ಲದೆ ಸಮಸ್ಯೆಯಾಗಿದೆಯೆಂದು ವ್ಯಾಪಾರಿಗಳು ತಿಳಿಸಿದ್ದಾರೆ.

You cannot copy contents of this page