ಕೋಳ್ಯೂರು ದೇವಸ್ಥಾನದಿಂದ ಕಳವು: ಸಮಗ್ರ ತನಿಖೆಗೆ ಸಿಪಿಎಂ ಒತ್ತಾಯ

ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆದ ಕಳವಿನ ಬಗ್ಗೆ ಸಮಗ್ರ ತನಿಖಎ ನಡೆಸಬೇಕೆಂದು  ಸಿಪಿಎಂ ಮೀಂಜ ಮತ್ತು ವರ್ಕಾಡಿ ಲೋಕಲ್ ಸಮಿತಿ ಹಾಗೂ ಕೋಳ್ಯೂರು ಬ್ರಾಂಚ್ ಸಮಿತಿ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದೆ. ಕಳೆದ 26ರಂದು ರಾತ್ರಿ ದೇವಸ್ಥಾನದಲ್ಲಿ ಕಳವು ನಡೆದಿದ್ದು, ಚಿನ್ನಾಭರಣ ಹಾಗೂ ಬೆಳ್ಳಿಯ ಸಾಮಾಗ್ರಿಗಳನ್ನು ದೋಚಲಾಗಿತ್ತು. ಪೊಲೀಸರು ಸರಿಯಾದ ರೀತಿಯಲ್ಲಿ ತನಿಖ ನಡೆಸಿ ಕಳವು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಜಿಲ್ಲಾ ಪೊಲೀಸಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಸಿಪಿಎಂ ಒತ್ತಾಯಿಸಿದೆ.

RELATED NEWS

You cannot copy contents of this page