ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಗೆ: ನೀಲೇಶ್ವರದಲ್ಲಿ ಗಂಟೆಗಳ ಕಾಲ ಉಳಿದ ರೈಲು

ಕಾಸರಗೋಡು: ನಿಜಾಮುದ್ದೀನ್- ಎರ್ನಾಕುಳಂ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅರ್ಧಗಂಟೆ ಕಾಲ ನೀಲೇಶ್ವರದಲ್ಲಿ ರೈಲನ್ನು ನಿಲುಗಡೆಗೊಳಿ ಸಲಾಗಿದೆ. ಇಂದು ಬೆಳಿಗ್ಗೆ ೮ ಗಂಟೆಗೆ ಘಟನೆ ಸಂಭವಿಸಿದೆ. ರೈಲಿನ ಎಸ್ ೫ನೇ ಬೋಗಿಯ ಅಡಿಭಾಗದಲ್ಲಿ ಬೆಂಕಿ ಕಾಣಿಸಿ ಬಳಿಕ ಹೊಗೆ ಕಂಡುಬಂದಿದೆ. ನಿಲ್ದಾಣದಲ್ಲಿದ್ದ ಪ್ರಯಾಣಿಕೆ ಓರ್ವೆ ರೈಲ್ವೇ ಸ್ಟೇಶನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದು, ಕೂಡಲೇ ಲೋಕೋ ಪೈಲೆಟ್‌ಗೆ ಮಾಹಿತಿ ನೀಡಲಾಗಿದೆ. ಬಳಿಕ ಬೆಂಕಿ ನಂದಿಸಿ   ರೈಲುಸಂಚಾರ ಮುಂದುವರಿಸಿದೆ. ರೈಲಿನ ಬ್ರೇಕ್‌ನಿಂದ ಹೊಗೆ ಉಂಟಾಗಿದೆ ಎನ್ನಲಾಗಿದೆ.

RELATED NEWS

You cannot copy contents of this page