ಬದಿಯಡ್ಕ ಸಮೀಪ ಮೂರು ಮನೆಗಳಿಗೆ ನುಗ್ಗಿದ ಕಳ್ಳರು : ಒಂದು ಮನೆಯಿಂದ 15 ಪವನ್ ಚಿನ್ನಾಭರಣ ಕಳವು

ಬದಿಯಡ್ಕ: ಬದಿಯಡ್ಕ ಸಮೀಪ ನಿನ್ನೆ ರಾತ್ರಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು  15  ಪವನ್ ಚಿನ್ನಾಭರಣಗಳನ್ನು ದೋಚಿದ್ದಾರೆ. ಅಲ್ಲದೆ ಸಮೀಪದಲ್ಲೇ ಇರುವ ಮತ್ತೆರಡು ಮನೆಗಳಿಗೂ ಕಳ್ಳರು ನುಗ್ಗಿದ್ದಾರೆ.  ಆದರೆ ಆ ಮನೆಗಳಿಂದ ಯಾವೆಲ್ಲ ಸೊತ್ತುಗಳು  ಕಳವಿಗೀಡಾಗಿ ವೆಯೆಂದು  ತಿಳಿದುಬಂದಿಲ್ಲ.

ಬದಿಯಡ್ಕ ಬಳಿಯ ಚೇಡಿಕ್ಕಾನದ ಮೊಹಮ್ಮದ್ ಶಾಫಿ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಯ ಅಡುಗೆ ಕೋಣೆ ಭಾಗದ ಬಾಗಿಲು ತೆರೆದು ಒಳನುಗ್ಗಿದ ಕಳ್ಳರು ಕೊಠಡಿಗಳಿಗೆ ನುಗ್ಗಿ ನಾಲ್ಕು ಕಪಾಟುಗಳನ್ನು ತೆರೆದು ಅದರಲ್ಲಿದ್ದ 15 ಪವನ್ ಚಿನ್ನಾ ಭರಣಗಳನ್ನು ದೋಚಿ ಪರಾರಿ ಯಾಗಿದ್ದಾರೆ.  ಮೊಹಮ್ಮದ್ ಶಾಫಿ ಹಾಗೂ ಕುಟುಂಬ ನಿನ್ನೆ ಸಂಬಂಧಿಕರ ಮನೆಗೆ ತೆರಳಿದ್ದು, ಇಂದು  ಬೆಳಿಗ್ಗೆ ಮರಳಿ ಬಂದಾಗಲೇ  ಮನೆಯಲ್ಲಿ ಕಳವು ನಡೆದ ವಿಷಯ ಅರಿವಿಗೆ ಬಂದಿದೆ.  ಇವರ ಮನೆಯ  ಸಮೀಪದಲ್ಲೇ ಇರುವ ಮತ್ತೆರಡು ಮನೆಗಳಿಗೂ ಕಳ್ಳರು ನುಗ್ಗಿದ್ದಾರೆ. ಮೊಹಮ್ಮದ್ ಕಲಂದರ್ ಹಾಗೂ ಅಬ್ದುಲ್ ಖಾದರ್ ಎಂಬಿವರ ಮನೆಗಳಿಗೆ ಕಳ್ಳರು ನುಗ್ಗಿರುವುದಾಗಿ  ಹೇಳಲಾಗುತ್ತಿದೆ.  ಈ ಮನೆಗಳಿಗೆ ಬೀಗ ಜಡಿದು ಕುಟುಂಬ ಸದಸ್ಯರು ಗಲ್ಫ್‌ಗೆ ತೆರಳಿದ್ದಾರೆ.  ಆದ್ದರಿಂದ ಈ ಮನೆಗಳಿಂದ  ಕಳವಿಗೀಡಾದ ಸೊತ್ತುಗಳ ಕುರಿತು ತಿಳಿದುಬಂದಿಲ್ಲ.  ಮೊಹಮ್ಮದ್ ಶಾಫಿಯವರು ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಸ್ಥಳಕ್ಕೆ ತಲುಪಿ  ತನಿಖೆ ಆರಂಭಿಸಿದ್ದಾರೆ.

You cannot copy contents of this page