ಚೆರ್ಕಳದಲ್ಲಿ ವಾಹನ ಅಪಘಾತ: ಕುಂಬಳೆಯ ವ್ಯಾಪಾರಿ ಮೃತ್ಯು; ನಾಡಿನಲ್ಲಿ ಶೋಕಸಾಗರ

ಕುಂಬಳೆ: ಚೆರ್ಕಳದಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ವಾಹನ ಅಪಘಾತದಲ್ಲಿ ಯುವ ವ್ಯಾಪಾರಿ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

ಮೊಗ್ರಾಲ್ ಕುಟ್ಟಿಯಾನ್ ವಳಪ್ಪ್ ಖುತ್ತುಬಿ  ನಗರದ ನಿವಾಸಿಯೂ ಕುಂಬಳೆಯಲ್ಲಿ ವ್ಯಾಪಾರಿಯಾಗಿರುವ ಕಬೀರ್ ಫಿದ (33) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ 1.45ರ ವೇಳೆ ಚೆರ್ಕಳ ಕೆ.ಕೆ.ಪುರದಲ್ಲಿ ನೂತನವಾಗಿ ನಿರ್ಮಿಸುವ ಆಸ್ಪತ್ರೆ ಸಮೀಪ ಸ್ಕೂಟರ್ ಹಾಗೂ ಕಾರು ಪರಸ್ಪರ ಢಿಕ್ಕಿ ಹೊಡೆದಿತ್ತು. ಕಬೀರ್ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದರು.  ಅಪಘಾತದಲ್ಲಿ ಗಂಭೀರ ಗಾಯಗೊಂಡ ಕಬೀರ್‌ರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿ, ಬಳಿಕ ಮಂಗಳೂರಿನ  ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ಅವರು ಮೃತಪಟ್ಟಿದ್ದರು.  ಕಬೀರ್ ಕುಂಬಳೆ ಮೀಪಿರಿ ಸೆಂಟರ್‌ನಲ್ಲಿ ಜವುಳಿ ವ್ಯಾಪಾರ ಮಳಿಗೆ ನಡೆಸುತ್ತಿದ್ದರು.

ದಿ| ಮಮ್ಮು-ಮರಿಯಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಫಾತಿಮ, ಮಕ್ಕಳಾದ ಇಸಾಬ್, ಹಾಸಿಂ, ಸಹೋದರ-ಸಹೋದರಿಯರಾದ ಅಬ್ದುಲ್ಲ, ಅಬ್ಬಾಸ್, ಬಶೀರ್,  ಸುಬೈದ, ಹಾಜಿರ, ಮಿಸ್ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ಇಂದು ಬೆಳಿಗ್ಗೆ ಮಡಿಮೊಗರು ಜುಮಾ ಮಸೀದಿ ಬಳಿ ನಡೆಸಲಾಯಿತು.

Leave a Reply

Your email address will not be published. Required fields are marked *

You cannot copy content of this page