ಪ್ರತಾಪನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ತರವಾಡು ವಿಜ್ಞಾಪನಾ ಪತ್ರಿಕೆ ಬಿಡುಗಡೆ

ಮಂಗಲ್ಪಾಡಿ: ಪ್ರತಾಪನಗರ ಬೀಟಿಗದ್ದೆಯಲ್ಲಿ ಗ್ರಾಮಸ್ಥರು ಹಾಗೂ ತರವಾಡು ಮನೆಗೆ ಸಂಬಂಧಪಟ್ಟವರು ಸೇರಿಕೊಂಡು ನೂತನವಾಗಿ ನಿರ್ಮಿ ಸುವ  ಶ್ರೀ ಕೊರಂಟಿ ಮುಗೇರು ತರ ವಾಡು ದೈವದ ಸನ್ನಿಧಿಯ ವಿಜ್ಞಾಪನಾ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.  ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ  ಕೆ.ಪಿ. ವಲ್ಸರಾಜ್ ಮಂಗಲ್ಪಾಡಿ ತರವಾಡು ಮನೆಯ ಸುಫಲಚಂದ್ರ ನಾಯರ್‌ರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಸಮಿತಿ ಉಪಾಧ್ಯಕ್ಷ ಆನಂದ ಅಡ್ಕತ್ತಬೈಲು, ತರವಾಡು ಗುರಿಕ್ಕಾರ ಜಯಕರ,   ಪ್ರಧಾನ ಕಾರ್ಯದರ್ಶಿ ಜಿತೇಂದ್ರ ತೂಮಿನಾಡು ಹಾಗೂ ತರವಾಡಿನ ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

You cannot copy contents of this page