ಸಮಾನಾಂತರ ಬಾರ್ ಬಗ್ಗೆ ದೂರು: ದಾಳಿ, ಮದ್ಯ ಸಹಿತ ಓರ್ವನ ಸೆರೆ

ಕಾಸರಗೋಡು: ನಗರದ ಬೀಚ್ ರಸ್ತೆಯಲ್ಲಿ ಸಮಾನಾಂತರ ಬಾರ್ ನಡೆಸುತ್ತಿರುವುದಾಗಿ ಲಭಿಸಿದ ದೂರಿನನ್ವಯ ಕಾಸರಗೋಡು ಅಬ ಕಾರಿ ರೇಂಜ್ ಕಚೇರಿಯ ಅಸಿ ಸ್ಟೆಂಟ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ. ನೇತೃತ್ವದ ಅಬಕಾರಿ ತಂಡ ಅಲ್ಲಿಗೆ ದಾಳಿ ನಡೆಸಿ ಭಾರತೀಯ ನಿರ್ಮಿತ ೫೪೦ ಮಿಲ್ಲಿ ಲೀಟರ್ ಮದ್ಯ ವಶಪಡಿಸಿಕೊಂಡಿದೆ.

ಈ ಸಂಬಂಧ ರಜನೀಶ್  (೩೬) ಎಂಬಾತನನ್ನು ಅಬಕಾರಿ ತಂಡ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ದಾಳಿ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ರಾಜೀ ವ್ ಎ.ವಿ, ಸಿಇಒಗಳಾದ ಮುರಳೀ ಧರನ್ ಎಂ, ಅತುಲ್ ಟಿ.ವಿ, ಮಹಿಳಾ ಸಿಇಒ ಧನ್ಯ ಟಿ.ವಿ. ಎಂಬವರು ಒಳಗೊಂಡಿದ್ದರು. ಬಂ ಧಿತ ಆರೋಪಿಯನ್ನು ಬಳಿಕ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೨)ರಲ್ಲಿ ಹಾಜರುಪಡಿಸಿ ನಂತರ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page