ಬದಿಯಡ್ಕ: ಬ್ಯಾಂಕ್ ಪ್ರಬಂಧಕಿಗೆ ಬೀಳ್ಕೊಡುಗೆ

ಬದಿಯಡ್ಕ: ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಬದಿಯಡ್ಕ ಶಾಖೆಯಿಂದ ವರ್ಗಾವಣೆಗೊಳ್ಳುತ್ತಿರುವ ಶಾಖಾ ಪ್ರಬಂಧಕಿ ವಸಂತಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿ ಸಲಾಯಿತು. ಕಾರ್ಯಕ್ರಮದಲ್ಲಿ  ನಿವೃತ್ತ ಯೋಧ ದಾಮೋದರ ಅಧ್ಯಕ್ಷತೆ ವಹಿಸಿದರು.  ಬದಿಯಡ್ಕ ಪಂಚಾಯತ್ ಸದಸ್ಯ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. ಪಂಚಾಯತ್ ಸದಸ್ಯರಾದ ಈಶ್ವರ ಮಾಸ್ತರ್, ಗೋಪಾಲಕೃಷ್ಣ ಮುಂ ಡೋಳುಮೂಲೆ, ಅನಂತಪ್ರಸಾದ್, ಬಿ. ಹಂಸ, ರಮೇಶ್ ಆಳ್ವ ಅತಿಥಿಗಳಾಗಿ ಉಪಸ್ಥಿತರಿದ್ದರು. ಹರೀಶ್ ನಾರಂಪಾಡಿ ಸ್ವಾಗತಿಸಿ, ಕೃಷ್ಣ ಪ್ರಸಾದ್ ವಂದಿಸಿದರು.

You cannot copy contents of this page