ತ್ಯಾಜ್ಯ ಸಂಸ್ಕರಣೆ ಉಲ್ಲಂಘನೆ ವಿರುದ್ಧ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನಿಂದ ಕಠಿಣ ಕ್ರಮ: ವಿವಿಧೆಡೆಗಳಿಂದ ದಂಡ ವಸೂಲಿ

ಕಾಸರಗೋಡು: ತ್ಯಾಜ್ಯಮುಕ್ತ ಜಿಲ್ಲೆ ಎಂಬ ಘೋಷಣೆಯ ಅಂಗ ವಾಗಿ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ತ್ಯಾಜ್ಯ ಸಂಸ್ಕರಣೆ ಉಲ್ಲಂ ಘನೆಗಳ ವಿರುದ್ಧ ತಪಾಸಣೆ ತೀವ್ರಗೊ ಳಿಸಿದೆ. ಚೆಂಗಳ ಪಂಚಾಯತ್ನ ಬೇರ್ಕದಲ್ಲಿ ಕ್ವಾರ್ಟರ್ಸ್ಗಳಾಗಿ ಉಪಯೋಗಿಸುವ ಐದರಷ್ಟು ಕಟ್ಟಡ ಸಮುಚ್ಚಯಗಳಿಂದಿರುವ ಆಹಾರ ಪದಾರ್ಥಗಳ ಅವಶಿಷ್ಟಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ಬದಿಯ ಕಟ್ಟಡ ವೊಂದರಲ್ಲಿ ರಾಶಿ ಹಾಕಿದ್ದು, ನಿರ್ಲಕ್ಷ್ಯ ವಹಿಸಿರುವುದಕ್ಕೆ ಹಾಗೂ ಒಂದು ಕಟ್ಟಡದಿಂದಿರುವ ಮಲಿನ ಜಲ ಸಾರ್ವಜನಿಕ ಸ್ಥಳಕ್ಕೆ ಹರಿಯಬಿಟ್ಟಿರು ವುದು ಪತ್ತೆಯಾದ ಹಿನ್ನೆಲೆಯಲ್ಲಿ ಮಾಲಕನಿಗೆ 15,000 ರೂ. ದಂಡ ಹೇರಲಾಯಿತು.
ಕ್ವಾರ್ಟರ್ಸ್ನಿಂದಿರುವ ಉಪ ಯೋಗಶೂನ್ಯ ಜಲವನ್ನು ರಸ್ತೆಯ ಚರಂಡಿಗೆ ಹರಿಯಬಿಟ್ಟ ಕ್ವಾರ್ಟರ್ಸ್ ಮಾಲಕನಿಂದ 5000 ರೂ. ತಕ್ಷಣ ದಂಡ ವಸೂಲು ಮಾಡಲಾಗಿದೆ. ಮಲಿನ ಜಲವನ್ನು ಕ್ವಾರ್ಟರ್ಸ್ನ ಸಮೀಪದಲ್ಲೇ ಕಟ್ಟಿ ನಿಲ್ಲುವಂತೆ ಮಾಡಿದ ಪಡುವಡ್ಕದ ಕಟ್ಟಡ ಮಾಲಕನಿಂದ 5000 ರೂ. ದಂಡ ವಸೂಲು ಮಾಡಲಾಗಿದೆ. ಪನ್ನಿಪ್ಪಾರೆಯಲ್ಲೂ, ಬೇರ್ಕದಲ್ಲೂ ಕಾಂಪ್ಲೆಕ್ಸ್, ಬಿಲ್ಡಿಂಗ್ ಎಂಬಿವುಗಳ ಮಾಲಕರಿಂದ ತ್ಯಾಜ್ಯವನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ 2000 ರೂ.ನಂತೆ ದಂಡ ಪಡೆಯಲಾಗಿದೆ.
ಕುಂಬ್ಡಾಜೆ ಪಂಚಾಯತ್ನ ಪೊಡಿ ಪ್ಪಳ್ಳದಲ್ಲಿರುವ ಪ್ರಧಾನ ರಸ್ತೆ ಬದಿಯಲ್ಲಿ ಕರುವಲ್ತಡ್ಕ ಎಂಬ ಸ್ಥಳದಲ್ಲಿ ತ್ಯಾಜ್ಯ ರಾಶಿ ಹಾಕಿರುವುದಕ್ಕೆ ಸ್ಥಳದ ಮಾಲಕನಿಂದ 5000 ರೂ. ದಂಡ ಪಡೆಯಲಾಗಿದ್ದು, ಸ್ಥಳವನ್ನು ಶುಚಿಗೊಳಿಸಲು ಮುಂದೆ ಅಲ್ಲಿ ತ್ಯಾಜ್ಯ ಹಾಕದಂತೆ ನೆಟ್ಗಳನ್ನು ಸ್ಥಾಪಿ ಸಲು ನಿರ್ದೇಶಿಸಲಾಯಿತು. ಅಂಗಡಿ ಹಾಗೂ ಪರಿಸರವನ್ನು ಶುಚಿಯಾಗಿರಿಸದೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದ ಏತಡ್ಕದ ಇಲೆಕ್ಟ್ರಿಕಲ್ಸ್, ಚಹಾದಂಗಡಿ, ಸ್ಟೋರ್ ಎಂಬೀ ಸಂಸ್ಥೆಗಳ ಮಾಲಕರಿಂದ 2000 ರೂ.ನಂತೆ ತಕ್ಷಣ ದಂಡ ವಸೂಲು ಮಾಡಲಾಯಿತು.
ತ್ಯಾಜ್ಯಗಳನ್ನು ವಿಂಗಡಿಸಿ ಹಸಿರು ಕ್ರಿಯಾಸೇನೆಗೆ ನೀಡದಿರುವುದು, ಪ್ಲಾಸ್ಟಿಕ್ ಸಹಿತವಿರುವ ತ್ಯಾಜ್ಯಗಳನ್ನು ಕ್ವಾರ್ಟರ್ಸ್ ಪರಿಸರದಲ್ಲಿ ಉಪೇಕ್ಷಿಸಿ ರುವುದು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಕಾಞಂಗಾಡ್ ಟಿ.ವಿ.ರಸ್ತೆಯ ಕ್ವಾರ್ಟರ್ಸ್ ಮಾಲಕನಿಗೆ 10,000 ರೂ. ಹಾಗೂ ತ್ಯಾಜ್ಯ ಸುಟ್ಟ ಹಿನ್ನೆಲೆ ಯಲ್ಲಿ ಆವಿಕ್ಕರದ ಹಾಶಿ ಕ್ವಾರ್ಟ ರ್ಸ್ ಮಾಲಕನಿಗೆ 5000 ರೂ. ದಂಡ ಹೇರಲಾಗಿದೆ. ತಪಾಸಣಾ ತಂಡದಲ್ಲಿ ಜಿಲ್ಲಾ ಎನ್ಫೋರ್ಸ್ ಮೆಂಟ್ ಸ್ಕಾಡ್ ಲೀಡರ್ ಕೆ.ವಿ. ಮೊಹಮ್ಮದ್ ಮದನಿ, ಅಸಿಸ್ಟೆಂಟ್ ಸೆಕ್ರೆಟರಿ ಸಹಜನ್ ಕೆ.ವಿ., ಹೆಲ್ತ್ ಇನ್ಸ್ಪೆಕ್ಟರ್ ರಶ್ಮಿ ಕೆ, ಸದಸ್ಯ ಇ.ಕೆ. ಫಾಸಿಲ್ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page