ಪೈವಳಿಕೆ ಸಹಕಾರಿ ಬ್ಯಾಂಕ್ನ ಮಾಜಿ ಕಾರ್ಯದರ್ಶಿ ನಿಧನ
ಉಪ್ಪಳ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ನ ಮಾಜಿ ಕಾರ್ಯದರ್ಶಿ ಪೈವಳಿಕೆ ನಿವಾಸಿ ಪರಮೇಶ್ವರ (71) ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನರಾದರು. ಇವರು ಸಿಪಿಐಯ ಸಕ್ರಿಯ ಕಾರ್ಯಕರ್ತ ನಾಗಿದ್ದರು.
ಮೃತರು ಪತ್ನಿ ಸುಗುಣ, ಮಕ್ಕಳಾದ ನವೀನ್ ಕುಮಾರ್, ಪ್ರವೀಣ್ ಕುಮಾರ್, ಸೊಸೆಯಂದಿ ರಾದ ಸೌಮ್ಯ, ಶಿಲ್ಪ, ಸಹೋದರ-ಸಹೋದರಿಯರಾದ ಕೃಷ್ಣ, ರಮೇಶ, ರತ್ನ, ಭವಾನಿ, ಲಕ್ಷ್ಮಿ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ದಿವಂಗತರಾದ ಕೋಚು ಸಾಲಿಯಾನ್-ದೇವಕಿ ದಂಪತಿಯ ಪುತ್ರನಾದ ಇವರ ಓರ್ವ ಸಹೋದರ ಅಶೋಕ ಈ ಹಿಂದೆ ನಿಧನಹೊಂದಿದ್ದಾರೆ. ಮೃತರ ಮನೆಗೆ ಸಿಪಿಐ ನೇತಾರರು, ಕಾರ್ಯಕರ್ತರು, ಹಿತೈಷಿಗಳ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಿಧನಕ್ಕೆ ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ನ ಆಡಳಿತ ಮಂಡಳಿ,ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದೆ.