ಮನೆಯಿಂದ ಹಾಡಹಗಲೇ ೨೩ ಪವನ್ ಚಿನ್ನಾಭರಣ ಕಳವು

ಬದಿಯಡ್ಕ:   ಹಾಡಹಗಲೇ ಮನೆಗೆ  ಕಳ್ಳರು ನುಗ್ಗಿ ೮ ಲಕ್ಷ  ರೂ. ಮೌಲ್ಯದ ೨೩.೫ ಪವನ್‌ನ ಚಿನ್ನದೊಡವೆ ಕಳವುಗೈದ ಘಟನೆ ಮುಗುವಿನಲ್ಲಿ ನಡೆದಿದೆ.

ಮುಗು  ಕುಂಞಿಪದವು ನಿವಾಸಿ  ಸ್ವಾತಿ ಮಂಜುನಾಥ ರೈ ಎಂಬವರ ಮನೆಯಲ್ಲಿ  ನಿನ್ನೆ  ಹಗಲು ಈ ಕಳವು ನಡೆದಿದೆ. ಮನೆಯವರು   ನಿನ್ನೆ ಮಧ್ಯಾಹ್ನ ಸಮೀಪದ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿಂದ ಅವರು ಹಿಂತಿರುಗಿ ಮನೆಗೆ ಬರುವಷ್ಟರೊಳಗೆ ಕಳವು ನಡೆದಿದೆ.

ಮನೆಯ ಬಾಗಿಲು ಒಡೆದು ಕಳ್ಳರು ಒಳನುಗ್ಗಿದ್ದಾರೆ. ಮನೆಯೊಳಗಿನ ಕಪಾಟಿನೊಳಗಿದ್ದ ಸಾಮಗ್ರಿಗಳನ್ನೆಲ್ಲಾ ಹೊರಗೆ ತೆಗೆದು ಹಾಕಿದ ಸ್ಥಿತಿಯಲ್ಲಿತ್ತು. ಕಪಾಟಿನೊಳಗಿರಿಸಲಾಗಿದ್ದ ಒಡವೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಆ ಬಗ್ಗೆ  ಸ್ವಾತಿ ಮಂಜುನಾಥ ರೈ ನೀಡಿದ ದೂರಿನಂತೆ  ಬದಿಯಡ್ಕ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದರು. ಬೆರಳಚ್ಚು ತಜ್ಞರೂ ಸ್ಥಳಕ್ಕೆ ಆಗಮಿಸಿ ಅಲ್ಲಿಂದ ಹಲವು ಬೆರಳಚ್ಚುಗಳನ್ನು ದಾಖಲಿಸಿ ಕೊಂಡಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page