ಅಭ್ಯಾಸ ಪ್ರದರ್ಶನ: ಸೀಮೆಎಣ್ಣೆ ಹೊಟ್ಟೆ ಸೇರಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು

ಉಡುಪಿ: ಗಣೇಶ ವಿಗ್ರಹದ ಜಲಸ್ತಂಭನಾ ಶೋಭಾಯಾತ್ರೆ ಮಧ್ಯೆ ಸೀಮೆಎಣ್ಣೆ ಬಾಯಿಗೆ ಸುರಿದು ಬೆಂಕಿಗೆ ಉಗುಳಿ ಪ್ರದರ್ಶನ ನಡೆಸತ್ತಿದ್ದ ಮಧ್ಯೆ ಸೀಮೆಎಣ್ಣೆ ಹೊಟ್ಟೆಗೆ ಸೇರಿ ಚಿಕಿತ್ಸೆಯ ಲ್ಲಿದ್ದ ವ್ಯಕ್ತಿ ಮೃತಪಟ್ಟರು. ಮೀನು ಕಾರ್ಮಿಕ ಮಲ್ಪೆ ನಿವಾಸಿಯಾದ ಸತೀಶ (36) ಮೃತಪಟ್ಟ ಯುವಕ. ಈ ತಿಂಗಳ ೯ರಂದು ರಾತ್ರಿ ಉಡುಪಿ ಮಲ್ಪೆ ತೋಟದ ಗಣೇಶ ವಿಗ್ರಹ ಶೋಭಾ ಯಾತ್ರೆ ಮಧ್ಯೆ ಘಟನೆ ನಡೆದಿದೆ.

ಅಭ್ಯಾಸ ಪ್ರದರ್ಶನ ವೇಳೆ ಅಚಾತುರ್ಯದಿಂದ ಸೀಮೆಎಣ್ಣೆಯನ್ನು ನುಂಗಿದ್ದು ಸಮಸ್ಯೆಗೆ ಕಾರಣವಾಗಿದೆ. ಅಂದು ರಾತ್ರಿಯೇ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾದರೂ ನಿನ್ನೆ ಮೃತಪಟ್ಟರು. ಘಟನೆಯಲ್ಲಿ ಕೇಸು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page