ಪುತ್ರಿಗೆ ಉಪಟಳ ನೀಡಿದ ಮಧ್ಯವಯಸ್ಕನಿಗೆ ತಾಯಿಯಿಂದ ಕಪಾಲಮೋಕ್ಷ

ಪತ್ತನಂತಿಟ್ಟ: ಶಾಲೆಯಿಂದ ಹಿಂತಿರುಗುತ್ತಿದ್ದ ಪ್ಲಸ್ ಟು ವಿದ್ಯಾರ್ಥಿನಿ ವಿರುದ್ಧ ಲೈಂಗಿಕ ಚೇಷ್ಠೆ ನಡೆಸಿದ ಮಧ್ಯವಯಸ್ಕನಿಗೆ ವಿದ್ಯಾರ್ಥಿನಿಯ ತಾಯಿ ಕಪಾಲಮೋಕ್ಷ ಮಾಡಿದ ಘಟನೆ ನಡೆದಿದೆ. ವಿದ್ಯಾರ್ಥಿನಿ ವಿರುದ್ಧ ಲೈಂಗಿಕ ಚೇಷ್ಠೆ ನಡೆಸಿದ ಮುಂಡಪ್ಪಳ್ಳಿತ್ತರ ಪುತ್ತನ್ ವೀಟಿಲ್ ರಾಧಾಕೃಷ್ಣ ಪಿಳ್ಳೆ (೫೯) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನೆಲ್ಲಿಮುಗಲ್ ಜಂಕ್ಷನ್ ಎಂಬ ಸ್ಥಳದಲ್ಲಿ ನಿನ್ನೆ ಸಂಜೆ ೫ ಗಂಟೆಗೆ ಘಟನೆ ನಡೆದಿತ್ತು. ಬಸ್‌ನಲ್ಲಿ ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಇದನ್ನು ತಾಯಿ ಪ್ರಶ್ನಿಸಿದ್ದರು.  ಪುತ್ರಿ ಬಸ್‌ನಿಂದ ಇಳಿದಾಗ ಅಕ್ರಮಿ ಉಪಟಳ ನೀಡಲು ಯತ್ನಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಅಸಭ್ಯವಾಗಿ ವರ್ತಿಸಿದ್ದು, ಈ ವೇಳೆ ಮುಖಕ್ಕೆ ಬಡಿದಿರುವುದಾಗಿ ತಾಯಿ ತಿಳಿಸಿದ್ದಾರೆ.

ರಾಧಾಕೃಷ್ಣ ಪಿಳ್ಳೆ ವಿದ್ಯಾರ್ಥಿನಿಯ ಕಾಲನ್ನು ಸ್ಪರ್ಶಿಸಿದ್ದನು. ಯಾಕೆ ಈ ರೀತಿ ಮಾಡಿದ್ದೆಂದು ಪ್ರಶ್ನಿಸಿದಾಗ ಅಸಹ್ಯಕರ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಇನ್ನೋರ್ವೆ ವಿದ್ಯಾರ್ಥಿನಿಗೆ ಈ ರೀತಿಯ ಅನುಭವ ಉಂಟಾಗಬಾರದೆಂಬ ಹಿನ್ನೆಲೆಯಲ್ಲಿ ಆತನ ಮುಖಕ್ಕೆ ಬಡಿದಿರುವುದೆಂದು ತಾಯಿ ತಿಳಿಸಿದ್ದಾರೆ. ಮೂಗಿಗೆ ಗಾಯಗೊಂಡು ಆರೋಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

RELATED NEWS

You cannot copy contents of this page