ಹಲವು ಪ್ರಕರಣಗಳ ಆರೋಪಿ ಕಾಪಾ ಪ್ರಕಾರ ಸೆರೆ

ಕಾಸರಗೋಡು: ಮಾದಕದ್ರವ್ಯ ಸಾಗಾಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಯುವಕನ ಮೇಲೆ ಸಮಾಜಘಾತಕ ತಡೆ ಕಾನೂನು (ಕಾಪಾ) ಹೇರಿ ಆತನ ಬಂಧನ ದಾಖಲಿಸಲಾಗಿದೆ. ಮೂಲತಃ ಮುಟ್ಟತ್ತೋಡಿ ಕಲ್ಲಕಟ್ಟೆ ಬೆಳ್ಳೂಲಡ್ಕ ಹೌಸಿನ ನಿವಾಸಿ ಹಾಗೂ ಈಗ ಬೋವಿಕ್ಕಾನಕ್ಕೆ ಸಮೀಪದ ಎಲ್‌ಬಿಎಸ್ ಕಾಲೇಜಿನ ಬಳಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಅಬ್ದುಲ್ ಮುನಾವರ್ ಅಲಿಯಾಸ್ ಮುನಾವರ್ ಅಲಿ (೨೫) ಬಂಧಿತನಾದ ಆರೋಪಿಯಾಗಿದ್ದಾನೆ. ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ಪ್ರಶಾಂತ್ ಕುಮಾರ್ ಅವರು ಈತನನ್ನು ಬಂಧಿಸಿದ್ದಾರೆ.ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ೬ ಮತ್ತು ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಎರಡು ಕೇಸುಗಳಲ್ಲಿ ಬಂಧಿತನು ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಈ ಹಿಂದೆ ಬಂಧಿಸಲಾಗಿದ್ದು, ಆತ ಈಗ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಕಳೆಯುತ್ತಿದ್ದಾನೆ.

RELATED NEWS

You cannot copy contents of this page