ಮತ್ಸ್ಯ ತೊಯಿಲಾಳಿ ಜಿಲ್ಲಾ ಉಪಾಧ್ಯಕ್ಷ ನಿಧನ

ಕಾಸರಗೋಡು: ಮುಕಯ ಬೋವಿ ಸಮುದಾಯದ ಸ್ಥಾಪಕ ಸದಸ್ಯ ಹಾಗೂ ಅಧ್ಯಕ್ಷರಾಗಿದ್ದ, ಮತ್ಸ್ಯ ತೊಯಿಲಾಳಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ, ಕಾವುಗೋಳಿ ಕಡಪ್ಪುರದ ನಿವಾಸಿ ಮಾಧವನ್ ಕೊಕ್ಕೋಡ್ (72) ನಿಧನ ಹೊಂದಿದರು. ಕಾರ್ಲೆ ಗುತ್ಯಮ್ಮ ಭಗವತಿ ಕ್ಷೇತ್ರ ಸಮಿತಿ ಅಧ್ಯಕ್ಷ, ಕಾವುಗೋಳಿ ಶ್ರೀ ಮಹಾವಿಷ್ಣು ಕ್ಷೇತ್ರ ಸಮಿತಿ ಕೋಶಾಧಿಕಾರಿ ಎಂಬೀ ಹುದ್ದೆಗಳಲ್ಲಿ ದುಡಿದಿದ್ದರು. ಮೃತರು ಪತ್ನಿ ಸೀತ, ಮಕ್ಕಳಾದ ಸೀಮಾ, ಸಿಂಧು, ಪುನಿತ್ ಕುಮಾರ್, ಅಳಿಯಂದಿರಾದ ಸೂರಜ್, ಚೇತನ್, ಸೊಸೆ ಮೋನಿಷಾ, ಸಹೋದರರಾದ ಗೋಪಾಲನ್, ಕೃಷ್ಣನ್, ಉದಯ ಕುಮಾರ್, ಸಹೋದರಿಯರಾದ ಜಾನಕಿ, ವಾರಿಜಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page