ಉಪ್ಪಳ: ಯುವಕನನ್ನು ತಂಡ ವೊಂದು ನೈತಿಕ ಪೊಲೀಸ್ಗಿರಿಯ ಹೆಸರಲ್ಲಿ ದಾರಿಯಲ್ಲಿ ತಡೆದು ನಿಲ್ಲಿಸಿ ಹಾಗೂ ವಾಸಸ್ಥಳದಲ್ಲಿ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಈ ಸಂಬಂಧ ಓರ್ವನನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ಉಪ್ಪಳ ರೈಲು ನಿಲ್ದಾಣ ಬಳಿ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಇಬ್ರಾಹಿಂ ಕರೀಂ (30) ಎಂಬವರಿಗೆ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ. ನಿನ್ನೆ ಮುಂಜಾನೆ 2 ಗಂಟೆ ವೇಳೆ ಸಿನಿಮಾ ವೀಕ್ಷಿಸಿ ವಾಸಸ್ಥಳಕ್ಕೆ ನಡೆದು ಹೋಗುತ್ತಿದ್ದ ಇಬ್ರಾಹಿಂ ಕರೀಂರನ್ನು ಇಬ್ಬರು ವ್ಯಕ್ತಿಗಳು ಉಪ್ಪಳ ರೈಲು ನಿಲ್ದಾಣ ರಸ್ತೆಯಲ್ಲಿ ತಡೆದು ನಿಲ್ಲಿಸಿ ಪ್ರಶ್ನಿಸಿ ಹಲ್ಲೆಗೈದಿ ದ್ದಾರೆನ್ನಲಾಗಿದೆ. ಬಳಿಕ ಕೊಠಡಿಗೆ ಮರಳಿದ ಇಬ್ರಾಹಿಂ ಕರೀಂರಿಗೆ ಮೊದಲು ಹಲ್ಲೆಗೈದ ಇಬ್ಬರ ಸಹಿತ 5 ಮಂದಿ ತಂಡ ತಲುಪಿ ಹಲ್ಲೆಗೈದಿದ್ದು ತಲೆಯನ್ನು ಗೋಡೆಗೆ ಬಡಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಗಾಯಗೊಂಡ ಇವರು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.






