ಕುಂಬಳೆ: ಕುಂಟಂಗೇರಡ್ಕ ಅಂಗನವಾಡಿ ಸಮೀಪದ ಸಾರ್ವ ಜನಿಕ ಪ್ರದೇಶದಲ್ಲಿ ಹಣವಿರಿಸಿ ಜೂಜಾಟ ನಡೆಸುತ್ತಿದ್ದ ಕೇಂದ್ರಕ್ಕೆ ಕುಂಬಳೆ ಪೊಲೀಸರು ನಿನ್ನೆ ಸಂಜೆ ದಾಳಿ ನಡೆಸಿ ನಾಲ್ವರನ್ನು ಸೆರೆಹಿಡಿ ದ್ದಾರೆ. ಈ ಕೇಂದ್ರದಿಂದ 13,700 ರೂ. ವಶಪಡಿಸಲಾಗಿದೆ. ಕುಂಟಂಗೇರಡ್ಕದ ಮುರುಗೇಶ (41), ಅಜಿತ್ (28), ಕಣ್ಣೂರು ಎಡಕ್ಕಾಡ್ನ ದಿವೇಶ್ ಎನ್.ಪಿ (36) ಮತ್ತು ಕಲ್ಯಾಶ್ಶೇರಿ ಕಣ್ಣಾಪುರದ ನಾಗೇಶ್(51)ಎಂಬವರು ಬಂಧಿತ ವ್ಯಕ್ತಿಗಳಾಗಿದ್ದಾರೆ.






