ಬಿಎಂಎಸ್ ಕುಂಬಳೆ ವಲಯ ಸಮಾವೇಶ

ಉಪ್ಪಳ: ಭಾರತೀಯ ಮಜ್ದೂರ್ ಸಂಘ್ (ಬಿಎಂಎಸ್) ಕುಂಬಳೆ ವಲಯ ಸಮಿತಿ ಸಭೆ ಕುಂಬಳೆ ಕಾರ್ಯಾಲಯದಲ್ಲಿ ಜರಗಿತು. ವಲಯಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಮುಂಬರುವ ಬಿಎಂಎಸ್ ಸ್ಥಾಪನಾ ದಿನದಂಗವಾಗಿ ಎಲ್ಲಾ ಯೂನಿಟ್ ಗಳಲ್ಲಿ ಈ ತಿಂಗಳ 23ರಂದು  ಧ್ವಜಾರೋಹಣ, ೩೦ರ ಮುಂಚಿತವಾಗಿ  ಯೂನಿಟ್‌ಗಳಲ್ಲಿ ಕುಟುಂಬ ಸಮಾವೇಶಗಳನ್ನು ನಡೆಸಲು  ತೀರ್ಮಾನಿಸಲಾಗಿದೆ. ಜಿಲ್ಲಾ ಜೊತೆ ಕಾರ್ಯದರ್ಶಿ ಪಿ. ದಿನೇಶ್ ವಿವರಿಸಿದರು. ಹರೀಶ್ ಸಿದ್ದಿಬೈಲು ಮಾತನಾಡಿದರು. ವರದರಾಜ್ ಸ್ವಾಗತಿಸಿ, ಐತ್ತಪ್ಪ ನಾರಾಯಣಮಂಗಲ ವಂದಿಸಿದರು.

RELATED NEWS

You cannot copy contents of this page