ಆಟೋಮ್ಯಾಟಿಕ್ ಗೇಟ್‌ನಲ್ಲಿ ಸಿಲುಕಿ ಬಾಲಕ ಮೃತ್ಯು: ವಿಷಯ ತಿಳಿದ ಅಜ್ಜಿ ಕುಸಿದುಬಿದ್ದು ಸಾವು

ಮಲಪ್ಪುರಂ: ಆಟೋಮ್ಯಾಟಿಕ್ ಗೇಟ್‌ನಲ್ಲಿ ಸಿಲುಕಿ ಒಂಭತ್ತರ ಹರೆಯದ ಬಾಲಕ ಮೃತಪಟ್ಟಿದ್ದು, ವಿಷಯ ತಿಳಿದು ತಲುಪಿದ ಅಜ್ಜಿ ಆಸ್ಪತ್ರೆಯಲ್ಲಿ ಕುಸಿದುಬಿದ್ದು ಸಾವಿಗೀಡಾದ ದಾರುಣ ಘಟನೆ ನಡೆದಿದೆ. ಮಲಪ್ಪುರಂ ತಿರೂರು ವೈಲತ್ತೂರು ಬೆಲವಿಲ್ ಪಂಙನಂ ಕಾಟ್ಟಿಲ್ ಕುನ್ನಶ್ಶೇರಿ ಎಂಬಲ್ಲಿನ  ಅಬ್ದುಲ್ ಗಫೂರ್-ಸಾಜಿಲ ದಂಪತಿ ಪುತ್ರ ಮುಹಮ್ಮದ್ ಸಿನಾನ್ ಗೇಟ್‌ನ ಮಧ್ಯೆ  ಸಿಲುಕಿ ಮೃತಪಟ್ಟಿದ್ದಾನೆ. ವಿಷಯ ತಿಳಿದು ಆಸ್ಪತ್ರೆಗೆ ತಲುಪಿದ ಗಫೂರ್‌ರ ತಾಯಿ ಆಸ್ಯ (51) ಎಂಬವರು ಕುಸಿದುಬಿದ್ದು ಸಾವಿ ಗೀಡಾಗಿದ್ದಾರೆ. ನಿನ್ನೆ ಸಂಜೆ 4 ಗಂಟೆ ವೇಳೆ ಬಾಲಕ ದುರ್ಘಟನೆಯಲ್ಲಿ ಮೃತಪಟ್ಟಿದ್ದನು. ನೆರೆಮನೆಯ ಆಟೋಮ್ಯಾಟಿಕ್ ಗೇಟ್ ದಾಟಿ ಮಸೀದಿಗೆ ತೆರಳುತ್ತಿದ್ದ ಬಾಲಕ ಗೇಟ್‌ನಲ್ಲಿ ಸಿಲುಕಿಕೊಂಡಿದ್ದನು. ಅದನ್ನು ಕಂಡ ಸ್ಥಳೀಯರು ಕೂಡಲೇ ಬಾಲಕನನ್ನು ಆಸ್ಪತ್ರೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ವಿಷಯ ತಿಳಿದು ಅಜ್ಜಿ ಆಸ್ಯ ಆಸ್ಪತ್ರೆಗೆ ತಲುಪಿದ್ದರು. ತೀವ್ರ ದುಃಖಿತರಾಗಿದ್ದ ಅವರು  ರಾತ್ರಿ 12 ಗಂಟೆ ವೇಳೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.

RELATED NEWS

You cannot copy contents of this page