ಕಾಸರಗೋಡು: ಕಾಸರಗೋಡು ಕೋಟೆಕಣಿ ರಾಮನಗರದ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ವತಿಯಿಂದ ನಾಳೆ ಕನ್ನಡ ಪತ್ರಿಕಾ ದಿನಾಚರಣೆ ನಡೆಯಲಿದೆ. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯುವ ಈ ಕಾರ್ಯಕ್ರ ಮವನ್ನು ಗೀತಾ ಪ್ರಕಾಶನದ ಸಂಪಾದಕ ಕೆ.ವಿ.ರಮೇಶ್ ಉದ್ಘಾಟಿಸುವರು. ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯ ತ್ತಡ್ಕ ಅಧ್ಯಕ್ಷತೆ ವಹಿಸುವರು. ಕೆಸಿಎನ್ ಚಾನೆಲ್ನ ನಿರ್ದೇಶಕ ಪುರುಷೋತ್ತಮ ನಾಕ್ ಸಹಿತ ಹಲವರು ಉಪಸ್ಥಿತರಿರುವರು.
ಈ ವೇಳೆ ಕಾಸರಗೋಡು ಹೊಸ ಬಸ್ ನಿಲ್ದಾಣದ ವೈಶಾಲಿ ಬುಕ್ ಸೆಂಟರ್ನ ಪತ್ರಿಕಾ ವಿತರಕ ವಿಶ್ವಾಸ್ ನುಳ್ಳಿಪ್ಪಾಡಿ ಅವರಿಗೆ ಪತ್ರಿಕಾ ಗೌರವಾರ್ಪಣೆ ಮಾಡಲಾಗುವುದು. ಕನ್ನಡಾಭಿಮಾ ನಿಗಳು, ಪತ್ರಕರ್ತರು ಸಹಿತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಬಂಧಪಟ್ಟ ವರು ವಿನಂತಿಸಿದ್ದಾರೆ.







