ನಿಯಂತ್ರಣ ತಪ್ಪಿದ ಟಿಪ್ಪರ್ಲಾರಿಯಿಂದ ಹಾರಿದ ಚಾಲಕ ಲಾರಿಯಡಿ ಸಿಲುಕಿ ಮೃತ್ಯು: ಪೊಲೀಸರು ಹಿಂಬಾಲಿಸಿರುವುದಾಗಿ ಆರೋಪ
ಬದಿಯಡ್ಕ: ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯಿಂದ ಹಾರಿ ಅಪಾಯದಿಂದ ಪಾರಾಗಲು ಯತ್ನಿಸಿದ ಚಾಲಕ ಅದೇ ಲಾರಿ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಆದರೆ ಪೊಲೀಸರು ಹಿಂಬಾಲಿಸಿ ರುವುದೇ ಲಾರಿ ಅಪಘಾತಕ್ಕೀ ಡಾಗಲು ಕಾರಣವೆಂದು ನಾಗರಿಕರು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.
ಚೆರ್ಲಡ್ಕ ಎದುರ್ತೋಡಿನ ಅಸ್ಮಿಯ ಮಂಜಿಲ್ನ ಅಬ್ದುಲ್ ರಹ್ಮಾನ್-ಆಯಿಶಾ ದಂಪತಿಯ ಪುತ್ರ ನೌಫಲ್ (೨೪) ಎಂಬವರು ಮೃತಪಟ್ಟ ವ್ಯಕ್ತಿ. ಇಂದು ಮುಂಜಾನೆ ಒಂದು ಗಂಟೆ ವೇಳೆ ಬದಿಯಡ್ಕ ಗೋಳಿಯಡ್ಕದಲ್ಲಿ ಅಪಘಾತ ಸಂಭವಿಸಿದೆ.
ಹೊಯ್ಗೆ ಹೇರಿದ ಲಾರಿ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿರುವುದಾಗಿ ಸಂಶಯಿಸ ಲಾಗುತ್ತಿದೆ. ಪಂಚಾಯತ್ ಸದಸ್ಯ ಹಾಗೂ ಸಿಪಿಎಂ ನೇತಾರನಾದ ರವಿ ಕುಮಾರ್ರ ಮನೆ ಆವರಣ ಗೋಡೆಯ ಗೇಟ್ನ ಸಮೀಪಕ್ಕೆ ತಲುಪಿದಾಗ ಅಲ್ಲಿದ್ದ ಮಣ್ಣಿನ ದಿಬ್ಬಕ್ಕೆ ಢಿಕ್ಕಿ ಹೊಡೆಯುವುದರ ಮುಂಚೆ ನೌಫಲ್ ಹೊರಕ್ಕೆ ಎಸೆಯಲ್ಪಟ್ಟಿ ರುವುದಾಗಿ ಸಂಶಯಿಸಲಾಗುತ್ತಿದೆ. ಅಪಘಾತದ ಶಬ್ದ ಕೇಳಿದ ರವಿ ಕುಮಾರ್ ತಲುಪಿ ನೋಡಿದಾಗಲೇ ಘಟನೆ ಅರಿವಿಗೆ ಬಂದಿದೆ. ಕೂಡಲೇ ಆ ಬಗ್ಗೆ ಬದಿಯಡ್ಕ ಪೊಲೀಸರಿಗೆ ತಿಳಿಸಿರುವುದಾಗಿ ಹೇಳಲಾಗುತ್ತಿದೆ. ಅಪಘಾತ ವಿಷಯ ತಿಳಿದು ತಲುಪಿದವರು ಗಂಭೀರವಾಗಿ ಗಾಯಗೊಂಡ ನೌಫಲ್ರನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಆದರೆ ಜೀವ ರಕ್ಷಿಸಲಾಗಲಿಲ್ಲ. ಮೃತರು ಸಹೋದರ-ಸಹೋದರಿಯರಾದ ನಾಸರ್, ಮುನೀರ್, ಲತೀಫ್, ಅಸ್ಮಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಇದೇ ವೇಳೆ ಟಿಪ್ಪರ್ ಲಾರಿಯನ್ನು ಎಸ್ಐ ಹಾಗೂ ತಂಡ ಹಿಂಬಾಲಿಸಿದುದರಿಂದ ಅಪಘಾತ ಸಂಭವಿಸಿರುವುದಾಗಿ ನಾಗರಿಕರು ಹಾಗೂ ಸಂಬಂಧಿಕರು ಆರೋಪಿಸುತ್ತಿ ದ್ದಾರೆ. ಆದರೆ ಆರೋಪಕ್ಕೆಡೆಯಾದ ಎಸ್ಐ ಹಾಗೂ ತಂಡ ಅಪಘಾತ ಸಂಭವಿಸುವ ಸಮಯದಲ್ಲಿ ಕುಂಬಳೆ ಭಾಗದಲ್ಲಿದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲು ಪಿಸಲಾಗಿದೆ.