ವಿಕಲ ಚೇತನ ಬಾಲಕಿಗೆ ಆಸ್ಪತ್ರೆ ಕೊಠಡಿಯಲ್ಲಿ ಕಿರುಕುಳ: ಯುವತಿ, ಯುವಕ ಸೆರೆ

ಮಂಜೇಶ್ವರ: ವಾಹನ ಅಪಘಾ ತದಲ್ಲಿ ಗಾಯಗೊಂಡು, ಆಸ್ಪತ್ರೆ ಯಲ್ಲಿದಾಖಲಾದವರನ್ನು ಕಾಣಲು ತಲುಪಿದ ವಿಕಲ ಚೇತನಳಾದ ಬಾಲಕಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಯುವತಿ ಸಹಿತ ಇಬ್ಬರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಬಿಹಾರ ನಿವಾಸಿ ಅಹಮ್ಮದ್ ಹಲೀಂ (೩೭), ಮಂಗಳೂರು ಕುಲಶೇಖರದ ಶಮೀನ ಬಾನು (೨೮) ಎಂಬಿವರನ್ನು ಮಂಗಳೂರು ಸಿಟಿ ಮಹಿಳಾ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಗರದ ಆಸ್ಪತ್ರೆಯೊಂದರಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.  ಈ ತಿಂಗಳ ೧೦ರಂದು ಅಹಮ್ಮದ್ ಹಲೀಂ ಹಾಗೂ ಶಮೀನರ ಸಂಬಂಧಿಕ ಅಹಮ್ಮದ್  ಬಾಬಾ ಶೇಖ್ ಕಾಸರಗೋಡಿಗೆ ತೆರಳಿದ್ದರು. ಮರಳಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಅವರು ಸಂಚರಿಸಿದ ಬೈಕ್ ಮಂಜೇಶ್ವರದಲ್ಲಿ ಅಪಘಾತಕ್ಕೀಡಾಗಿತ್ತು. ಇದರಿಂದ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರನ್ನು ಕಾಣಲೆಂದು ಶಮೀನ ಬಾನುವಿನ ಜೊತೆಗೆ ವಿಕಲ ಚೇತನಳಾದ ಬಾಲಕಿ ತಲುಪಿದ್ದಳು. ಈ ವೇಳೆ ಶಮೀನಳ ಸಹಾಯದಿಂದ ಅಹಮ್ಮದ್ ಹಲೀಂ ಬಾಲಕಿಗೆ ಆಸ್ಪತ್ರೆ ಕೊಠಡಿಯಲ್ಲಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ.

Leave a Reply

Your email address will not be published. Required fields are marked *

You cannot copy content of this page