ಕ್ಷೇತ್ರ ಉತ್ಸವ ಸ್ಥಳದಲ್ಲಿ  ಆಟೋ ಚಾಲಕರೊಳಗೆ  ಘರ್ಷಣೆ: ಓರ್ವನ ಇರಿದು ಕೊಲೆ

ಇಡುಕ್ಕಿ: ಕ್ಷೇತ್ರ ಉತ್ಸವ ಸ್ಥಳದಲ್ಲಿ  ಆಟೋ  ಚಾಲಕರೊಳಗೆ ಘರ್ಷಣೆ ನಡೆದಿದ್ದು, ಈ ವೇಳೆ ಓರ್ವನನ್ನು ಇರಿದು ಕೊಲೆಗೈದ ಘಟನೆ ವಂಡಿಪ್ಪೆರಿಯಾರ್‌ನಲ್ಲಿ ನಡೆದಿದೆ. ಕುಮಳಿ ಅಟ್ಟಪಳ್ಳಂ ನಿವಾಸಿ ಜಿತ್ತು (೨೨) ಎಂಬವರು ಮೃತ ವ್ಯಕ್ತಿ.  ಇವರು ಆಟೋ ರಿಕ್ಷಾ ಚಾಲಕನಾಗಿದ್ದು, ಘಟನೆಗೆ ಸಂಬಂಧಿಸಿ ಆರೋಪಿ  ವಂಡಿಪ್ಪೆರಿಯಾರ್ ಮಂಜುಮಲ ನಿವಾಸಿ ರಾಜನ್ ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಈತನೂ ಆಟೋ ರಿಕ್ಷಾ ಚಾಲಕನಾಗಿದ್ದಾನೆ. ಉತ್ಸವ  ಸ್ಥಳದಲ್ಲಿ ಈ ಇಬ್ಬರೊಳಗೆ   ವಾಗ್ವಾದ ನಡೆದಿತ್ತು. ಸ್ಥಳೀಯರು  ಮಧ್ಯೆ ಪ್ರವೇಶಿಸಿ ಸಮಾಧಾನಪಡಿಸಿದ್ದು ಆದರೆ ಅಲ್ಪ ಹೊತ್ತಿನ ಬಳಿಕ ಅವರೊಳಗೆ ಮತ್ತೆ  ವಾಗ್ವಾದ ನಡೆದು ರಾಜನ್ ಚಾಕು ತೆಗೆದು ಜಿತ್ತುವಿಗೆ ಇರಿದಿದ್ದಾರೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ಜಿತ್ತು ಮೃತಪಟ್ಟರು.

Leave a Reply

Your email address will not be published. Required fields are marked *

You cannot copy content of this page