ಕಾರು- ಬೈಕ್ ಢಿಕ್ಕಿ :ಯುವಕನಿಗೆ ಗಂಭೀರ ಗಾಯ
ಕುಂಬಳೆ: ಕಾರು ಹಾಗೂ ಬೈಕ್ ಢಿಕ್ಕಿ ಹೊಡೆದು ಯುವಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಚೇವಾರು ಕುಡಾಲು ಮೇರ್ಕಳದ ಬಾತಿಷ ಪಿ.ಎಚ್ (೨೪) ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಂದ್ಯೋಡು ಅಡ್ಕದಲ್ಲಿ ಮೊನ್ನೆ ರಾತ್ರಿ ಈ ಅಪಘಾತ ಸಂಭವಿಸಿದೆ. ಬಾತಿಷ ಬೈಕ್ನಲ್ಲಿ ಚೇವಾರು ಭಾಗದಿಂದ ಬಂದ್ಯೋಡಿನತ್ತ ಬರುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಕಾರು ಚಾಲಕನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.