ಉದ್ಯೋಗ ಭರವಸೆಯೊಡ್ಡಿ ಹಣ ಪಡೆದು ವಂಚನೆ: ಮಾಜಿ ಡಿವೈಎಫ್‌ಐ ನೇತಾರೆ ಸಚಿತಾ ರೈ ವಿರುದ್ಧ ಮತ್ತೊಂದು ಕೇಸು

ಕಾಸರಗೋಡು: ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆಯೊಡ್ಡಿ ಹಲವರಿಂದ ಲಕ್ಷಾಂ ತರ ರೂಪಾಯಿ ಪಡೆದು ಲಪಟಾ ಯಿಸಿದ ಡಿವೈಎಫ್ಐ ಮಾಜಿ ನೇತಾರೆ ಸಚಿತಾ ರೈ ವಿರುದ್ಧ ಪೊಲೀಸರು ಮತ್ತೊಂದು ಕೇಸು ದಾಖಲಿಸಿಕೊಂ ಡಿದ್ದಾರೆ. ಕಾಸರಗೋಡು ಕೂಡ್ಲು ರಾಮದಾಸ್ ನಗರದ ಯುವತಿ ನೀಡಿದ ದೂರಿನಂತೆ ಈ ಕೇಸು ದಾಖಲಿಸ ಲಾಗಿದೆ. ಕೇಂದ್ರ ತೋಟಗಾರಿಕಾ ಸಂಶೋಧನಾ ಕಂದ್ರದಲ್ಲಿ ಕ್ಲರ್ಕ್, ಕೇಂದ್ರೀಯ ವಿದ್ಯಾಲಯದಲ್ಲಿ ಅಧ್ಯಾಪಿಕೆ ಎಂಬೀ ಉದ್ಯೋಗದ ಭರವಸೆಯೊಡ್ಡಿ 13.26 ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. 2022 ಡಿಸೆಂಬರ್ 19ರಿಂದ 2024 ಜುಲೈ 14ರವರೆಗಿನ ಕಾಲಾವಧಿಯಲ್ಲಿ ಸಚಿತಾ ರೈಗೆ ಹಣ ನೀಡಿರುವುದಾಗಿ ತಿಳಿಸಲಾಗಿದೆ. ಇದೇ ರೀತಿಯ ಪ್ರಕರಣಕ್ಕೆ ಸಂಬAಧಿಸಿ ಸೆರೆಗೀಡಾಗಿರುವ ಸಚಿತಾ ರೈ ಈಗಲೂ ರಿಮಾಂಡ್ನಲ್ಲಿದ್ದಾಳೆ.

RELATED NEWS

You cannot copy contents of this page