ನಗರದಲ್ಲಿ ಬೈಕ್ ಕಳವು

ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಿಲುಗಡೆಗೊಳಿಸಲಾಗಿದ್ದ ಬೈಕ್ ಕಳವುಗೈಯ್ಯಲ್ಪಟ್ಟಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಕೇಳುಗುಡ್ಡೆಯ ಪ್ರವೀಣ್ ಕುಮಾರ್ (45) ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಾರ್ಚ್ 10 ಮತ್ತು 12ರ ದಿನದ ನಡುವೆ ಕಳವು ಗೈಯ್ಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ರೀತಿ ನಗರದ ಕೋಟೆಕಣಿಯ ಕ್ವಾರ್ಟರ್ಸ್ ಒಂದರ ಬಳಿಯಿಂ ದಲೂ ಮೊನ್ನೆ ಬೈಕೊಂದು ಕಳವುಹೋಗಿತ್ತು.

RELATED NEWS

You cannot copy contents of this page