ಪೈವಳಿಕೆ ಸಹಕಾರಿ ಬ್ಯಾಂಕ್ ಚುನಾವಣೆ ವಿಜೇತರಿಗೆ ಸಹಕಾರ ಭಾರತಿ ಅಭಿನಂದನೆ

ಪೈವಳಿಕೆ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಸಮಿತಿಯ ಅಧ್ಯಕ್ಷರಾಗಿ ಶ್ರೀಧರ ಹೊಳ್ಳರನ್ನು ಆಯ್ಕೆ ಮಾಡಲಾಗಿದೆ. ನವಂಬರ್ ೪ರಂದು ಪೈವಳಿಕೆ ಬ್ಯಾಂಕ್‌ನ ಆಡಳಿತ ಸಮಿತಿ ಚುನಾವಣೆಯಲ್ಲಿ ಜಯಗಳಿಸಿದ ಸಹಕಾರ ಭಾರತಿ ಅಭ್ಯರ್ಥಿಗಳಾದ ಗಣಪತಿ ಭಟ್ ಪುಂಡಾರಿ, ಶಾಲಿನಿ ಕುಮಾರಿ, ಆಶಾದೇವಿ, ಶ್ರೀಧರ ಹೊಳ್ಳರನ್ನು ಅಭಿನಂದಿಸಲಾಯಿತು. ಪಂಚಾಯತ್ ಸಮೀಪದ ಸಭಾಂ ಗಣದಲ್ಲಿ  ಜರಗಿದ ಕಾರ್ಯಕ್ರಮದಲ್ಲಿ ಸಹಕಾರ ಭಾರತೀಯ ಜಿಲ್ಲಾಧ್ಯಕ್ಷ ಗಣೇಶ್ ಪಾರೆಕಟ್ಟೆ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ, ಮುಖಂಡರಾದ ಹರಿಶ್ಚಂದ್ರ ಮಂಜೇಶ್ವರ, ಮುರಳೀಧರ ಯಾದವ್, ಸಹಕಾರ ಭಾರತೀಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಿದೂರು ಶಂಕರನಾರಾಯಣ ಭಟ್, ತಾಲೂಕು ಅಧ್ಯಕ್ಷ ಅಶೋಕ ಬಾಡೂರು, ಕ್ಯಾಂಪ್ಕೋ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಬಾನೊಟ್ಟು ಉಪಸ್ಥಿತರಿದ್ದರು. ಸರ್ಕಲ್ ಕೋ-ಆಪರೇಟಿವ್ ಯೂನಿಯನ್ ಸದಸ್ಯರಾದ ವಿಘ್ನೇಶ್ವರ ಕೆದುಕೋಡಿ ಸ್ವಾಗತಿಸಿ, ಲೋಕೇಶ ನೋಂಡ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page