ನಿದ್ರಿಸುತ್ತಿದ್ದ ಪುತ್ರನನ್ನು ಕಡಿದು ಕೊಲೆಗೈದ ತಂದೆ

ಕಲ್ಲಿಕೋಟೆ: ನಿದ್ರೆಯಲ್ಲಿದ್ದ ಪುತ್ರನನ್ನು ತಂದೆಯೋರ್ವ ಕಡಿದು ಕೊಲೆಗೈದ ಭೀಕರ ಕೃತ್ಯ ಕಲ್ಲಿಕೋಟೆಯ ಕೂಡರತ್ತಿ ಪಂಚಾಯ ತ್‌ನಲ್ಲಿ ನಡೆದಿದೆ.  ಚೆರಿಯಪುರ ಎಂಬಲ್ಲಿನ  ಬಿಜು ಎಂಬಾ ತ  ಪುತ್ರ ಕೃಸ್ಟಿ ಜೇಕಬ್ (24)ನನ್ನು  ಕಡಿದು ಕೊಲೆಗೈದಿದ್ದಾನೆ. ಇಂದು ಮುಂಜಾನೆ 1 ಗಂಟೆ ವೇಳೆ ಈ ಘಟನೆ ನಡೆದಿದೆ. ಮನೆಯಿಂದ ಬೊಬ್ಬೆ ಕೇಳಿ ಸ್ಥಳೀಯರು ಅಲ್ಲಿಗೆ ತಲುಪಿದಾಗ ಕೃಸ್ಟಿ ಜೇಕಬ್ ಇರಿತಕ್ಕೀಡಾಗಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಕುಟುಂಬ ಕಲಹವೇ ಕೊಲೆ ಕೃತ್ಯಕ್ಕೆ ಕಾರಣವೆಂದು ಪೊಲೀಸರು ತಿಳಿಸುತ್ತಿದ್ದಾರೆ. ಮದ ದಮಲಿನಲ್ಲಿ  ತಂದೆ-ಮಗನ ಮಧ್ಯೆ ನಿನ್ನೆ ರಾತ್ರಿ ಜಗಳ ನಡೆದಿತ್ತೆನ್ನಲಾಗಿದೆ.  ಅನಂತರ ನಿದ್ರಿಸುತ್ತಿದ್ದ ವೇಳೆ ಪುತ್ರನ ಮೇಲೆ ತಂದೆ  ಆಕ್ರಮಣ ನಡೆಸಿ ಕೊಲೆಗೈದಿದ್ದಾನೆ.   ಆರೋಪಿಯನ್ನು ಘಟನೆ ನಡೆದ ತಕ್ಷಣ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page