ಎಡರಂಗ ಸರಕಾರದ ವಿರುದ್ಧ ವರ್ಕಾಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಮಂಜೇಶ್ವರ: ಕೇರಳದ ಎಡರಂಗ ಸರಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಂಗವಾಗಿ  ಹಾಗೂ ಯೂತ್ ಕಾಂಗ್ರೆಸ್ ನಡೆಸಿದ ಮಾರ್ಚ್ ವಿರುದ್ಧ ಪೊಲೀಸರು ದಾಳಿ ನಡೆಸಿ ಹಲ್ಲೆಗೈದಿರುವುದನ್ನು ಪ್ರತಿಭಟಿಸಿ ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ವತಿಯಿಂದ ವರ್ಕಾಡಿಯಲ್ಲಿ ಪ್ರತಿಭ ಟನೆ ನಡೆಸಲಾಯಿತು. ಬ್ಲೋಕ್ ಕಾಂ ಗ್ರೆಸ್ ಅಧ್ಯಕ್ಷ ಮೊಹಮ್ಮದ್ ಡಿಎಂಕೆ ಉದ್ಘಾಟಿಸಿದರು. ಅವರು ಮಾತನಾಡಿ, ಆಡಳಿತದ ಸಕಲ ವಲಯದಲ್ಲೂ ವಿಫಲವಾದ ಎಡರಂಗ ಸರಕಾರ ಹತಾ ಷೆಗೊಂಡು ನಡೆಸುವ ದೌರ್ಜನ್ಯಗಳು ಅವರ ಆಡಳಿತವನ್ನು ಕೊನೆಗೊಳಿಸಲು ಸಹಕಾರಿಯಾದೀತು ಎಂದು ಅವರು ನುಡಿದರು. ಮುಖಂಡರಾದ ಉಮ್ಮರ್ ಬೋರ್ಕಳ, ಪುರುಷೋತ್ತಮ ಅರಿಬೈಲು, ಸದಾಶಿವ ಕೆ, ದಿವಾಕರ ಎಸ್.ಜೆ, ಮೂಸಾ ಡಿ.ಕೆ, ಮಹಮ್ಮೂದ್ ಅಣೆ, ಅಬೂಬಕ್ಕರ್ ಪೊಯ್ಯೆ, ಅಬ್ದುಲ್ಲ, ಅಬೂಬಕ್ಕರ್ ಉರ್ಣಿ, ಹನೀಫ್ ಕುಮೇರು, ಮೂಸ, ಸಲೀಂ, ಉಮ್ಮರ್, ಮೊಯ್ದೀನ್, ನಾಸಿರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page