ಮುಳ್ಳೇರಿಯ: ಮನೆ ಬಳಿ ದಾಸ್ತಾನು ಕೊಠಡಿಯಲ್ಲಿರಿಸಿದ್ದ ಎರಡು ಕ್ವಿಂಟಾಲ್ ಸುಲಿದ ಅಡಿಕೆ ಕಳವಿಗೀ ಡಾಗಿದೆ. ಮುಳ್ಳೇರಿಯ ಬೇಂಗತ್ತಡ್ಕ, ನಾವುಂಗಾಲ್ನ ಎನ್. ಬಾಲಕೃಷ್ಣನ್ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜುಲೈ ೧೯ರಿಂದ ೨೯ರ ಮಧ್ಯೆಗಿನ ಯಾವುದೋ ದಿನ ಅಡಿಕೆ ಕಳವಿಗೀಡಾಗಿರುವುದಾಗಿ ಸಂಶಯಿಸ ಲಾಗುತ್ತಿದೆ. ಅಡಿಕೆ ಸಂಗ್ರಹಿಸಿಡಲು ಪ್ರತ್ಯೇಕ ಸಿದ್ಧಪಡಿಸಿದ್ದ ದಾಸ್ತಾನು ಕೊಠಡಿಯಲ್ಲಿ ಮೂರು ಗೋಣಿ ಚೀಲಗಳಲ್ಲಿ ಅಡಿಕೆ ತುಂಬಿಸಿಡಲಾಗಿತ್ತು. ಸುಮಾರು ಒಂದು ಲಕ್ಷ ರೂಪಾಯಿಗಳ ಅಡಿಕೆ ಕಳವಿಗೀಡಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.







