ಎಡನೀರು ಶ್ರೀಗಳ ಪಂಚಮ ಚಾತುರ್ಮಾಸ್ಯ ಯಶಸ್ವಿಗೆ ಕರೆ
ಎಡನೀರು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಜುಲೈ ೧೦ರಿಂದ ಸೆ.೭ರವರೆಗೆ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಡನೀರು ಮಠದಲ್ಲಿ ಜರಗಲಿದೆ.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಭಕ್ತರ ಮಹಾಸಭೆ ಇತ್ತೀಚೆಗೆ ಎಡನೀರು ಮಠದಲ್ಲಿ ಜರಗಿತು. ಪ್ರೊ. ಎ.ಶ್ರೀನಾಥ್, ಮಾಧವ ಹೇರಳ, ಕೆ.ವಿ. ಬಾಲಕೃಷ್ಣನ್, ಅರ್ಜುನ್ ತಾಯಲಂಗಾಡಿ, ಶಂಕರ ನಾರಾಯಣ ಭಟ್, ದಿವಾಣ ಶಿವಶಂಕರ ಭಟ್, ಸತೀಶ್ ಎಡನೀರು, ಗಿರೀಶ್ ಮುನಿಯಾಲ, ಹರೀಶ್ ಬೊಳಂತಿಮೊಗರು, ವಿನಯ, ಪುರುಷೋತ್ತಮ ಭಟ್, ಮಹೇಶ್ ವಳಕುಂಜ ಮಾತನಾಡಿದರು. ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ನಿವೃತ್ತ ವಿದ್ಯಾಧಿಕಾರಿ ವೇಣು ಗೋಪಾಲ್ ವಂದಿಸಿದರು. ಸೂರ್ಯ ಭಟ್ ಎಡನೀರು ನಿರೂಪಿಸಿದರು. ವೆಂಕಟ್ ಭಟ್ ಎಡನೀರು ಸಹಕಾರ ನೀಡಿದರು.