ಕಣ್ವತೀರ್ಥದಲ್ಲಿ ಮನೆ ಕಳವು: ಆರೋಪಿ ಪೊಲೀಸ್ ಕಸ್ಟಡಿಯಲ್ಲಿ
ಮಂಜೇಶ್ವರ: ಕುಂಜತ್ತೂರು ಬಳಿಯ ಕಣ್ವತೀರ್ಥದಲ್ಲಿ ಉತ್ತರ ಪ್ರದೇಶ ನಿವಾಸಿ ಯೋಗೀಶ್ ಎಂಬ ವರು ವಾಸಿಸುವ ಬಾಡಿಗೆ ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದ ಪ್ರಕರ ಣದಲ್ಲಿ ಆರೋಪಿಯನ್ನು ಪೊಲೀ ಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಉತ್ತರಪ್ರದೇಶ ನಿವಾಸಿಯೂ, ಕಣ್ವತೀರ್ಥದಲ್ಲಿ ವಾಸಿಸುತ್ತಿರುವ ಗಣಪತಿ (30) ಎಂಬಾತ ಕಸ್ಟಡಿಯ ಲ್ಲಿರುವ ಆರೋಪಿಯೆಂದು ಪೊಲೀ ಸರು ತಿಳಿಸಿದ್ದಾರೆ. ಈತನನ್ನು ತನಿಖೆಗೊಳಪಡಿಸಿದ ಬಳಿಕ ಬಂಧನ ದಾಖಲಿಸಲಾಗುವುದೆಂದು ತಿಳಿಸಲಾ ಗಿದೆ. ಕಳೆದ ಬುಧವಾರ ಹಗಲು ಹೊತ್ತಿನಲ್ಲಿ ಯೋಗೀಶ್ರ ಮನೆ ಯಿಂದ ಕಳವು ನಡೆದಿತ್ತು. ಮನೆಯ ಮರದ ಕಿಟಿಕಿಯನ್ನು ತೆರವುಗೊಳಿಸಿ ಒಳಗೆ ನುಗ್ಗಿದ ಕಳ್ಳ ಕಪಾಟಿನಲ್ಲಿದ್ದ ಎರಡೂವರೆ ಪವನ್ ಚಿನ್ನಾಭರಣ ಕಳವು ನಡೆಸಿರುವುದಾಗಿ ದೂರಲಾಗಿದೆ.